ಬಲಿಷ್ಠ ಕಾಂಗ್ರೆಸ್ ತೆಲಂಗಾಣ ರಾಜ್ಯಕ್ಕೆ ಲಾಭದಾಯಕ: ಸಚಿವ ದಿನೇಶ್ ಗುಂಡೂರಾವ್

ತೆಲಂಗಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಕರ್ನಾಟಕದ ಸಚಿವ ದಿನೇಶ್ ಗುಂಡೂರಾವ್ ಅವರು, ಬಲಿಷ್ಠವಾದ ಕಾಂಗ್ರೆಸ್ ದೇಶ ಮತ್ತು ತೆಲಂಗಾಣಕ್ಕೆ ಲಾಭದಾಯಕ ಎಂದು ಮಂಗಳವಾರ ಹೇಳಿದ್ದಾರೆ.
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್

ಹೈದರಾಬಾದ್: ತೆಲಂಗಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಕರ್ನಾಟಕದ ಸಚಿವ ದಿನೇಶ್ ಗುಂಡೂರಾವ್ ಅವರು, ಬಲಿಷ್ಠವಾದ ಕಾಂಗ್ರೆಸ್ ದೇಶ ಮತ್ತು ತೆಲಂಗಾಣಕ್ಕೆ ಲಾಭದಾಯಕ ಎಂದು ಮಂಗಳವಾರ ಹೇಳಿದ್ದಾರೆ.

ಬಲಿಷ್ಠವಾದ ಕಾಂಗ್ರೆಸ್ ದೇಶ, ತೆಲಂಗಾಣ ಮತ್ತು ಇತರ ರಾಜ್ಯಗಳಿಗೆ ಸಹಾಯ ಮಾಡುತ್ತದೆ. ತೆಲಂಗಾಣ ರಾಜ್ಯ ರಚನೆಯಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿದೆ. ತೆಲಂಗಾಣ ರಾಜ್ಯಕ್ಕೆ ಜನ್ಮ ನೀಡಿರುವುದೇ ಕಾಂಗ್ರೆಸ್ ಜನಸೇವೆ ಮಾಡಲು ಎಂದು ಇಲ್ಲಿ ಹೇಳಿದರು.

'ತೆಲಂಗಾಣದ ಸಂಪೂರ್ಣ ಆಡಳಿತ ಯಂತ್ರವು ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಕುಟುಂಬದ ಹಿಡಿತದಲ್ಲಿದೆ. ಕಳೆದ 10 ವರ್ಷಗಳಲ್ಲಿ ರಾಜ್ಯದ ಸಂಪೂರ್ಣ ಆಡಳಿತ ಯಂತ್ರ ಒಂದು ಕುಟುಂಬದ ಕೈಗೆ ಹೋಗಿದೆ. ಪ್ರಮುಖ ಖಾತೆಗಳು ಅವರ ಕೈಯಲ್ಲಿವೆ. ತೆಲಂಗಾಣ ಒಂದು ಕಾಲದಲ್ಲಿ ಹೆಚ್ಚು ಆದಾಯ ಹೊಂದಿದ್ದ ರಾಜ್ಯವಾಗಿತ್ತು. ಆದರೆ, ಆ ಆದಾಯವು ಕುಟುಂಬದ (ಕೆಸಿಆರ್) ಜೇಬಿಗೆ ಹೋಗಿದೆ. ಇಂದು ತೆಲಂಗಾಣ ಆದಾಯ ಕೊರತೆಯನ್ನು ಎದುರಿಸುತ್ತಿರುವ ರಾಜ್ಯವಾಗಿದೆ' ಎಂದು ದೂರಿದರು.

ಕಾಂಗ್ರೆಸ್ ಕರ್ನಾಟಕದ ಜನತೆಗೆ ನೀಡಿದ ಚುನಾವಣಾ ಭರವಸೆಗಳಲ್ಲಿ ಒಂದನ್ನು ಹೊರತುಪಡಿಸಿ ಉಳಿದ ಎಲ್ಲವನ್ನು ಜಾರಿಗೊಳಿಸಿದೆ. ಚುನಾವಣೆಯ ಸಮಯದಲ್ಲಿ ಬಿಜೆಪಿ ಜನರನ್ನು ದಾರಿ ತಪ್ಪಿಸುತ್ತಿದೆ. ನಾವು ಅಧಿಕಾರಕ್ಕೆ ಬಂದ ನಂತರ ಭರವಸೆ ನೀಡಿದ್ದವುಗಳನ್ನು ಜಾರಿಗೊಳಿಸಿಲ್ಲ ಎಂದು ಪ್ರತಿಪಕ್ಷಗಳು ಹೇಳಿವೆ. ಇಂದು, ಒಂದನ್ನು ಹೊರತುಪಡಿಸಿ, ನಾವು ಭರವಸೆ ನೀಡಿದಂತೆ ಎಲ್ಲಾ ಚುನಾವಣಾ ಖಾತರಿಗಳನ್ನು ಜಾರಿಗೊಳಿಸಿದ್ದೇವೆ' ಎಂದು ಗುಂಡೂರಾವ್ ಹೇಳಿದರು.

ತೆಲಂಗಾಣದಲ್ಲಿ ನವೆಂಬರ್ 30 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಇತರ ನಾಲ್ಕು ರಾಜ್ಯಗಳ ಮತ ಎಣಿಕೆಯೊಂದಿಗೆ ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ. ರಾಜ್ಯದಲ್ಲಿ ಬಿಜೆಪಿ, ಬಿಆರ್‌ಎಸ್ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com