ಕಾವೇರಿ ವಿವಾದ: ಪರಸ್ಪರ ಮಾತುಕತೆ ಮೂಲಕ ಮಾತ್ರ ಪರಿಹರಿಸಲು ಸಾಧ್ಯ- ಹೆಚ್. ಡಿ. ದೇವೇಗೌಡ
ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ಜಲ ವಿವಾದವನ್ನು ಕಾನೂನಾತ್ಮಕವಾಗಿ ಬಗೆಹರಿಸಲು ಸಾಧ್ಯವಿಲ್ಲ ಎಂದಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ದಶಕಗಳಷ್ಟು ಹಳೆಯದಾದ ಸಮಸ್ಯೆಯನ್ನು ಉಭಯ ರಾಜ್ಯಗಳು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
Published: 19th September 2023 01:05 AM | Last Updated: 19th September 2023 01:06 AM | A+A A-

ಹೆಚ್ ಡಿ ದೇವೇಗೌಡ
ನವದೆಹಲಿ: ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ಜಲ ವಿವಾದವನ್ನು ಕಾನೂನಾತ್ಮಕವಾಗಿ ಬಗೆಹರಿಸಲು ಸಾಧ್ಯವಿಲ್ಲ ಎಂದಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ದಶಕಗಳಷ್ಟು ಹಳೆಯದಾದ ಸಮಸ್ಯೆಯನ್ನು ಉಭಯ ರಾಜ್ಯಗಳು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ರಾಜ್ಯಸಭೆಯಲ್ಲಿ 'ಸಂವಿಧಾನ ಸಭೆಯಿಂದ ಆರಂಭವಾದ 75 ವರ್ಷಗಳ ಸಂಸತ್ತಿನ ಪಯಣ-- ಸಾಧನೆ, ಅನುಭವ, ನೆನಪುಗಳು ಮತ್ತು ಕಲಿಕೆ' ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಗೌಡರು, ಭಾನುವಾರ ನಡೆದ ಸರ್ವಪಕ್ಷ ಸಭೆಯಲ್ಲಿ .ನೆರೆಯ ರಾಜ್ಯದ ಕೆಲವು ಗೆಳೆಯರು ಕಾವೇರಿ ಸಮಸ್ಯೆಯನ್ನು ಪ್ರಸ್ತಾಪಿಸಿದ್ದಾರೆ. ಕಳೆದ 60 ವರ್ಷಗಳಿಂದ ಈ ಸಮಸ್ಯೆ ಇದ್ದು, ಕಾನೂನಾತ್ಮಕವಾಗಿ ಬಗೆಹರಿಯುವುದಿಲ್ಲ ಎಂದರು.
ಇದನ್ನೂ ಓದಿ: ಕಾವೇರಿ ವಿವಾದ: ಆಯಾ ರಾಜ್ಯಗಳ ಜಂಟಿ ಸಮಿತಿ ರಚಿಸುವುದಾಗಿ ಕೇಂದ್ರ ಜಲಶಕ್ತಿ ಸಚಿವರು ಭರವಸೆ-ಸುಮಲತಾ ಅಂಬರೀಶ್
"ನಮ್ಮ ಸ್ನೇಹಿತರು ಸುಗಮ ರೀತಿಯ ಸಮಸ್ಯೆ ಪರಿಹರಿಸಲು ಬಯಸಿದರೆ, ನಾವೆಲ್ಲರೂ ಒಟ್ಟಿಗೆ ಕುಳಿತು ಸಮಸ್ಯೆ ಬಗೆಹರಿಸೋಣ ಇಲ್ಲದಿದ್ದರೆ ವಿವಾದ ಮುಂದುವರಿಯುತ್ತದೆ ಮತ್ತು ಎರಡೂ ಕಡೆಯಿಂದ ಹೋರಾಟ ಮುಂದುವರಿಯುತ್ತದೆ. ನಾವು ಒಟ್ಟಿಗೆ ಕುಳಿತು ಬಿಕ್ಕಟ್ಟು ಬಗೆಹರಿಸಲು ಪ್ರಯತ್ನಿಸದ ಹೊರತು ಈ ಸಮಸ್ಯೆಯನ್ನು ಪರಿಹರಿಸಲಾಗದು, ಕಾನೂನಾತ್ಮಕವಾಗಿ ಖಂಡಿತವಾಗಿಯೂ ವಿವಾದ ಬಗೆಹರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ಮಳೆಯಿಲ್ಲದೆ ಬರ ಪರಿಸ್ಥಿತಿಯಿರುವುದರಿಂದ ಸಂಕಷ್ಟದಲ್ಲಿರುವ ಜನರ ಪರ ನಿಂತಿದ್ದೇನೆ. “ಕರ್ನಾಟಕ ಅಥವಾ ತಮಿಳುನಾಡಿಗೆ ಸೇರದ ಈ ಸದನದ ಎರಡೂ ಕಡೆಯ ಐವರು ಸದಸ್ಯರನ್ನು ನೀವು ( ರಾಜ್ಯಸಭಾ ಸದಸ್ಯ ಜಗದೀಪ್ ಧನಕರ್) ನಿಯೋಜಿಸಿ, ಅವರು ಹೋಗಿ ಜನರ ಸ್ಥಿತಿ ಏನಾಗಿದೆ ಎಂಬುದನ್ನು ನೋಡಿ ನಂತರ ಈ ಸದನಕ್ಕೆ ವರದಿ ಮಾಡಲಿ, ನಾನು ಒಪ್ಪಿಕೊಳ್ಳುತ್ತೇನೆ. ಅನಾವಶ್ಯಕವಾಗಿ ಜಗಳ ಮಾಡಿಕೊಳ್ಳುವುದು ಬೇಡ ಎಂದರು.