'ಸಂಪೂರ್ಣ ದುರಾಡಳಿತ': ಪಶ್ಚಿಮ ಬಂಗಾಳ ರೈಲು ಅಪಘಾತದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

ಕನಿಷ್ಟ 15 ಮಂದಿಯ ಸಾವಿಗೆ ಕಾರಣವಾಗಿರುವ ಪಶ್ಚಿಮ ಬಂಗಾಳ ರೈಲು ಅಪಘಾತದ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 'ಸಂಪೂರ್ಣ ದುರಾಡಳಿತ' ಎಂದು ಕಿಡಿಕಾರಿದ್ದಾರೆ.
West Bengal train accident
ಬಂಗಾಳ ರೈಲು ದುರಂತ
Updated on

ನವದೆಹಲಿ: ಕನಿಷ್ಟ 15 ಮಂದಿಯ ಸಾವಿಗೆ ಕಾರಣವಾಗಿರುವ ಪಶ್ಚಿಮ ಬಂಗಾಳ ರೈಲು ಅಪಘಾತದ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 'ಸಂಪೂರ್ಣ ದುರಾಡಳಿತ' ಎಂದು ಕಿಡಿಕಾರಿದ್ದಾರೆ.

ಪಶ್ಚಿಮ ಬಂಗಾಳದ ಸಿಲ್ಗುರಿಯಲ್ಲಿ ನಡೆದ ಗೂಡ್ಸ್ ರೈಲು ಮತ್ತು ಕಾಂಚನ್ ಜುಂಗಾ ಎಕ್ಸ್ ಪ್ರೆಸ್ ರೈಲು ಅಪಘಾತದಲ್ಲಿ ಕನಿಷ್ಟ 15 ಮಂದಿ ಸಾವಿಗೀಡಾಗಿದ್ದು, 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದೇ ವಿಚಾರವಾಗಿ ಇಂದು ಟ್ವೀಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ ರೈಲು ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದರು. ಅಂತೆಯೇ ಕೇಂದ್ರ ರೈಲ್ವೇ ಇಲಾಖೆ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಖರ್ಗೆ "ಸಂಪೂರ್ಣ ದುರಾಡಳಿತ" ಎಂದು ವಾಗ್ದಾಳಿ ನಡೆಸಿದರು.

West Bengal train accident
ಪಶ್ಚಿಮ ಬಂಗಾಳ: ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ; 15 ಮಂದಿ ದುರ್ಮರಣ, 60 ಜನರಿಗೆ ಗಾಯ

"ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲು ಅಪಘಾತದಿಂದ ತೀವ್ರ ದುಃಖಿತವಾಗಿದೆ, ಅಲ್ಲಿ ಅನೇಕ ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ. ಅಪಘಾತದ ದೃಶ್ಯಗಳು ಭಯಾನಕವಾಗಿದೆ. ಅಪಘಾತದ ಸಂತ್ರಸ್ಥರೊಂದಿಗೆ ನಾವಿದ್ದು, ಅಗತ್ಯ ನೆರವು ನೀಡುತ್ತೇವೆ. ಈ ದುಃಖದ ಸಮಯದಲ್ಲಿ, ನಾವು ಪ್ರತಿಯೊಬ್ಬರಿಗೂ ನಮ್ಮ ಒಗ್ಗಟ್ಟು ಮತ್ತು ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಬಯಸುತ್ತೇವೆ. ತಕ್ಷಣವೇ ಮತ್ತು ಪೂರ್ಣ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

West Bengal train accident
ಬಂಗಾಳದಲ್ಲಿ ರೈಲು ಅಪಘಾತ: ಬೆಳಿಗ್ಗೆ 5:50 ರಿಂದಲೇ ಸಿಗ್ನಲ್ ದೋಷಪೂರಿತ!

ಇದೇ ವೇಳೆ ಮೋದಿ ಸರ್ಕಾರದ ವಿರುದ್ಧ ಗುಡುಗಿದ ಖರ್ಗೆ, ''ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರ ರೈಲ್ವೆ ಸಚಿವಾಲಯ ಸಂಪೂರ್ಣ ದುರಾಡಳಿತದಲ್ಲಿ ತೊಡಗಿದೆ. ಜವಾಬ್ದಾರಿಯುತ ಪ್ರತಿಪಕ್ಷವಾಗಿ, ಮೋದಿ ಸರ್ಕಾರವು ರೈಲ್ವೆ ಸಚಿವಾಲಯವನ್ನು "ಕ್ಯಾಮೆರಾ-ಚಾಲಿತ" ಸ್ವಯಂ ಪ್ರಚಾರದ ವೇದಿಕೆಯಾಗಿ ಹೇಗೆ ವ್ಯವಸ್ಥಿತವಾಗಿ ಪರಿವರ್ತಿಸಿದೆ ಎಂಬುದನ್ನು ಒತ್ತಿಹೇಳುವುದು ನಮ್ಮ ಬದ್ಧ ಕರ್ತವ್ಯವಾಗಿದೆ. ಇಂದಿನ ದುರಂತವು ಈ ಕಟುವಾದ ವಾಸ್ತವದ ಮತ್ತೊಂದು ಜ್ಞಾಪನೆಯಾಗಿದೆ" ಎಂದು ಅವರು ಆರೋಪಿಸಿದರು.

ಈ ಅಪಘಾತಕ್ಕೆ ಸಂಪೂರ್ಣವಾಗಿ ಮೋದಿ ಸರ್ಕಾರವೇ ಹೊಣೆ ಎಂದು ಆರೋಪಿಸಿದ ಖರ್ಗೆ, ಭಾರತೀಯ ರೈಲ್ವೆ ಇಲಾಖೆಯನ್ನು ಕ್ರಿಮಿನಲ್ ಗಳ ಕೈಗೆ ನೀಡಿದ್ದಾರೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ಸೋಮವಾರ ಪಶ್ಚಿಮ ಬಂಗಾಳದ ರಂಗಪಾಣಿ ನಿಲ್ದಾಣದ ಬಳಿ ಸೀಲ್ದಾಹ್ ಕಡೆಗೆ ಹೋಗುವ ಕಾಂಚನಜುಂಗಾ ಎಕ್ಸ್‌ಪ್ರೆಸ್‌ ರೈಲಿಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 60 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com