ಪಾಟ್ನಾ: ಶಾಲೆ ಪಕ್ಕದ ಚರಂಡಿಯಲ್ಲಿ 4 ವರ್ಷದ ವಿದ್ಯಾರ್ಥಿಯ ಶವ ಪತ್ತೆ, ಉದ್ರಿಕ್ತ ಗುಂಪಿನಿಂದ ಶಾಲೆಗೆ ಬೆಂಕಿ

ನಾಲ್ಕು ವರ್ಷದ ಮಗುವಿನ ಹತ್ಯೆಯ ನಂತರ ಜನರಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸಿಟ್ಟಿಗೆದ್ದ ಜನರು ಟೈನಿ ಟಾಟ್ ಶಾಲೆಗೆ ಬೆಂಕಿ ಹಚ್ಚಿದ್ದಾರೆ. ಮಾಹಿತಿ ಪ್ರಕಾರ ಪಾಲ್ಸನ್ ನಿವಾಸಿ ಶೈಲೇಂದ್ರ ರೈ ಅವರ ಪುತ್ರ ಆಯುಷ್ ಕುಮಾರ್ ನಿನ್ನೆ ಶಾಲೆಗೆ ಹೋಗಿದ್ದರು.
ವಿದ್ಯಾರ್ಥಿ ಆಯುಷ್ ಮೃತದೇಹ ಪತ್ತೆ
ವಿದ್ಯಾರ್ಥಿ ಆಯುಷ್ ಮೃತದೇಹ ಪತ್ತೆ
Updated on

ಪಾಟ್ನಾ: ನಾಲ್ಕು ವರ್ಷದ ಮಗುವಿನ ಹತ್ಯೆಯ ನಂತರ ಜನರಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸಿಟ್ಟಿಗೆದ್ದ ಜನರು ಟೈನಿ ಟಾಟ್ ಶಾಲೆಗೆ ಬೆಂಕಿ ಹಚ್ಚಿದ್ದಾರೆ. ಮಾಹಿತಿ ಪ್ರಕಾರ ಪಾಲ್ಸನ್ ನಿವಾಸಿ ಶೈಲೇಂದ್ರ ರೈ ಅವರ ಪುತ್ರ ಆಯುಷ್ ಕುಮಾರ್ ನಿನ್ನೆ ಶಾಲೆಗೆ ಹೋಗಿದ್ದನು.

ತರಗತಿಗಳು ಮುಗಿದ ನಂತರ ವಿದ್ಯಾರ್ಥಿಯೂ ಅದೇ ಶಾಲೆಯಲ್ಲಿ ಟ್ಯೂಷನ್ ತೆಗೆದುಕೊಂಡರು. ಆದರೆ ನಿನ್ನೆ ಸಂಜೆ ಮಗು ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದ್ದರು. ಸಾಕಷ್ಟು ಹುಡುಕಾಟದ ಬಳಿಕ ಮಧ್ಯಾಹ್ನ 3 ಗಂಟೆ ಸುಮಾರಿಗೆ ಶಾಲೆಯ ಬಳಿಯ ಚರಂಡಿಯಿಂದ ಮಗುವಿನ ಮೃತದೇಹ ಪತ್ತೆಯಾಗಿದೆ. ಇದು ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನು ವಿರೋಧಿಸಿ ಸ್ಥಳೀಯರು ಬೆಳಗ್ಗೆ ರಸ್ತೆ ತಡೆ ನಡೆಸಿ ಶಾಲೆಗೆ ಬೆಂಕಿ ಹಚ್ಚಿದರು. ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಘಟನಾ ಸ್ಥಳದಲ್ಲಿ ಪಾಟ್ನಾ ನಗರ ಎಸ್ಪಿ ಚಂದ್ರಪ್ರಕಾಶ್ ಮತ್ತು ಡಿಎಸ್ಪಿ, ದಿಘಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಾಲ್ಸನ್ ರಸ್ತೆಯಲ್ಲಿ ಪೊಲೀಸರ ಕೊರತೆಯಿಂದಾಗಿ ಅರಾಜಕತೆಯ ಪರಿಸ್ಥಿತಿ ಎದುರಾಗಿದ್ದು ಆಂಬ್ಯುಲೆನ್ಸ್ ಕೂಡ ಹೋಗಲು ಬಿಡುತ್ತಿಲ್ಲ.

ಪ್ರತಿಭಟನಾಕಾರರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೂ ಹಲ್ಲೆ ಮಾಡಿದ್ದಾರೆ. ಇಡೀ ಪ್ರದೇಶದಲ್ಲಿ ಇನ್ನೂ ಉದ್ವಿಗ್ನ ಪರಿಸ್ಥಿತಿ ಇದೆ. ಆದರೆ, ಕೊಲೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಅಷ್ಟಕ್ಕೂ 4 ವರ್ಷದ ಅಮಾಯಕ ಆಯುಷ್ ನನ್ನು ಯಾವ ಕಾರಣಕ್ಕೆ ಹತ್ಯೆ ಮಾಡಲಾಗಿದೆ? 4 ವರ್ಷದ ಆಯುಷ್ ಕುಮಾರ್ ಶವ ಶಾಲಾ ಡ್ರೆಸ್ ನಲ್ಲಿ ಚರಂಡಿಯಲ್ಲಿ ಪತ್ತೆಯಾಗಿದೆ. ಸದ್ಯ ಪೊಲೀಸರು ಪ್ರಕರಣದ ತನಿಖೆಯಲ್ಲಿ ನಿರತರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com