'ಅಮಾಯಕರ ಕೊಲ್ಲುವವರು ಮನುಷ್ಯರೇ ಅಲ್ಲ.. ಆದರೆ...': Pahalgam Terror Attack ಕುರಿತು Jamiat ಮುಖ್ಯಸ್ಥ Maulana Arshad Madani ಆಕ್ರೋಶ

ಪಹಲ್ಗಾಮ್ ಮೇಲೆ ದಾಳಿ ಮಾಡಿದ ಭಯೋತ್ಪಾದಕರು ಇಸ್ಲಾಂ ಬಗ್ಗೆ ಏನೂ ತಿಳಿದಿಲ್ಲ. ಇಸ್ಲಾಂ ಅಮಾಯಕ ಜನರನ್ನು ಕೊಲ್ಲಲು ಇಸ್ಲಾಂ ಅನುಮತಿಸುವುದಿಲ್ಲ. ಇದು ಗಂಭೀರ ಪಾಪ.
Jamiat chief Maulana Arshad Madani
ಜಮಿಯತ್ ಮುಖ್ಯಸ್ಥ ಮೌಲಾನಾ ಅರ್ಷದ್ ಮದನಿ
Updated on

ನವದೆಹಲಿ: ಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಮಂದಿಯ ಸಾವಿಗೆ ಕಾರಣವಾದ ಉಗ್ರ ದಾಳಿಯನ್ನು ಇದೇ ಮೊದಲ ಬಾರಿಗೆ ಜಮಿಯತ್ ಮುಖ್ಯಸ್ಥ ಮೌಲಾನಾ ಅರ್ಷದ್ ಮದನಿ ಖಂಡಿಸಿದ್ದು, ಅಮಾಯಕರ ಕೊಲ್ಲುವ ಉಗ್ರಗಾಮಿಗಳು ಮನುಷ್ಯರೇ ಅಲ್ಲ ಎಂದು ಕಿಡಿಕಾರಿದ್ದಾರೆ.

ಜಮಿಯತ್ (ಅರ್ಷದ್ ಮದನಿ ಬಣದ) ಎರಡು ದಿನಗಳ ಕಾರ್ಯಕಾರಿ ಸಮಿತಿ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೌಲಾನಾ ಅರ್ಷದ್ ಮದನಿ, 'ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಕೊಂದ ಭಯೋತ್ಪಾದಕರನ್ನು ಮನುಷ್ಯರೆಂದು ಪರಿಗಣಿಸಲಾಗುವುದಿಲ್ಲ, ಆದರೆ ಈ ಸಂದರ್ಭದಲ್ಲಿ ಇಡೀ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡಿರುವುದು ತಪ್ಪು ಎಂದು ಹೇಳಿದರು.

ಪಹಲ್ಗಾಮ್ ಮೇಲೆ ದಾಳಿ ಮಾಡಿದ ಭಯೋತ್ಪಾದಕರು ಇಸ್ಲಾಂ ಬಗ್ಗೆ ಏನೂ ತಿಳಿದಿಲ್ಲ. ಇಸ್ಲಾಂ ಅಮಾಯಕ ಜನರನ್ನು ಕೊಲ್ಲಲು ಇಸ್ಲಾಂ ಅನುಮತಿಸುವುದಿಲ್ಲ. ಇದು ಗಂಭೀರ ಪಾಪ. ಅಂತಹ ಕೃತ್ಯಗಳನ್ನು ಮಾಡುವವರನ್ನು ಮನುಷ್ಯರೆಂದು ಪರಿಗಣಿಸಲಾಗುವುದಿಲ್ಲ. ಪಹಲ್ಗಾಮ್ ದಾಳಿಯ ನಂತರ ದೇಶಾದ್ಯಂತ ಮುಸ್ಲಿಮರನ್ನು, ವಿಶೇಷವಾಗಿ ಕಾಶ್ಮೀರಿಗಳನ್ನು ಗುರಿಯಾಗಿಸಲಾಗುತ್ತಿದೆ ಮತ್ತು ಇದು ಸರ್ಕಾರದ ದ್ವೇಷ ನೀತಿಯಿಂದಾಗಿ ದ್ವೇಷಭಾವನೆ ಹೆಚ್ಚುತ್ತಿದೆ ಎಂದು ಅವರು ಆರೋಪಿಸಿದರು.

Jamiat chief Maulana Arshad Madani
Pahalgam terror attack: 'ಮುಸ್ಲಿಮರು-ಕಾಶ್ಮೀರಿಗಳ ವಿರುದ್ಧ ದ್ವೇಷ ಬೇಡ' ಎಂದ ನೌಕಾಪಡೆ ಅಧಿಕಾರಿ ಪತ್ನಿ ಟ್ರೋಲ್; NCW ಕಿಡಿ

ಸಂಪೂರ್ಣ ಭದ್ರತಾ ವೈಫಲ್ಯ

ಇದೇ ವೇಳೆ ಇಡೀ ಘಟನೆಗೆ ಭದ್ರತಾ ವೈಫಲ್ಯವೇ ಕಾರಣ ಎಂದು ಹೇಳಿದ ಮದನಿ, ನಮ್ಮ ಗಡಿಯೊಳಗೆ ಇಷ್ಟು ದೊಡ್ಡ ದಾಳಿ ಹೇಗೆ ನಡೆಯಿತು ಎಂಬುದನ್ನು ಸರ್ಕಾರ ತನಿಖೆ ಮಾಡಬೇಕು ಮತ್ತು 3,000 ಕ್ಕೂ ಹೆಚ್ಚು ಸಂದರ್ಶಕರು ಸೇರಿದ್ದ ಪ್ರವಾಸಿ ಸ್ಥಳದಲ್ಲಿ ಸರಿಯಾದ ಭದ್ರತಾ ವ್ಯವಸ್ಥೆಗಳಿಲ್ಲದಿರುವುದು ವಿಚಿತ್ರವಾಗಿದೆ. ಸೇನೆ ಮತ್ತು ಬಿಎಸ್‌ಎಫ್ ಸೈನಿಕರು ಪ್ರತಿ ಹಂತದಲ್ಲೂ ನಿಂತಿರುವಾಗ ಭಯೋತ್ಪಾದಕರು ಇಷ್ಟು ಸುಲಭವಾಗಿ ಪ್ರವಾಸಿ ತಾಣವನ್ನು ಹೇಗೆ ತಲುಪಿದರು? ದಾಳಿಯ ಮೊದಲ ದಿನದಿಂದಲೂ ಈ ಪ್ರಶ್ನೆಯನ್ನು ಎತ್ತಲಾಗಿತ್ತು.

ಆದರೆ ಇಲ್ಲಿಯವರೆಗೆ ಯಾವುದೇ ಉತ್ತರವನ್ನು ನೀಡಲಾಗಿಲ್ಲ. ದಾಳಿಯ ನಂತರ, ಪೊಲೀಸರು ಮತ್ತು ಸೇನಾ ಸಿಬ್ಬಂದಿ ಬರಲು ಒಂದೂವರೆ ಗಂಟೆ ಬೇಕಾಯಿತು. ಸ್ಥಳೀಯ ಜನರು ಬಲಿಪಶುಗಳ ಸಹಾಯಕ್ಕೆ ಬಂದು ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಇದು ಭದ್ರತಾ ವ್ಯವಸ್ಥೆಯ ಸ್ಪಷ್ಟ ವೈಫಲ್ಯವಲ್ಲವೇ?" ಎಂದು ಮದನಿ ಪ್ರಶ್ನಿಸಿದರು.

ಅಕ್ರಮ ವಲಸಿಗರ ವಿರುದ್ಧದ ಕ್ರಮ ಸಮರ್ಥನೀಯ

ಇದೇ ವೇಳೆ ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧದ ಕ್ರಮವನ್ನು ಅವರು ಸಮರ್ಥಿಸಿಕೊಂಡರು. ಆದರೆ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರದ ಬಂಗಾಳಿ ಮಾತನಾಡುವ ಜನರನ್ನು ಅದರ ನೆಪದಲ್ಲಿ ಕಿರುಕುಳ ನೀಡಬಾರದು ಎಂದು ಹೇಳಿದರು.

ಯುದ್ಧ ಪರಿಹಾರವಲ್ಲ.. ಆದರೆ ಪಾಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು

ಪಾಕಿಸ್ತಾನದೊಂದಿಗಿನ ಸಂಭಾವ್ಯ ಯುದ್ಧದ ಕುರಿತು, ಯುದ್ಧವು ಉತ್ತಮ ಪರಿಹಾರವಲ್ಲ ಎಂದು ಅಭಿಪ್ರಾಯಪಟ್ಟ ಮದನಿ, ಅದು ಪ್ರಮುಖ ಆರ್ಥಿಕ ಪರಿಣಾಮಗಳನ್ನು ಬೀರುತ್ತದೆ ಎಂದರು. ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸುವ ಸರ್ಕಾರದ ನಿರ್ಧಾರದ ಪರಿಣಾಮಕಾರಿತ್ವವನ್ನು ಪ್ರಶ್ನಿಸಿದರು. ಈ ನದಿಗಳು - ಚೆನಾಬ್, ರಾವಿ, ಝೀಲಂ, ಬಿಯಾಸ್ ಮತ್ತು ಸಟ್ಲೆಜ್ - ಸಾವಿರಾರು ವರ್ಷಗಳಿಂದ ಹರಿಯುತ್ತಿವೆ ಮತ್ತು ಅಲ್ಲಿ ಸಿಂಧೂ ಆಗುತ್ತಿವೆ. ನೀವು ಈ ನೀರನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತೀರಿ? ಇದು ಸುಲಭದ ಕೆಲಸವಲ್ಲ" ಎಂದು ಅವರು ಹೇಳಿದರು.

ಅಂತೆಯೇ ನಿಯಮವು ದ್ವೇಷದಿಂದಲ್ಲ, ಪ್ರೀತಿಯಿಂದ ಇರಬೇಕು ಎಂದು ಹೇಳಿದ ಮದನಿ, 'ನಾನು ಮುಸ್ಲಿಂ, ನಾನು ನನ್ನ ಇಡೀ ಜೀವನವನ್ನು ಈ ದೇಶದಲ್ಲಿ ಕಳೆದಿದ್ದೇನೆ. ಮತ್ತು ಇಲ್ಲಿ ಪ್ರಚಾರ ಮಾಡಲಾಗುತ್ತಿರುವ ಕೆಲವು ವಿಷಯಗಳು ದೇಶಕ್ಕೆ ಸೂಕ್ತವಲ್ಲ ಎಂದು ನನಗೆ ತಿಳಿದಿದೆ. ಕಾಶ್ಮೀರದಲ್ಲಿ ದಾಳಿಯಲ್ಲಿ ಭಾಗಿಯಾಗಿರುವವರ ಮನೆಗಳನ್ನು ಮಾತ್ರ ಕೆಡವಲಾಗಿದೆ ಎಂದು ಸರ್ಕಾರ "ಶೇಕಡಾ 100 ರಷ್ಟು ಖಚಿತ"ವಾಗಿದ್ದರೆ, ಆ ಕ್ರಮ ಸಂಪೂರ್ಣವಾಗಿ ಸರಿ. ಆದರೆ ಕೇವಲ ಅನುಮಾನದ ಮೇಲೆ ಅಂತಹ ಕ್ರಮಗಳನ್ನು ತೆಗೆದುಕೊಳ್ಳುವುದು ತಪ್ಪು ಎಂದು ಮದನಿ ಹೇಳಿದರು.

ಇದೇ ವೇಳೆ ಪಾಕಿಸ್ತಾನವನ್ನು ಹೆಸರಿಸದೆ, ಭವಿಷ್ಯದ ದಾಳಿಗಳನ್ನು ತಡೆಯಲು ಸರ್ಕಾರ ಭಯೋತ್ಪಾದನೆಯನ್ನು ಅದರ ಮೂಲದಲ್ಲಿಯೇ ನಿಲ್ಲಿಸಬೇಕು ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com