Wi-Fi ಸಂಪರ್ಕ ಕಡಿತ: ತಾಯಿಯ ಎದೆಗೆ ಗುದ್ದಿ ಗುದ್ದಿ ಕ್ರೂರವಾಗಿ ಥಳಿಸಿ ಕೊಂದ ಮಗ; ಹಲ್ಲೆಯ ಭಯಾನಕ Video ವೈರಲ್!

ಜೈಪುರದ ಕರ್ಧಾನಿ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ನಡೆದ ದೃಶ್ಯ ಆಘಾತಕಾರಿಯಾಗಿತ್ತು. ಶೇಖಾವತ್ ಮಾರ್ಗದಲ್ಲಿರುವ ಅರುಣ್ ವಿಹಾರ್‌ನಲ್ಲಿ ಮಗನೋರ್ವ ಕೌಟುಂಬಿಕ ಕಲಹದ ಕಾರಣ ತನ್ನ ಸ್ವಂತ ತಾಯಿಯನ್ನು ಕ್ರೂರವಾಗಿ ಕೊಲೆ ಮಾಡಿದ್ದಾನೆ.
ತಾಯಿಗೆ ಥಳಿಸಿ ಕೊಂದ ಮಗ
ತಾಯಿಗೆ ಥಳಿಸಿ ಕೊಂದ ಮಗ
Updated on

ಜೈಪುರದ ಕರ್ಧಾನಿ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ನಡೆದ ದೃಶ್ಯ ಆಘಾತಕಾರಿಯಾಗಿತ್ತು. ಶೇಖಾವತ್ ಮಾರ್ಗದಲ್ಲಿರುವ ಅರುಣ್ ವಿಹಾರ್‌ನಲ್ಲಿ ಮಗನೋರ್ವ ಕೌಟುಂಬಿಕ ಕಲಹದ ಕಾರಣ ತನ್ನ ಸ್ವಂತ ತಾಯಿಯನ್ನು ಕ್ರೂರವಾಗಿ ಕೊಲೆ ಮಾಡಿದ್ದಾನೆ. ಕಾರಣ ತುಂಬಾ ಕ್ಷುಲ್ಲಕವಾಗಿದ್ದು ಎಲ್ಲರನ್ನೂ ದಿಗ್ಭ್ರಮೆಗೊಳಿಸಿತು. ಗ್ಯಾಸ್ ಸಿಲಿಂಡರ್ ಖಾಲಿಯಾಗಿದ್ದು ತರುವಂತೆ ತಾಯಿ ತನ್ನ ಮಗನಿಗೆ ಹೇಳಿದ್ದಳು. ಇದರಿಂದ ಕೋಪಗೊಂಡ ಮಗ, ಕ್ರೌರ್ಯದ ಎಲ್ಲಾ ಮಿತಿಗಳನ್ನು ಮೀರಿದ್ದಾನೆ.

ಬೆಳಿಗ್ಗೆ 6:30ರ ಸುಮಾರಿಗೆ ಸಂತೋಷ್ ದೇವಿ ತನ್ನ ಮಗ ನವೀನ್ ಸಿಂಗ್‌ಗೆ ಸಿಲಿಂಡರ್ ತರಲು ಹೇಳಿದರು. ಇದಕ್ಕೆ ಮೊದಲು ನವೀನ್ ಕೋಪಗೊಂಡನು. ಮೊದಲಿಗೆ ತಾಯಿಯನ್ನು ನಿಂದಿಸಿದ್ದು ಆಕೆಗೆ ಬಲವಾಗಿ ಗುದ್ದಿದ್ದಾನೆ. ಇದರಿಂದಾಗಿ ಸಂತೋಷ್ ದೇವಿ ಪ್ರಜ್ಞೆ ತಪ್ಪಿದ್ದಾನೆ. ಈ ವೇಳೆ ದೇವಿಯನ್ನು ರಕ್ಷಿಸಲು ಪತಿ ಲಕ್ಷ್ಮಣ್ ಸಿಂಗ್ ಮತ್ತು ಹೆಣ್ಣುಮಕ್ಕಳು ಪ್ರಯತ್ನಿಸಿದರು. ಆದರೆ ನವೀನ್‌ನ ಕೋಪ ತಡೆಯಲಾಗಲಿಲ್ಲ. ಕೋಪದಿಂದ, ಅವನು ಅವಳನ್ನು ಕತ್ತು ಹಿಸುಕಿದ್ದಾನೆ. ಕುಟುಂಬದವರು ತಕ್ಷಣ ಪ್ರಜ್ಞೆ ತಪ್ಪಿದ ಸಂತೋಷ್ ದೇವಿಯನ್ನು ಸಿಕಾರ್ ರಸ್ತೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಪರೀಕ್ಷೆಯ ನಂತರ ವೈದ್ಯರು ಆಕೆಯನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ನಂತರ ಕುಟುಂಬಕ್ಕೆ ಹಸ್ತಾಂತರಿಸಿದರು.

ಮೃತ ಸಂತೋಷ್ ದೇವಿ ಮೂಲತಃ ಹರಿಯಾಣದ ಮಹೇಂದ್ರಗಢ ಜಿಲ್ಲೆಯ ಖೇಡಿ ಕುಲ್ವಾನಾ ಗ್ರಾಮದವರು ಎಂದು ಡಿಸಿಪಿ ಹನುಮಾನ್ ಪ್ರಸಾದ್ ಮೀನಾ ತಿಳಿಸಿದ್ದಾರೆ. ಅವರ ಪತಿ ಲಕ್ಷ್ಮಣ್ ಸಿಂಗ್ ಸೇನೆಯಿಂದ ನಿವೃತ್ತರಾದ ನಂತರ ದೆಹಲಿ ಪೊಲೀಸ್ ಇಲಾಖೆಗೆ ಸೇರಿದ್ದಾರೆ. ಪ್ರಸ್ತುತ ಇಡೀ ಕುಟುಂಬ ಜೈಪುರದ ಅರುಣ್ ವಿಹಾರ್ ಫ್ಲಾಟ್‌ನಲ್ಲಿ ವಾಸಿಸುತ್ತಿದೆ. ಸಂತೋಷ್ ದೇವಿಯ ಇಬ್ಬರು ಹೆಣ್ಣುಮಕ್ಕಳ ವಿವಾಹ ಫೆಬ್ರವರಿಯಲ್ಲಿ ನಿಗದಿಯಾಗಿತ್ತು. ಕುಟುಂಬವು ಮದುವೆಗೆ ಸಿದ್ಧತೆಯಲ್ಲಿ ನಿರತವಾಗಿತ್ತು, ಆದರೆ ಈ ದುರಂತ ಘಟನೆ ಸಂಭವಿಸಿದೆ.

ತಾಯಿಗೆ ಥಳಿಸಿ ಕೊಂದ ಮಗ
Hyderabad Horror: ಸೇತುವೆ ಬಳಿ ನಿಗೂಢ ಚೀಲ, ನಗ್ನ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ!

ಪೊಲೀಸ್ ತನಿಖೆಯಲ್ಲಿ ಆರೋಪಿ ಮಗ ನವೀನ್ ಸಿಂಗ್ 2020 ರಲ್ಲಿ ವಿವಾಹವಾಗಿದ್ದಾನೆ ಎಂದು ತಿಳಿದುಬಂದಿದೆ. ಕುಟುಂಬ ಸದಸ್ಯರ ಪ್ರಕಾರ, ಮದುವೆಯ ನಂತರ ಆತ ಪತ್ನಿ ಜೊತೆ ಪದೇ ಪದೇ ಜಗಳವಾಡುತ್ತಿದ್ದನು. ಹೀಗಾಗಿ ಪತ್ನಿ ಆತನನ್ನು ಬಿಟ್ಟು ಹೋಗಿ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ದಾಖಲಿಸುವ ಹಂತಕ್ಕೆ ತಲುಪಿತು. ನವೀನ್ ಸ್ವಲ್ಪ ಸಮಯದವರೆಗೆ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದನು. ಆದರೆ ಇತ್ತೀಚೆಗೆ ನಿರುದ್ಯೋಗಿಯಾಗಿದ್ದು ಮನೆಯಲ್ಲಿಯೇ ಇದ್ದನು. ಮನೆಯಲ್ಲಿ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು. ಕುಟುಂಬ ಸದಸ್ಯರು ಅವನೊಂದಿಗೆ ಪದೇ ಪದೇ ತರ್ಕಿಸಲು ಪ್ರಯತ್ನಿಸಿದರು, ಆದರೆ ಅವನು ತನ್ನ ಅಭ್ಯಾಸಗಳನ್ನು ಬಿಡಲು ನಿರಾಕರಿಸಿದನು.

ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ಬಂದು ನವೀನ್‌ನನ್ನು ಬಂಧಿಸಿದರು ಎಂದು ಸ್ಟೇಷನ್ ಹೌಸ್ ಅಧಿಕಾರಿ ಸವಾಯಿ ಸಿಂಗ್ ಹೇಳಿದ್ದಾರೆ. ಆರಂಭದಲ್ಲಿ, ಶಾಂತಿ ಕದಡುವ ಆರೋಪದ ಮೇಲೆ ಅವರನ್ನು ಬಂಧಿಸಲಾಯಿತು. ಆದಾಗ್ಯೂ, ತಾಯಿಯ ಸಾವು ದೃಢಪಟ್ಟ ನಂತರ, ಕೊಲೆ ಪ್ರಕರಣದ ತನಿಖೆಯನ್ನು ಪ್ರಾರಂಭಿಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com