

ಜೆಹಾನಾಬಾದ್: 5 ವರ್ಷದ ಬಾಲಕನ ಮೇಲೆ ಘೋರ ದುರಂತವೊಂದು ನಡೆದಿದ್ದು, ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ಆತನ ಗಂಟಲು ಸೀಳಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.
ಬಿಹಾರದ ಜೆಹಾನಾಬಾದ್ನ ವಸತಿ ಶಾಲೆಯ ಹಾಸ್ಟೆಲ್ನಲ್ಲಿ ಐದು ವರ್ಷದ ಮಗುವಿನ ಭೀಕರ ಕೊಲೆ ಪ್ರಕರಣವನ್ನು ಕೊನೆಗೂ ಪೊಲೀಸರು ಭೇದಿಸಿದ್ದು, ಬಾಲಕನನ್ನು ಕ್ರೂರವಾಗಿ ಹತ್ಯೆ ಮಾಡಿದ ಆರೋಪದ ಮೇರೆಗೆ ವಸತಿ ಶಾಲೆಯ ಗಾರ್ಡ್ ನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಮುಖೇಶ್ ಅಲಿಯಾಸ್ ಸುದಾಮ (46) ಎಂದು ಗುರುತಿಸಲಾಗಿದೆ. ಅಂತೆಯೇ ಕೊಲೆಗೆ ಬಳಸಲಾದ ಹರಿತವಾದ ಬ್ಲೇಡ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಶಾಲೆಯ ಕ್ಯಾಂಟೀನ್ನ ಗಾರ್ಡ್ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಏನಿದು ಪ್ರಕರಣ?
ಈ ವಾರದ ಆರಂಭದಲ್ಲಿ ಜೆಹಾನಾಬಾದ್ ನ ವಸತಿ ಶಾಲೆಯಲ್ಲಿ ಓದುತ್ತಿದ್ದ 5 ವರ್ಷದ ಬಾಲಕನ ಭೀಕರ ಹತ್ಯೆಯಾಗಿತ್ತು. ಬಾಲಕನ ಮೇಲೆ ಅತ್ಯಾಚಾರವೆಸಗಿ ಕತ್ತು ಸೀಳಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆ ಆರಂಭಿಸಿದ್ದ ಪೊಲೀಸರು ಹಾಸ್ಟೆಲ್ನ ನಿರ್ವಾಹಕ ತರುಣ್ ಕುಮಾರ್ ಎಂಬಾತನನ್ನು ಈ ಹಿಂದೆಯೇ ವಶಕ್ಕೆ ಪಡೆದಿದ್ದರು. ಇದೀಗ ಪ್ರಮುಖ ಆರೋಪಿ ಮುಖೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಮುಖೇಶ್ ತನ್ನ ತಪ್ಪೊಪ್ಪಿಗೆ ಹೇಳಿಕೆ ಕೂಡ ನೀಡಿದ್ದಾನೆ ಎನ್ನಲಾಗಿದೆ.
ನಂಪುಸಕ ಎದ್ದಿದಕ್ಕೇ ಅತ್ಯಾಚಾರ, ಕೊಲೆ
ಇನ್ನು ವಿಚಾರಣೆ ವೇಳೆ ಆರೋಪಿ ಮುಖೇಶ್ ಸ್ಫೋಟಕ ಹೇಳಿಕೆ ನೀಡಿದ್ದು, ವರ್ಷಗಳ ಹಿಂದೆಯೇ ತನ್ನ ಹೆಂಡತಿ ತನ್ನನ್ನು ಬಿಟ್ಟುಹೋಗಿದ್ದಳು. ಅಂದಿನಿಂದ ನಾನು ಕಿಚನ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದೆ. ತನ್ನನ್ನು ಮಕ್ಕಳೂ ಸೇರಿದಂತೆ ಎಲ್ಲರೂ 'ನಪುಂಸಕ' ಎಂದು ಹೀಯಾಳಿಸುತ್ತಿದ್ದರು. ಇದರಿಂದ ಸಾಕಷ್ಟು ಬಾರಿ ಕೋಪ ಬಂದಿತ್ತು. ಇದೇ ವಿಚಾರವಾಗಿ ಹಾಸ್ಟೆಲ್ ನಿರ್ವಾಹಕರೊಂದಿಗೂ ಜಗಳ ಮಾಡಿದ್ದೆ. ಹಾಸ್ಟೆಲ್ಗೆ ಮಾನಹಾನಿ ಮಾಡುವುದಾಗಿ ಮತ್ತು ಅದನ್ನು ಮುಚ್ಚುವಂತೆ ಒತ್ತಾಯಿಸಿದ್ದೆ ಎಂದು ಹೇಳಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಪ್ರಜಿತ್ ಲೋಹನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕಳೆದ ಭಾನುವಾರ ರಾತ್ರಿ, ತೀರಾ ಆಕ್ರೋಶಗೊಂಡಿದ್ದ ಮತ್ತು ಪಾನಮತ್ತನಾಗಿದ್ದ ಮುಖೇಶ್ ಸಂತ್ರಸ್ಥ ಬಾಲಕನನ್ನು ತನ್ನ ಕೋಣೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವೇಳೆ ಆತ ಕಿರುಚಿಕೊಂಡಾಗ ತನ್ನನ್ನು ಬಂಧಿಸಬಹುದು ಎಂದು ಹೆದರಿಸಿ ಕೈಗೆ ಸಿಕ್ಕ ಬ್ಲೇಡ್ ನಿಂದ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಬಳಿಕ ದೇಹವನ್ನು ಹಾಸ್ಟೆಲ್ನ ಮೆಟ್ಟಿಲುಗಳ ಮೇಲೆ ಎಸೆದು ಪರಾರಿಯಾಗಿದ್ದಾನೆ.
ಬಾಲಕನ ಮೈತುಂಬ ಇರಿತದ ಗಾಯಗಳು
ಮರುದಿನ ಬೆಳಿಗ್ಗೆ ತರುಣ್ ಕುಮಾರ್ ನಿಂದ ಬಾಲಕನ ತಂದೆಗೆ ಕರೆ ಬಂದಿದ್ದು, ಮಗನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಲಾಗಿದೆ. ಆಸ್ಪತ್ರೆಯಲ್ಲಿ ಮಗುವಿನ ಗಂಟಲು ಸೀಳಿ, ಜನನಾಂಗಗಳನ್ನು ಕತ್ತರಿಸಿ, ಮತ್ತು ಹೊಟ್ಟೆಯ ಎಡಭಾಗದಲ್ಲಿ ಕತ್ತರಿಸಿರುವುದು ಕಂಡುಬಂದಿದೆ ಎಂದು ಪ್ರಥಮ ಮಾಹಿತಿ ವರದಿ (ಎಫ್ಐಆರ್) ತಿಳಿಸಿದೆ.
ವೈದ್ಯರ ಸಲಹೆಯ ಮೇರೆಗೆ ಅವನು ಬಾಲಕನ ತಂದೆ ಪಾಟ್ನಾದ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸಿದರೂ ಅಲ್ಲಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ಘೋಷಿಸಲಾಗಿದೆ.
ಪೊಲೀಸರು ಅಧಿಕಾರದಲ್ಲಿರುವ ವ್ಯಕ್ತಿಯಿಂದ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಕೊಲೆ ಮತ್ತು ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ತಡೆಗಟ್ಟುವಿಕೆ (POCSO) ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತರುಣ್ ಕುಮಾರ್ ನನ್ನು ವಶಕ್ಕೆ ಪಡೆಯಲಾಯಿತು.
ಮಾತ್ರವಲ್ಲದೇ ಒಬ್ಬ ಶಿಕ್ಷಕ ಮತ್ತು ಇಬ್ಬರು ಸಿಬ್ಬಂದಿಯನ್ನು ಸಹ ಬಂಧಿಸಲಾಯಿತು. ಆದರೆ ವಿಚಾರಣೆಯ ನಂತರ ಅವರಿಗೆ ಹೋಗಲು ಅವಕಾಶ ನೀಡಲಾಯಿತು. ತನಿಖೆಯ ಸಮಯದಲ್ಲಿ ಹಲವಾರು ನಿರ್ಣಾಯಕ ಸುಳಿವುಗಳನ್ನು ಪಡೆಯಲಾಯಿತು, ಅದರ ಆಧಾರದ ಮೇಲೆ ಪ್ರಮುಖ ಆರೋಪಿ ಮುಖೇಶ್ ನನ್ನು ಸಹ ವಶಕ್ಕೆ ಪಡೆಯಲಾಯಿತು ಎಂದು ಲೋಹನ್ ಹೇಳಿದರು.
Advertisement