TVK ಮುಖ್ಯಸ್ಥ ವಿಜಯ್ ಅರ್ಜಿ ವಜಾ: 1.5 ಕೋ. ದಂಡ ಪಾವತಿಗೆ ಮದ್ರಾಸ್ ಹೈಕೋರ್ಟ್ ಆದೇಶ

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 275 (1) (ಎ) ಅಡಿಯಲ್ಲಿ ಮಿತಿಯ ಅವಧಿಯಲ್ಲಿ ದಂಡ ವಿಧಿಸುವ ಆದೇಶ ಹೊರಡಿಸಲಾಗಿದೆ ಎಂದು ನ್ಯಾಯಾಧೀಶರು ತಮ್ಮ ಆದೇಶವನ್ನು ಓದಿದರು.
TVK chief Vijay
ನಟ ರಾಜಕಾರಣಿ ವಿಜಯ್
Updated on

ಚೆನ್ನೈ: 2015–16ರ ಮೌಲ್ಯಮಾಪನ ವರ್ಷದಲ್ಲಿ ಆದಾಯ ಬಹಿರಂಗಪಡಿಸದ ಕಾರಣ 1.50 ಕೋಟಿ ರೂಪಾಯಿ ದಂಡ ವಿಧಿಸಿದ ಆದಾಯ ತೆರಿಗೆ ಇಲಾಖೆಯ ಆದೇಶವನ್ನು ಪ್ರಶ್ನಿಸಿ ನಟ ಹಾಗೂ ರಾಜಕಾರಣಿ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಇಂದು ಶುಕ್ರವಾರ ವಜಾಗೊಳಿಸಿದೆ.

ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ ನಿಗದಿತ ಮಿತಿಯ ಅವಧಿಯಲ್ಲಿ ದಂಡ ವಿಧಿಸುವ ಆದೇಶವನ್ನು ಹೊರಡಿಸಲಾಗಿದೆ ಎಂದು ತೀರ್ಪು ನೀಡಿದ ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ರಾಮಮೂರ್ತಿ ವಿಜಯ್ ಅವರ ಅರ್ಜಿಯನ್ನು ತಿರಸ್ಕರಿಸಿದರು.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 275 (1) (ಎ) ಅಡಿಯಲ್ಲಿ ಮಿತಿಯ ಅವಧಿಯಲ್ಲಿ ದಂಡ ವಿಧಿಸುವ ಆದೇಶ ಹೊರಡಿಸಲಾಗಿದೆ ಎಂದು ನ್ಯಾಯಾಧೀಶರು ತಮ್ಮ ಆದೇಶವನ್ನು ಓದಿದರು.

TVK chief Vijay
ಟಿವಿಕೆ ಜತೆ ಮೈತ್ರಿ ಮಾಡಿಕೊಳ್ಳಿ, ತಮಿಳುನಾಡಿನಲ್ಲಿ 'ಹಳೆ ವೈಭವ ಮರುಕಳಿಸುತ್ತದೆ': ಕಾಂಗ್ರೆಸ್‌ಗೆ ನಟ ವಿಜಯ್ ತಂದೆ ಆಗ್ರಹ

2015 ರಲ್ಲಿ ವಿಜಯ್ ಮತ್ತು ಎಸ್‌ಕೆಟಿ ನಿರ್ಮಾಪಕರ ನಿವಾಸದ ಆವರಣದಲ್ಲಿ ನಡೆಸಿದ ಶೋಧದ ನಂತರ, ಆದಾಯ ತೆರಿಗೆ ಇಲಾಖೆ ಜೂನ್ 30, 2022 ರಂದು ಭಾರೀ ದಂಡ ವಿಧಿಸಿತ್ತು. ಶೋಧದ ಸಮಯದಲ್ಲಿ, ಅಧಿಕಾರಿಗಳು ನಿರ್ಮಾಪಕರಿಂದ 16 ಕೋಟಿ ರೂಪಾಯಿ ಚೆಕ್ ಪಾವತಿಯ ಜೊತೆಗೆ 4.93 ಕೋಟಿ ರೂಪಾಯಿ ನಗದು ರಶೀದಿಯನ್ನು ತೋರಿಸುವ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

ಅದನ್ನು ಖಾತೆಗಳಲ್ಲಿ ಬಹಿರಂಗಪಡಿಸಲಾಗಿಲ್ಲ. ಇದರ ಆಧಾರದ ಮೇಲೆ, ಇಲಾಖೆಯು ಸುಮಾರು 5 ಕೋಟಿ ರೂಪಾಯಿ ಬಹಿರಂಗಪಡಿಸದಿದ್ದಕ್ಕಾಗಿ 1.50 ಕೋಟಿ ರೂಪಾಯಿ ದಂಡವನ್ನು ಮತ್ತು ನಂತರ ಆದಾಯವೆಂದು ತೋರಿಸಲಾದ ಮತ್ತೊಂದು 10 ಕೋಟಿ ರೂಪಾಯಿ ದಂಡವನ್ನು ವಿಧಿಸಿತ್ತು.

ವಿಜಯ್ ಅವರು ಆದಾಯ ತೆರಿಗೆ ಇಲಾಖೆಯ ದಂಡದ ಆದೇಶವನ್ನು ಪ್ರಶ್ನಿಸಿದ್ದರು. ಆದಾಯ ತೆರಿಗೆ ಆಯುಕ್ತಕ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದ್ದರು. ನಂತರ ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಗೆ ಮೊರೆಹೋಯಿತು. ಇದು ಇಲಾಖೆಯ ಮೇಲ್ಮನವಿಯನ್ನು ಭಾಗಶಃ ಒಪ್ಪಿಗೆ ನೀಡಿತ್ತು. ನಂತರ, ದಂಡದ ಆದೇಶವನ್ನು ಅಂಗೀಕರಿಸಲಾಗಿತ್ತು.

TVK chief Vijay
ನಟ ವಿಜಯ್ ಅಭಿನಯದ Jana Nayagan ಚಿತ್ರ ಬಿಡುಗಡೆ ಮುಂದೂಡಿಕೆ, ಕಾರಣ ಸೆನ್ಸಾರ್!

ವಿಜಯ್ ಅವರು 2022 ರಲ್ಲಿ ಹೈಕೋರ್ಟ್ ಹೈಕೋರ್ಟ್ ಮೊರೆ ಹೋಗಿ ದಂಡದ ಪ್ರಕ್ರಿಯೆಗಳು ಸಮಯಕ್ಕೆ ಸೀಮಿತವಾಗಿವೆ ಎಂದು ವಾದಿಸಿ ಮಧ್ಯಂತರ ತಡೆಯಾಜ್ಞೆ ತಂದರು.

ವಿಚಾರಣೆಯ ಸಮಯದಲ್ಲಿ, ವಿಜಯ್ ಪರ ವಕೀಲರು, ಮೌಲ್ಯಮಾಪನವು ಡಿಸೆಂಬರ್ 30, 2017 ರಂದು ಪೂರ್ಣಗೊಂಡಿರುವುದರಿಂದ, ದಂಡದ ಪ್ರಕ್ರಿಯೆಗಳನ್ನು ಜೂನ್ 30, 2018 ರೊಳಗೆ ಪೂರ್ಣಗೊಳಿಸಬೇಕಾಗಿತ್ತು, ಇದರಿಂದಾಗಿ ಶೋಕಾಸ್ ನೋಟಿಸ್ ಮತ್ತು ದಂಡದ ಆದೇಶವು ಅಮಾನ್ಯವಾಗಿದೆ ಎಂದು ವಾದಿಸಿದರು.

ಆದಾಯ ತೆರಿಗೆ ಇಲಾಖೆಯ ಹಿರಿಯ ಸ್ಥಾಯಿ ವಕೀಲ ಶ್ರೀನಿವಾಸ್, 2021 ರ ಐಟಿಎಟಿ ಆದೇಶದ ಆಧಾರದ ಮೇಲೆ ಆರು ತಿಂಗಳೊಳಗೆ ದಂಡವನ್ನು ವಿಧಿಸಲಾಗಿದೆ ಎಂದು ಹೇಳಿ ಆರೋಪವನ್ನು ತಿರಸ್ಕರಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com