

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ ಬುಧವಾರ ಅಮೆರಿಕ ಮತ್ತು ಚೀನಾ ವಿರುದ್ಧ ವಾಗ್ದಾಳಿ ನಡೆಸಿದ್ದು, ತಮ್ಮ ದಾರಿಯಲ್ಲಿ ಬಂದವರನ್ನು ಮುಗಿಸಲು' ಒಲವು ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ವಿಶ್ವ ಎದುರಿಸುತ್ತಿರುವ ಅನೇಕ ಸವಾಲುಗಳಿಗೆ ಭಾರತದ ಬಳಿ ಪರಿಹಾರವಿದೆ ಎಂದು ಪ್ರತಿಪಾದಿಸಿದ್ದಾರೆ.
ಲಕ್ನೋ ವಿಶ್ವವಿದ್ಯಾನಿಲಯದಲ್ಲಿ ನಡೆದ ಸಂಶೋಧನಾ ವಿದ್ಯಾರ್ಥಿಗಳ ನಡುವಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, ಪಾಶ್ಚಿಮಾತ್ಯ ದೇಶಗಳು ಮೂಲಭೂತವಾದವನ್ನು ಹರಡುತ್ತವೆ. ತಾವು ಮಾತ್ರ ಬದುಕಬೇಕು. ಉಳಿದವರನ್ನು ನಾಶಪಡಿಸಬೇಕು ಎಂಬ ಅವರ ಚಿಂತನೆಯೂ ಬಹಳ ಪ್ರಬಲವಾಗಿದೆ. ಇದನ್ನೇ ಇಂದು ಅಮೆರಿಕ ಮತ್ತು ಚೀನಾ ಮಾಡುತ್ತಿವೆ ಎಂದು ಹೇಳಿದರು.
ಜಾಗತಿಕ ಸಮಸ್ಯೆಗಳಿಗೆ ಭಾರತದಲ್ಲಿ ಪರಿಹಾರವಿದೆ. ಇಂದು ಜಗತ್ತು ಎದುರಿಸುತ್ತಿರುವ ಸಮಸ್ಯೆಗಳಿಗೆ ಭಾರತದ ಬಳಿ ಉತ್ತರವಿದೆ. ನಾವು ವಿಶ್ವ ನಾಯಕರಾಗಬೇಕಾದರೆ, ನಾವು ಎಲ್ಲಾ ಕ್ಷೇತ್ರಗಳಲ್ಲಿ ಶಕ್ತಿಶಾಲಿಯಾಗಬೇಕು. ಸತ್ಯವನ್ನು ಶಕ್ತಿಯಿಂದ ಬೆಂಬಲಿಸಿದಾಗ ಮಾತ್ರ ಜಗತ್ತು ಅದನ್ನು ನಂಬುತ್ತದೆ ಎಂದರು.
ರಾಷ್ಟ್ರ ನಿರ್ಮಾಣದಲ್ಲಿ ಸಂಶೋಧನೆಯ ಮಹತ್ವವನ್ನು ವಿವರಿಸಿದ ಭಾಗವತ್, ಭಾರತದ ದಿಕ್ಕು ಮತ್ತು ಸ್ಥಿತಿಯನ್ನು ಬದಲಾಯಿಸುವಲ್ಲಿ ಸಂಶೋಧನೆಯು ಪ್ರಮುಖ ಪಾತ್ರ ವಹಿಸುತ್ತದೆ. ಸತ್ಯವಾದ ಮಾಹಿತಿಯನ್ನು ಬೆಳಕಿಗೆ ತರಬೇಕು. ಅಜ್ಞಾನದಿಂದ ಭಾರತವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ದೇಶಕ್ಕಾಗಿ ನಿಸ್ವಾರ್ಥ ಕೆಲಸ ಮಾಡಬೇಕು ಎಂದು ಸಂಶೋಧಕರಿಗೆ ಕರೆ ನೀಡಿದರು. ನೀವು ಯಾವುದೇ ಸಂಶೋಧನೆಯನ್ನು ಮಾಡಿದರೂ, ಅದನ್ನು ಶ್ರೇಷ್ಠತೆ, ಪ್ರಾಮಾಣಿಕತೆ, ದೇಹ, ಮನಸ್ಸು, ಹಣ ಮತ್ತು ದೇಶಕ್ಕಾಗಿ ನಿಸ್ವಾರ್ಥವಾಗಿ ಮಾಡಿ. ಸಂಘ ಪರಿವಾರದ ಬಗ್ಗೆ ಋಣಾತ್ಮಕ ಅಪಪ್ರಚಾರ ನಡೆಯುತ್ತಿದೆ. ಸಂಶೋಧಕರು ಸತ್ಯವನ್ನು ಹೊರತರಬೇಕು ಎಂದರು.
ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಮಾತನಾಡಿದ ಆರ್ಎಸ್ಎಸ್ ಮುಖ್ಯಸ್ಥರು, "ಇವು ಮೂಲಭೂತ ಅವಶ್ಯಕತೆಗಳಾಗಿವೆ. ಅವು ವ್ಯವಹಾರಗಳಾಗಲು ಸಾಧ್ಯವಿಲ್ಲ. ಶಿಕ್ಷಣ ಮತ್ತು ಆರೋಗ್ಯ ಎಲ್ಲರಿಗೂ ಲಭ್ಯವಿರಬೇಕು. ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತದ ಶಿಕ್ಷಣ ವ್ಯವಸ್ಥೆಯನ್ನು ವಿರೂಪಗೊಳಿಸಿವೆ ಎಂದು ಅವರು ಆರೋಪಿಸಿದರು.
"ಪಾಶ್ಚಿಮಾತ್ಯರು ಶಿಕ್ಷಣವನ್ನು ಗೊಂದಲಗೊಳಿಸಿದ್ದಾರೆ, ಅವರು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಿ, ಅವರದೇ ಆದದನ್ನು ಹೇರಿದರು, ಆದ್ದರಿಂದ ಅವರು ಕೆಲಸ ಮಾಡಲು ಕಪ್ಪು ಇಂಗ್ಲಿಷ್ರನ್ನು ಹುಡುಕಿದರು. ಬ್ರಿಟಿಷರು ಏನು ತಪ್ಪು ಮಾಡಿದ್ದಾರೋ ಅದನ್ನು ಸರಿಪಡಿಸಬೇಕು ಎಂದು ಅವರು ಹೇಳಿದರು.
Advertisement