ಪತ್ನಿ ಮೇಲೆ ಕಣ್ಣಿಡಲು ಮನೆ ಒಳಗೆ, ಹೊರಗೆ ಸಿಸಿಟಿವಿ ಅಳವಡಿಸಿದ ವೈದ್ಯ ಪತಿ; ಕಿರುಕುಳಕ್ಕೆ ಬೇಸತ್ತು ನವ ವಿವಾಹಿತೆ ಆತ್ಮಹತ್ಯೆ!

ತನ್ನ ವೈದ್ಯೆ ಪತಿ ಮತ್ತು ಅತ್ತೆಯಿಂದ ತೀವ್ರ ಕಿರುಕುಳ ಅನುಭವಿಸುತ್ತಿದ್ದ 26 ವರ್ಷದ ವಿಶಾಖಾ ತಿಲ್ಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಲಾಗಿದೆ.
Vishakha Tilkar
ವಿಶಾಖಾ ತಿಲ್ಕರ್
Updated on

ತನ್ನ ವೈದ್ಯೆ ಪತಿ ಮತ್ತು ಅತ್ತೆಯಿಂದ ತೀವ್ರ ಕಿರುಕುಳ ಅನುಭವಿಸುತ್ತಿದ್ದ 26 ವರ್ಷದ ವಿಶಾಖಾ ತಿಲ್ಕರ್ ಮುಂಬೈ ಬಳಿಯ ಥಾಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಪತಿಯೊಂದಿಗೆ ವಾಸಿಸುತ್ತಿದ್ದ ವಿಶಾಖಾ, ನೆರೆಮನೆಯ ಮಹಿಳೆಯೊಂದಿಗೆ ಮಾತನಾಡಿದ ಕಾರಣಕ್ಕೆ ಅವರ ಅತ್ತೆ ಥಳಿಸಿದ್ದಾರೆ. ಆದರೆ ಕಿರುಕುಳ ಕೇವಲ ದೈಹಿಕವಾಗಿರಲಿಲ್ಲ ಎಂದು ಅವರ ಕುಟುಂಬ ಆರೋಪಿಸಿದೆ. ಅಂಬರ್ನಾಥ್‌ನಲ್ಲಿರುವ ದಂಪತಿ ಮನೆಯ ಒಳಗೆ ಮತ್ತು ಹೊರಗೆ ಸಿಸಿಟಿವಿ ಕ್ಯಾಮೆರಾಗಳು ಇದ್ದವು ಮತ್ತು ಅವರ ಪತಿ ನಿತಿನ್ ತಿಲ್ಕರ್ ಪತ್ನಿಯ ಪ್ರತಿಯೊಂದು ಚಲನವಲನಗಳ ಮೇಲೆ ನಿಗಾ ಇಡುತ್ತಿದ್ದರು. ಅವರ ಗೌಪ್ಯತೆಯ ಪ್ರತಿಯೊಂದು ಅಂಶವನ್ನು ಕಸಿದುಕೊಳ್ಳುತ್ತಿದ್ದರು ಎಂದು ದೂರಿದ್ದಾರೆ.

ಏಪ್ರಿಲ್ 30 ರಂದು ದಂಪತಿ ವಿವಾಹವಾದರು. ಮದುವೆಗೆ ಮೊದಲು ಎಲ್ಲವೂ ಚೆನ್ನಾಗಿತ್ತು, ಆದರೆ ಶೀಘ್ರದಲ್ಲೇ ಪರಿಸ್ಥಿತಿ ಬದಲಾಯಿತು. ವಿವಾಹದ ಸಮಯದಲ್ಲಿ ಅವರು ಬಯಸಿದಷ್ಟು ಉಡುಗೊರೆಗಳು ಅಥವಾ 'ಗೌರವ'ದ ಮಟ್ಟ ಪಡೆಯದ ಕಾರಣ ಅವರ ಅತ್ತೆ ಅಸಮಾಧಾನಗೊಂಡಿದ್ದರು ಎಂದು ವಿಶಾಖಾ ಅವರ ಕುಟುಂಬ ಆರೋಪಿಸಿದೆ.

'ಹೆತ್ತವರ ಮನೆಯಿಂದ ಆಭರಣ ಮತ್ತು ಹಣವನ್ನು ತರುವಂತೆ ಆಕೆಯ ಮೇಲೆ ನಿರಂತರವಾಗಿ ಒತ್ತಡ ಹೇರಲಾಗುತ್ತಿತ್ತು' ಎಂದು ಕುಟುಂಬದ ಸದಸ್ಯರೊಬ್ಬರು ಹೇಳಿದರು.

'ನಿತಿನ್ ತಿಲ್ಕರ್ ಮನೆಯ ಒಳಗೆ ಮತ್ತು ಹೊರಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಅವಳ ಪ್ರತಿಯೊಂದು ಚಲನವಲನಗಳನ್ನು ಗಮನಿಸುತ್ತಿದ್ದ. ಅವಳು ಯಾರೊಂದಿಗಾದರೂ ಮಾತನಾಡಿದಾಗಲೆಲ್ಲ, ಮನೆಗೆ ಹಿಂದಿರುಗಿ ಅವಳನ್ನು ಕ್ರೂರವಾಗಿ ಥಳಿಸಲಾಗುತ್ತಿತ್ತು. ಅವಳು ಆತ್ಮಹತ್ಯೆ ಮಾಡಿಕೊಳ್ಳುವ ಎರಡು ದಿನಗಳ ಮೊದಲು, ನೆರೆಹೊರೆಯ ಮಹಿಳೆಯೊಂದಿಗೆ ಮಾತನಾಡಿದ್ದಕ್ಕಾಗಿ ಅವಳನ್ನು ಥಳಿಸಲಾಯಿತು. ಹತಾಶೆಗೆ ಒಳಗಾದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ' ಎಂದು ಅವರು ಹೇಳಿದರು.

Vishakha Tilkar
ಬೆಂಗಳೂರು: ವರದಕ್ಷಿಣೆ ಕಿರುಕುಳದಿಂದ ಮನನೊಂದ ಟೆಕ್ಕಿ ಆತ್ಮಹತ್ಯೆ; ಒಂದೂವರೆ ವರ್ಷದ ಮಗು ಅನಾಥ!

ಆತ್ಮಹತ್ಯೆಗೂ ಮುನ್ನ, ವಿಶಾಖಾ ತನ್ನ ತಾಯಿಗೆ ತಾನು ಅನುಭವಿಸುತ್ತಿರುವ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಳು. ಆಕೆಯ ಪೋಷಕರು ಆಕೆಯನ್ನು ಮನೆಗೆ ಕರೆತರುವ ಪ್ರಕ್ರಿಯೆಯಲ್ಲಿದ್ದಾಗಲೇ ಆಕೆ ನೇಣು ಬಿಗಿದುಕೊಂಡಿದ್ದಾಳೆ ಎಂಬ ಸುದ್ದಿ ಅವರಿಗೆ ತಲುಪಿತು ಎಂದು ಕುಟುಂಬ ತಿಳಿಸಿದೆ.

ಅಂಬರ್‌ನಾಥ್‌ನ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ನಿತಿನ್ ತಿಲ್ಕರ್, ಅವರ ತಾಯಿ ಛಾಯಾ ಮತ್ತು ಸಹೋದರ ನಿನಾದ್ ವಿರುದ್ಧ ಮಾನಸಿಕ ಮತ್ತು ದೈಹಿಕ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದೆ. ನಿತಿನ್‌ನನ್ನು ಬಂಧಿಸಲಾಗಿದ್ದು, ಉಳಿದ ಇಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com