ಬೆಂಗಳೂರು: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮೀಸಲಾತಿ ವಿಮರ್ಶೆ ಮಾಡಬೇಕೆಂದು ಹೇಳಿದ್ದಾರೆ. ಮೀಸಲಾತಿ ವಿಚಾರದಲ್ಲಿ ವಿರೋಧ ಇರುವವಂತವರು ಇಂತಹ ಪ್ರಸ್ತಾಪ ಮಾಡುತ್ತಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅರಮನೆ ಮೈದಾನದಲ್ಲಿ ನಡೆದ ಮೊಗವೀರ ಸಮಾಜದ ಸಮಾವೇಶದಲ್ಲಿ ಮಾತನಾಡಿದ ಅವರು, ಮೀಸಲಾತಿ ಭಿಕ್ಷೆ ನೀಡುವುದಲ್ಲ, ಅದನ್ನು ಪಡೆಯುವುದು ಪ್ರತಿಯೊಬ್ಬರ ಹಕ್ಕು. ಹಿಂದುಳಿದ ವರ್ಗದವರೆಲ್ಲಾ ಒಗ್ಗಟ್ಟಾಗಿಬೇಕು, ಜಾತಿ ಹೋಗುವವರೆಗೂ ಮೀಸಲಾತಿ ಬೇಕು ಎಂದು ಅಭಿಪ್ರಾಯಪಟ್ಟರು. ಮೊಗವೀರ ಸಮುದಾಯ ಕುಲ ಕಸುಬಿಗೆ ಅಂಟಿ ಕೊಂಡಿರಬಾರದು. ವೃತ್ತಿಧರ್ಮ ಪಾಲನೆಯಲ್ಲಿ ಭವಿಷ್ಯದ ಕುಡಿಗಳು ಡಾಕ್ಟರ್, ಎಂಜಿನಿಯರ್, ವಿಜ್ಞಾನಿಗಳಾಗುವುದು ಬೇಡವೇ? ಇದನ್ನು ಅರಿತುಕೊಂಡು ಎಲ್ಲಾ ಕ್ಷೇತ್ರಕ್ಕೂ ಕಾಲಿಡುವ ಶಕ್ತಿಯನ್ನು ತೋರ್ಪಡಿಸಬೇಕು.
ಬುದ್ದಿವಂತಿಕೆ ಎನ್ನುವುದು ಒಂದು ವರ್ಗಕ್ಕೆ ಸೀಮಿತವಲ್ಲ. ಸುಪ್ತವಾದ ಪ್ರತಿಭೆಯ ಪ್ರಕಟಕ್ಕೆ ಸೂಕ್ತ ವೇದಿಕೆ ಕಲ್ಪಿಸಬೇಕು. ಈ ಹಿನ್ನೆಲೆಯಲ್ಲಿ ಶೋಷಿತ ವರ್ಗ ಶಿಕ್ಷಣ, ಸಂಘಟನೆ, ಹೋರಾಟದ ಗುಣವನ್ನುಬೆಳೆಸಿಕೊಳ್ಳಬೇಕು.ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯವಿರುವ ಜಾಗವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ವಿ.ಎಸ್.ಉಗ್ರಪ್ಪ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷ ಡಾ.ಜಿ.ಶಂಕರ್, ಶಾಸಕ ಪ್ರಮೋದ್ ಮಧ್ವರಾಜ್, ನೆಹರೂ ಬಾಲಭವನದ ಅಧ್ಯಕ್ಷೆ ಭಾವನಾ, ಮಾಜಿ ಶಾಸಕ ಲಾಲಾಜಿ ಮೆಂಡನ್ ಉಪಸ್ಥಿತರಿದ್ದರು.
Advertisement