ಆದರೆ ನನ್ನ ಮನೆಯಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ, ಇದೊಂದು ದ್ವೇಷ ರಾಜಕಾರಣ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಸಂತೋಷ್ ಮನೆಯಲ್ಲಿ ಇದ್ದಾರೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ನಮ್ಮ ತಂಡ ತೆರಳಿತ್ತು, ಆದರೆ ನಾವು ಸೆರ್ಚ್ ವಾರಂಟ್ ಪಡೆಯದಿದ್ದ ಕಾರಣ ನಮ್ಮನ್ನು ಮನೆಯ ಒಳಗೆ ಬಿಡಲಿಲ್ಲ, ಈ ವೇಳೆ ಯಡಿಯೂರಪ್ಪ ಮನೆಯೊಳಗೆ ಇದ್ದರು ಎಂದು ಮಲ್ಲೇಶ್ವರಂ ಎಸಿಪಿ ಅರುಣ್ ನಾಯಕ್ ಬಡಿಗೇರ್ ಹೇಳಿದ್ದಾರೆ.