ಶಾಸಕಾಂಗ ಸಭೆಗಳಿಗೆ ಗೈರಾಗುತ್ತಿರುವುದಕ್ಕೆ ಕಾರಣ ತಿಳಿಸುವಂತೆ ವಿಧಾನಸಭೆ ಸ್ಪೀಕರ್ ಕೆಬಿ ಕೋಳಿವಾಡ ಅವರು ಅಂಬರೀಶ್ ಅವರಿಗೆ ಕಳೆದ ವಾರ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅಂಬರೀಶ್ ಅವರು ವಿಧಾನಸಭೆ ಮತ್ತು ಕೌನ್ಸಿಲ್ ಹಾಲ್ ನಲ್ಲಿ ಎಸಿಯನ್ನು ಅಳವಡಿಸಲಾಗಿದ್ದು ನನಗೆ ಎಸಿ ಆಗೋಲ್ಲ ಹೀಗಾಗಿ ನಾನು ಯಾವುದೇ ಸಭೆಗಳಿಗೆ ಹಾಜರಾಗುತ್ತಿಲ್ಲ ಎಂದು ಹೇಳಿದ್ದಾರೆ.