ಆದರೆ, ಮೂರನೇ ದಿನಕ್ಕೆ ನಗರಕ್ಕೆ ಹಿಂದಿರುಗಿದ್ದು, ಡಿ. 17ರಿಂದಲೇ ಸಿದ್ದರಾಮಯ್ಯನವರು ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಅವರು ಇದ್ದಕ್ಕಿದ್ದಂತೆ ವಿದೇಶ ಪ್ರವಾಸ ಹೊರಟ್ಟಿದ್ದು ಅನೇಕರ ಹುಬ್ಬೇರುವಂತೆ ಮಾಡಿತ್ತು. ಅಧಿವೇಶನದಲ್ಲಿ ನಿರೀಕ್ಷೆಯಂತೆ ಬೆಳಗಾವಿಯ ರೈತರು ಸರಕಾರದ ವಿರುದ್ಧ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ ಎನ್ನುವ ವಿಷಯ ಗೊತ್ತಿದ್ದರೂ ಸಿದ್ದರಾಮಯ್ಯಅಧಿವೇಶನದಲ್ಲಿ ಭಾಗಿಯಾಗದಿರುವುದು ಹಲವು ಅನುಮಾನಗಳಿಗೂ ಕಾರಣವಾಗಿತ್ತು.