ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಜನಾರ್ಧನ ರೆಡ್ಡಿ, ನನ್ನ ಮಕ್ಕಳಿಂದ ನನ್ನನ್ನು ದೂರ ಮಾಡಿದ್ದಕ್ಕೇ ಸಿದ್ದರಾಮಯ್ಯ ಅವರಿಗೆ ಶಿಕ್ಷೆಯಾಗಿದೆ. ನಾವು ಮಾಡಿದ ಪಾಪ ನಮ್ಮ ಮಕ್ಕಳನ್ನು ಕಾಡುತ್ತದೆ ಎಂಬಂತೆ ಅವರ ಪುತ್ರ ಸಾವನ್ನಪ್ಪಿದ. ಇನ್ನಾದರೂ ಸಿದ್ದರಾಮಯ್ಯ ಬುದ್ದಿ ಕಲಿಯಲಿ ಎಂದು ರೆಡ್ಡಿ ಹೇಳಿದ್ದರು. ರೆಡ್ಡಿ ಹೇಳಿಕೆಗೆ ಬಿಜೆಪಿ ವಲಯದಲ್ಲೇ ಆಕ್ಷೇಪ ಕೇಳಿಬಂದಿತ್ತು.