ಅಂತೆಯೇ ವಿಪಕ್ಷಗಳ ಟೀಕೆಗೆ ಉತ್ತರಿಸಿದ್ದ ಅವರು, 'ಹಾಸನ, ಬೇಲೂರು, ಅರಸೀಕೆರೆ, ಮಡಿಕೇರಿ, ಮೈಸೂರು ವ್ಯಾಪ್ತಿಯಲ್ಲಿ ಶೀಘ್ರವೇ ರೂ. 685 ಕೋಟಿಗೂ ಅಧಿಕ ಮೊತ್ತದ ರಸ್ತೆ ಅಭಿವೃದ್ಧಿ ಕಾಮಗಾರಿ (ಬೇಲೂರು–ಬೆಂಗಳೂರು ರೂ. 175 ಕೋಟಿ, ಎಡೆಗೌಡನಹಳ್ಳಿ–ಹಾಸನ ರೂ. 324 ಕೋಟಿ, ಚಾರ್ಮಡಿ ಘಾಟ್ ರೂ. 175 ಕೋಟಿ, ಬಾಣವಾರ–ಹಿರಿಯೂರು ರೂ. 125 ಕೋಟಿ) ಆರಂಭವಾಗಲಿವೆ. ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿಘಾಟ್ ಕಾಮಗಾರಿ ಮುಗಿದಿದ್ದರೂ, ಅಲ್ಲೇ ಉಪವಿಭಾಗ ಉಳಿಸಿ ಆರು ತಿಂಗಳಿಂದ ಕೆಲಸ ಇಲ್ಲದಿದ್ದರೂ ಸುಮ್ಮನೇ ಸಂಬಳ ಕೊಡಬೇಕೆ ಎಂದೂ ರೇವಣ್ಣ ಪ್ರಶ್ನಿಸಿದ್ದರು.