ಬೆಂಗಳೂರು: ಎಚ್ ಡಿ ಕುಮಾರಸ್ವಾಮಿ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಲು ಮುಂದಾಗಿದ್ದರು ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ದೊರೆತ ನಂತರ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಬಿಜೆಪಿ ಜೊತೆ ಕೈಜೋಡಿಸುವಂತೆ ತಮಗೆ ಆಹ್ವಾನ ನೀಡಿದ್ದರು. ಆದರೆ ನನಗೆ ನೋವಾಗಬಾರದು ಎಂಬ ಏಕೈಕ ಕಾರಣದಿಂದ ತಮ್ಮ ಪುತ್ರ ಎಚ್ ಡಿ ಕುಮಾರ ಸ್ವಾಮಿ ಕಾಂಗ್ರೆಸ್ ಜತೆ ಮೈತ್ರಿಮಾಡಿಕೊಂಡರು ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.
ನಗರದಲ್ಲಿಂದು ವಿದ್ಯುನ್ಮಾನ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ನಮ್ಮ ಜತೆ ಸೇರಿ ಸರ್ಕಾರ ರಚಿಸಲು ಬಿಜೆಪಿ ಸಿದ್ಧವಾಗಿತ್ತು ಎಂದು ಬಹಿರಂಗವಾಗಿ ಹೇಳಿದ್ದಾರೆ. ಈ ಹಿಂದೆ ಬಿಜೆಪಿ ಜತೆ ಸೇರಿ ಸರ್ಕಾರ ರಚನೆ ಮಾಡಿದಾಗಲೂ ತಾವು ಇಷ್ಟೊಂದು ನೋವು ಉಂಡಿರಲಿಲ್ಲ. ಆದರೆ ಎಲ್ಲಾ ನೋವು ಸಹಿಸಿಕೊಂಡು ಸರ್ಕಾರ ನಡೆಸುವಂತೆ ತಾವೇ ಕುಮಾರಸ್ವಾಮಿಗೆ ಸೂಚನೆ ನೀಡಿದ್ದೇ ಎಂದರು.
ಇದೇ ವೇಳೆ ಮುಂದಿನ ಉಪಚುನಾವಣೆಯಲ್ಲಿ ಸೀಟು ಹಂಚಿಕೆಯ ಬಗ್ಗೆ ಸೋನಿಯಾಗಾಂಧಿ ಏನಾದರೂ ಮಾತನಾಡಿದರೆ ಮುಂದಿನದ್ದನ್ನು ಆಮೇಲೆ ನೋಡೋಣ ಎಂದು ದೇವೇಗೌಡ ಹೇಳಿದ್ದಾರೆ
ಕಾಂಗ್ರೆಸ್ ಜೊತೆಗೆ ಮೈತ್ರಿ ಮುಗಿದ ಅಧ್ಯಾಯ- ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ
ದೇವೇಗೌಡರ ಆರೋಪದಲ್ಲಿ ಹುರುಳಿಲ್ಲ- ದಿನೇಶ್ ಗುಂಡೂರಾವ್
ಸಿದ್ದರಾಮಯ್ಯ ಆರೋಪಗಳಿಗೆ ಉತ್ತರಿಸಲು ಇದು ಸಕಾಲವಲ್ಲ- ಎಚ್. ಡಿ. ಕುಮಾರಸ್ವಾಮಿ
ದೇವೇಗೌಡ ಅವರದ್ದು ಬರೀ ರಾಜಕೀಯ ಲೆಕ್ಕಾಚಾರ: ಜಮೀರ್ ಅಹ್ಮದ್
ಮಗನ ನೋವು, ಕಣ್ಣೀರು, ಸಂಕಟ ನೋಡಿ ಪ್ರತಿದಿನ ಊಟ ಮಾಡುತ್ತಿದ್ದೆ: ದೇವೇಗೌಡ
Advertisement