ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಪದೇ ಪದೇ ಪಾಕಿಸ್ತಾನವನ್ನು ಎಳೆದು ತರುವ ಮೋದಿ ಭಾರತದ ಪ್ರಧಾನಿಯೋ ಪಾಕಿಸ್ತಾನದ ಪ್ರಧಾನಿಯೋ ಎಂಬ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರ ಟ್ವೀಟ್ ಟೀಕೆಗೆ ಬಿಜೆಪಿ ನಾಯಕರು ಖಡಕ್ ತಿರುಗೇಟು ನೀಡಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, 'ಮಾನ್ಯ ಕುಮಾರಸ್ವಾಮಿ ಅವರೇ, ಸಿದ್ದಗಂಗಾ ಮಠದ ಸ್ವಾಮೀಜಿಗಳೇ ಪ್ರಧಾನಿ ಮೋದಿ ಭಾಷಣವನ್ನು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ. ಪಾಸ್ಟಿಕ್ ನಿಷೇಧ, ಬಯಲು ಶೌಚಾಲಯ ಮುಕ್ತ ಕನಸು ಮತ್ತು ಜಲಸಂರಕ್ಷಣೆ ಈ ವಿಚಾರಗಳು ಮಕ್ಕಳಿಗೆ ಪ್ರೇರಣೆ ಎಂದು ಶ್ರೀಗಳೇ ಹೇಳಿರುವಾಗ, ನಿಮ್ಮ ಕುಹಕಕ್ಕೆ ನಾಡಿನ ಜನತೆ ಉತ್ತರಿಸುತ್ತಾರೆ ಎಂದು ಟ್ವೀಟ್ ಮಾಡಿದೆ.
ಅಂತೆಯೇ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಅವರೂ ಕೂಡ ತಿರುಗೇಟು ನೀಡಿದ್ದು, 'ಸದಾ ದೇಶದ ಬಗ್ಗೆ ಚಿಂತಿಸೋ ಪ್ರಧಾನಮಂತ್ರಿಗಳನ್ನು ಯಾವ ದೇಶದ ಪ್ರಧಾನಿ ಅಂತ ಪ್ರಶ್ನೆ ಮಾಡುವ ಕುಮಾರಸ್ವಾಮಿಗೆ ಮಜಾ ಮಾಡಲು ಖುಷಿ ಪಡಲು ಬೇರೆ ದೇಶ ಬೇಕು. ದುಃಖ, ಕಣ್ಣೀರು ಹಾಕಲು ಈ ದೇಶ ಬೇಕು ಅಲ್ವಾ?’ ಎಂದು ವ್ಯಂಗ್ಯ ಮಾಡಿದ್ದಾರೆ.
ಅಂತೆಯೇ ಸಚಿವ ಸಿಟಿ ರವಿ ಕೂಡ ಟ್ವೀಟ್ ಮಾಡಿದ್ದು, 'ಸಿದ್ಧಗಂಗಾ ಮಠದಲ್ಲಿ ಮೋದಿ ಮಾಡಿದ ಭಾಷಣ ಉಪಯುಕ್ತವಾಗಿದೆ ಎಂದು ಸಿದ್ಧಲಿಂಗ ಶ್ರೀಗಳೇ ಹೇಳಿದ್ದಾರೆ. ಇನ್ನಾದರೂ ಮಾಜಿ ಮುಖ್ಯಮಂತ್ರಿಗಳು ಕೊಳಕು ಟೀಕೆ ಕೊನೆ ಮಾಡಲಿ, ಎಂದು ಸಚಿವ ಸಿಟಿ ರವಿ ಹೇಳಿದ್ದಾರೆ.
ನಿನ್ನೆಯ ದಿನ ಮಾನ್ಯ ಪ್ರಧಾನಿ @narendramodi ಅವರು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಾಡಿದ ಭಾಷಣ ಮಕ್ಕಳಿಗೆ ಉಪಯುಕ್ತವಾಗಿದೆ ಸಿದ್ದಗಂಗಾ ಶ್ರೀಗಳೇ ಹೇಳಿದ್ದಾರೆ.
— C T Ravi
ಇನ್ನಾದರೂ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಕರ್ಮಯೋಗಿ ಮೋದಿಯವರ ವಿರುದ್ಧ ಮಾಡುತ್ತಿರುವ ಕೊಳಕು ಟೀಕೆಗಳಿಗೆ ಅಂತ್ಯ ಹಾಡಲಿ.#KarnatakaWithModi
Advertisement