ಬೆಳಗಾವಿ: ತಮ್ಮ ನೂತನ ಕಾರಿಗೆ ಸ್ಮಶಾನದಲ್ಲೇ ಚಾಲನೆ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನಡೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪರೋಕ್ಷ ಆಕ್ಷೇಪವೆತ್ತಿದ್ದು ಇದೂ ಕೂಡಾ ಮೌಢನಂಬಿಕೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಸುರೇಶ್ ಕುಮಾರ್, 'ತಾನು ಮೂಢನಂಬಿಕೆಯ ವಿರುದ್ಧ ಇದ್ದೇನೆ ಎಂದು ರುಜುವಾತು ಮಾಡಲು ತನ್ನ ಹೊಸ ಕಾರಿಗೆ ಸ್ಮಶಾನದಲ್ಲಿಯೇ ಚಾಲನೆ ಕೊಡುತ್ತೇನೆ ಎಂಬುವುದು ಮೂಢನಂಬಿಕೆಯಲ್ಲವೇ. ಸಾಮಾಜಿಕ ಜಾಲತಾಣಗಳಲ್ಲೂ ಈ ಕುರಿತಾಗಿ ಪರ ಹಾಗೂ ವಿರೋಧವಾದ ಚರ್ಚೆಗಳು ನಡೆಯುತ್ತಿವೆ. ಕೆಲವರು ಇದು ಮೌಢ್ಯದ ವಿರುದ್ಧವಾದ ನಡೆ ಎಂದರೆ ಮತ್ತೆ ಕೆಲವರು ಇದರ ಅವಶ್ಯಕತೆ ಏನು ಎಂದು ಪ್ರಶ್ನಿಸಿದ್ದಾರೆ.
ಮೌಢ್ಯ ವಿರೋಧಿ ಕಾರ್ಯಕ್ರಮಗಳಿಂದ ಗಮನಸೆಳೆಯುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಮ್ಮ ನೂತನ ಕಾರಿಗೆ ಸೋಮವಾರ ಬೆಳಗಾವಿ ಜಿಲ್ಲೆಯ ಸದಾಶಿವನಗರದ ಸ್ಮಶಾನದಲ್ಲೇ ಚಾಲನೆ ನೀಡುವ ಮೂಲಕ ಗಮನಸೆಳೆದಿದ್ದಾರೆ.
Advertisement