ಬೆಂಗಳೂರು: ಕೋವಿಡ್-19 ಹೆಸರಿನಲ್ಲಿಯೂ ಸರ್ಕಾರಗಳುಲೂಟಿ ಹೊಡೆಯುತ್ತಿದ್ದು, ಇಂತಹ ಸಂಕಷ್ಟ ಪರಿಸ್ಥಿತಿಯಲ್ಲೂ ಇಂತಹ ಲೂಟಿ ಕೆಲಸವನ್ನು ಮಾತ್ರ ಬಿಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಕಾಮಾಕ್ಷಿಪಾಳ್ಯದಲ್ಲಿ ಜೆಡಿಎಸ್ ಮುಖಂಡರಿಂದ ಜನರಿಗೆ ಉಚಿತ ಆಹಾರ ದಿನಸಿ ಸಾಮಾಗ್ರಿ ವಿತರಣೆಗೆ ಕುಮಾರಸ್ವಾಮಿ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಕೃತಿಯ ವಿಕೋಪದಲ್ಲಿಯೂ ಪರಿಹಾರ ನೀಡುವುದನ್ನು ಬಿಟ್ಟು ಸರ್ಕಾರ ಸಾಲ ಪಡೆಯಿರಿ ಎಂದು ಪ್ಯಾಕೇಜ್ ಘೋಷಿಸಿರುವುದು ಬಡವರ ಬದುಕಿನ ಜೊತೆಗೆ ಚೆಲ್ಲಾಟವಾಗಿದೆ. ಮಾಧ್ಯಮಗಳಿಗೆ ತೋರಿಸಲು ಸರ್ಕಾರ ನಡೆಸಬಾರದು. ಯಾವುದೇ ಸರ್ಕಾರ ಕೇವಲ ಖಜಾನೆ ತುಂಬಿಸುವ ಕೆಲಸ ಮಾಡದೇ ಜನರಿಗೆ ಹತ್ತಿರವಾಗುವಂತಹ ಕೆಲಸ ಮಾಡಬೇಕು ಎಂದು ಹೇಳಿದರು.
Advertisement