ಬೆಂಗಳೂರು: ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ (Congress) ಸತತ ಸೋಲನ್ನೇ ಕಾಣುತ್ತಿರುವ ಸಂದರ್ಭದಲ್ಲಿ, ಕರ್ನಾಟಕ ವಿಧಾನಸಭೆಯ ಮೇ 10 ರ ಚುನಾವಣೆ ಗೆಲುವು ತನ್ನ ರಾಜಕೀಯ ಅದೃಷ್ಟದ ಪುನರುಜ್ಜೀವನಕ್ಕೆ ಅತ್ಯಂತ ಮುಖ್ಯವಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka assembly poll 2023) ಗೆದ್ದರೆ ಅದರ ರಾಜಕೀಯ ಭವಿಷ್ಯ ಬೆಳಗುವುದು ಮಾತ್ರವಲ್ಲದೆ ಪ್ರಮುಖ ವಿರೋಧ ಪಕ್ಷವಾಗಿ ತನ್ನ ಅರ್ಹತೆಯನ್ನು ಬಲಪಡಿಸುತ್ತದೆ ಇದು ನೆರವಾಗುತ್ತದೆ. 2024 ರ ಲೋಕಸಭೆ ಚುನಾವಣೆಗೆ ಮುನ್ನ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಎದುರಿಸಲು ಕರ್ನಾಟಕ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕರ್ನಾಟಕದಲ್ಲಿ ಗೆಲುವನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ, ಈಶಾನ್ಯ ರಾಜ್ಯಗಳಲ್ಲಿನ ಇತ್ತೀಚಿನ ಸೋಲಿನ ನಂತರ ಪಕ್ಷವು ಪುಟಿದೇಳಲು ಬಯಸುತ್ತಿದೆ. ಹಿಂದಿ ಭಾಷಿಕರ ಹೃದಯ ಭಾಗವಾಗಿರುವ ಮಧ್ಯ ಪ್ರದೇಶದಲ್ಲಿ ಈ ವರ್ಷಾಂತ್ಯದಲ್ಲಿ ಚುನಾವಣೆಯಿದೆ. ಬಿಜೆಪಿಯ ಯುದ್ಧ-ಸಿದ್ಧ ಚುನಾವಣಾ ಯಂತ್ರವನ್ನು ಎದುರಿಸಲು ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ರಾಜಸ್ಥಾನ ರಾಜ್ಯಗಳ ಚುನಾವಣಾ ಫಲಿತಾಂಶಗಳು ಕೂಡ ಕಾಂಗ್ರೆಸ್ ಗೆ ಮುಖ್ಯವಾಗುತ್ತದೆ.
ಕಾಂಗ್ರೆಸ್ ತನ್ನ ಸ್ಥಳೀಯ ನಾಯಕತ್ವದ ಬಲದ ಮೇಲೆ ಕರ್ನಾಟಕದಲ್ಲಿ ಚುನಾವಣೆ ಎದುರಿಸುತ್ತಿರುವಂತೆ ಕಾಣುತ್ತಿದೆ. ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಕೇಂದ್ರೀಕರಿಸಿದೆ ಹೊರತು ದೇಶಕ್ಕೆ ಸಂಬಂಧಪಟ್ಟ ವಿಷಯಗಳನ್ನು ತರುತ್ತಿಲ್ಲ. ಭ್ರಷ್ಟಾಚಾರವನ್ನು ತನ್ನ ಪ್ರಚಾರದ ಕೇಂದ್ರ ವಿಷಯವಾಗಿದೆ ಕಾಂಗ್ರೆಸ್.
ಕಲಬುರಗಿ ಜಿಲ್ಲೆಯವರೇ ಆದ ಕನ್ನಡಿಗ ಎಂ ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವುದರೊಂದಿಗೆ ಈ ಬಾರಿಯ ಚುನಾವಣೆ ಕಾಂಗ್ರೆಸ್ ಗೆ ಪ್ರತಿಷ್ಠೆಯ ಕಣವಾಗಿದೆ. ಆದಾಗ್ಯೂ, ಕಾಂಗ್ರೆಸ್ ನೊಳಗಿನ ಗುಂಪುಗಾರಿಕೆ ಪಕ್ಷಕ್ಕೆ ಸದ್ಯ ಸವಾಲಾಗಿದೆ. ಇಬ್ಬರು ಮುಖ್ಯಮಂತ್ರಿ ಆಕಾಂಕ್ಷಿಗಳಾದ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರ ಪಾಳೆಯಗಳ ನಡುವೆ ಕೆಲವು ಸಮಯದಿಂದ ರಾಜಕೀಯ ಜಟಾಪಟಿ ತೆರೆಮರೆಯಲ್ಲಿ ನಡೆಯುತ್ತಿರುವುದು ಸುಳ್ಳಲ್ಲ.
ಎಐಸಿಸಿ ಅಧ್ಯಕ್ಷ ಖರ್ಗೆ ಅವರ ತವರು ರಾಜ್ಯದಲ್ಲಿ ಕಾಂಗ್ರೆಸ್ನ SWOT (ಸಾಮರ್ಥ್ಯ, ದೌರ್ಬಲ್ಯ, ಅವಕಾಶಗಳು, ಬೆದರಿಕೆಗಳು) ವಿಶ್ಲೇಷಣೆ ಇಲ್ಲಿದೆ.
ಸಾಮರ್ಥ್ಯಗಳು:
ದೌರ್ಬಲ್ಯಗಳು:
ಅವಕಾಶಗಳು:
ಬೆದರಿಕೆಗಳು:
Advertisement