ಕರ್ನಾಟಕದಲ್ಲಿ 31 ಜಾತಿಯ ಉಭಯಚರಗಳು ಅಳಿವಿನಂಚಿನಲ್ಲಿ: ಸಂಶೋಧಕರು

1853ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಉಭಯಚರಗಳ ಕುರಿತು ವಿವರಿಸಲಾಗಿತ್ತು. ಅಂದಿನಿಂದ, ಕರ್ನಾಟಕದಲ್ಲಿ ಉಭಯಚರಗಳ ಆವಿಷ್ಕಾರಗಳು ತೀವ್ರ ಏರಿಕೆ ಕಂಡಿವೆ.
Researchers note 31 endemic species in Karnataka
ಅಳಿವಿನಿಂಚಿನಲ್ಲಿರುವ ಜಾತಿಯ ಪ್ರಾಣಿಗಳು
Updated on

ಬೆಂಗಳೂರು: ರಾಜ್ಯದ ಉಭಯಚರಗಳ ಎಲ್ಲಾ ಮಾಹಿತಿಯನ್ನು ರಾಜ್ಯದ ಸಂಶೋಧಕರ ತಂಡ ಕ್ರೋಢೀಕರಿಸಿದ್ದು, ಕರ್ನಾಟಕದಲ್ಲಿ 2015 ರಲ್ಲಿ 92 ಜಾತಿಯ ಉಭಯಚರ ಜಾತಿಗಳು ಇದ್ದವು. 2024 ರಲ್ಲಿ ಈ ಪ್ರಮಾಣ 102 ಕ್ಕೆ ಏರಿದೆ ಎಂದು ಅವರು ಕಂಡುಕೊಂಡಿದ್ದಾರೆ. ಈ 102 ಜಾತಿಗಳ ಪೈಕಿ 31 ಪ್ರಭೇಧಗಳು ಅಳಿವಿನಂಚಿನಲ್ಲಿರುವ ಪ್ರಭೇಧಗಳಾಗಿವೆ ಎಂದು ಸಂಶೋಧಕರು ಸೂಚಿಸಿದ್ದಾರೆ.

ಈ ಪಟ್ಟಿಯಲ್ಲಿ Nyctibatrachus karnatakaensis (ಕುದುರೆಮುಖ ಸುಕ್ಕುಗಟ್ಟಿದ ಕಪ್ಪೆ), ರಾರ್ಚೆಸ್ಟೆಸ್ ಎಕಿನಾಟಸ್ (ಸ್ಪೈನಿ ಬುಷ್ ಫ್ರಾಗ್); ಮೈಕ್ರೋಹೈಲಾ ಲ್ಯಾಟರೈಟ್ (ಲ್ಯಾಟರೈಟ್ ಕೋರಸ್ ಫ್ರಾಗ್); Micrixalus kottigeharensis (ಕೊಟ್ಟಿಗೆಹಾರ್ ಟೊರೆಂಟ್ ಕಪ್ಪೆ); ರಾರ್ಚೆಸ್ಟೆಸ್ ಹೊನ್ನಮೆಟ್ಟಿ (ಹೊನ್ನಮೆಟ್ಟಿ ಬುಷ್ ಫ್ರಾಗ್) ಪ್ರಭೇಧಗಳು ಕರ್ನಾಟಕಕ್ಕೆ ಸ್ಥಳೀಯವಾಗಿದೆ ಎಂದು ಸಂಶೋಧನಾ ಪ್ರಬಂಧದಲ್ಲಿ ತಿಳಿಸಲಾಗಿದೆ.

"ಈ ಸಂಶೋಧನೆಯು ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಇತರ ರಾಜ್ಯಗಳು ಉತ್ತಮ ಯೋಜನೆ ಮತ್ತು ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಪರಿಸರ ಮತ್ತು ಅರಣ್ಯ ಇಲಾಖೆಗಳು ರಾಜ್ಯದಲ್ಲಿರುವ ಸ್ಥಳೀಯ ಕಪ್ಪೆ ಪ್ರಭೇದಗಳನ್ನು ಗುರುತಿಸುವ ಮತ್ತು ಘೋಷಿಸುವ ಕೆಲಸ ಮಾಡುತ್ತಿವೆ ಮತ್ತು ಈಗ ಸಾರ್ವಜನಿಕ ಡೊಮೇನ್‌ನಲ್ಲಿರುವ ಈ ಸಂಶೋಧನಾ ಪ್ರಬಂಧವು ಸಹಾಯ ಮಾಡುತ್ತದೆ ಎಂದು ನಗರ ಪರಿಸರ, ಜೈವಿಕ ವೈವಿಧ್ಯ, ವಿಕಾಸ ಮತ್ತು ಹವಾಮಾನ ಬದಲಾವಣೆ (CUBEC) ಕೇಂದ್ರದ ಕೆ ಎಸ್ ಚೇತನ್ ನಾಗ್ ಹೇಳಿದರು.

Researchers note 31 endemic species in Karnataka
ಬಂಡೀಪುರದಲ್ಲಿ ಮೊದಲ ಬಾರಿ ಚಿಪ್ಪುಹಂದಿ ಗೋಚರ... ಅಳಿವಿನಂಚಿನ ಪ್ರಾಣಿ ರಕ್ಷಣೆ

ರಾಜ್ಯಕ್ಕೆ ನವೀಕರಿಸಿದ ಪರಿಶೀಲನಾಪಟ್ಟಿಯೊಂದಿಗೆ ಕರ್ನಾಟಕದ ಕೃಷಿ-ಹವಾಮಾನ ವಲಯಗಳ ಉಭಯಚರಗಳು (Amphibians of agro-climatic zones of Karnataka with an updated checklist for the state) ಎಂಬ ಸಂಶೋಧನಾ ಪ್ರಬಂಧವನ್ನು ಸೆಪ್ಟೆಂಬರ್ 26 ರಂದು ಭಾರತೀಯ ಝೂಲಾಜಿಕಲ್ ಸರ್ವೇ ಆಫ್ ರೆಕಾರ್ಡ್ಸ್‌ನಲ್ಲಿ ಪ್ರಕಟಿಸಲಾಗಿದೆ. ಈ ಪ್ರಬಂಧದಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಜೆನೆಟಿಕ್ಸ್ ಸಂಶೋಧನಾ ಪ್ರಯೋಗಾಲಯದ ಸಂಶೋಧಕರು ಯುವರಾಜ ಕಾಲೇಜು, ಮೈಸೂರು ವಿಶ್ವವಿದ್ಯಾನಿಲಯ, ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾ (ZSI), ಪಶ್ಚಿಮ ಪ್ರಾದೇಶಿಕ ಕೇಂದ್ರ (WRC), ಪುಣೆ ಮತ್ತು ಮೌಂಟ್ ಕಾರ್ಮೆಲ್ ಕಾಲೇಜು, ಬೆಂಗಳೂರುಗೆ ಸಂಶೋಧಕರು ಪಾಲ್ಗೊಂಡಿದ್ದರು ಎನ್ನಲಾಗಿದೆ.

1853ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಉಭಯಚರಗಳ ಕುರಿತು ವಿವರಿಸಲಾಗಿತ್ತು. ಅಂದಿನಿಂದ, ಕರ್ನಾಟಕದಲ್ಲಿ ಉಭಯಚರಗಳ ಆವಿಷ್ಕಾರಗಳು ತೀವ್ರ ಏರಿಕೆ ಕಂಡಿವೆ. ಕರ್ನಾಟಕದ ಉಭಯಚರಗಳ ಪರಿಶೀಲನಾಪಟ್ಟಿಯನ್ನು ಮೊದಲು 2013 ರಲ್ಲಿ 88 ಜಾತಿಗಳೊಂದಿಗೆ ತಯಾರಿಸಲಾಯಿತು, ನಂತರ 2015 ರಲ್ಲಿ ಅದು 92 ಜಾತಿಗಳನ್ನು ಹೊಂದಿತ್ತು. ಈಗ ಈ ಸಂಖ್ಯೆ 102 ಜಾತಿಗಳಿಗೆ ಏರಿಕೆಯಾಗಿದೆ.

image-fallback
ಅಳಿವಿನಂಚಿನ ಕರ್ಲೀವ್ ಪಕ್ಷಿ ಪತ್ತೆ

ಪ್ರಸ್ತುತ ಪರಿಶೀಲನಾಪಟ್ಟಿಯಲ್ಲಿ, ರಾಜ್ಯದ ಕೃಷಿ-ಹವಾಮಾನ ವಲಯಗಳ ಆಧಾರದ ಮೇಲೆ ಜಾತಿಯ ವೈವಿಧ್ಯತೆಯನ್ನು ವರ್ಗೀಕರಿಸಲಾಗಿದೆ. ನಮ್ಮ ಅಧ್ಯಯನಗಳು 89 ಜಾತಿಗಳೊಂದಿಗೆ ಕರ್ನಾಟಕದ ಗುಡ್ಡಗಾಡು ಕೃಷಿ-ಹವಾಮಾನ ವಲಯಗಳಲ್ಲಿ ಅತಿ ಹೆಚ್ಚು ಜಾತಿಯ ವೈವಿಧ್ಯತೆಯನ್ನು ಗುರುತಿಸಿದೆ ಎಂದು ಹೇಳಿದೆ. ನಂತರ 24 ಜಾತಿಗಳೊಂದಿಗೆ ದಕ್ಷಿಣದ ಸಂಕ್ರಮಣ ವಲಯ; ಆರು ಜಾತಿಯ ವೈವಿಧ್ಯತೆಯೊಂದಿಗೆ ಈಶಾನ್ಯ ಪರಿವರ್ತನಾ ವಲಯ ಮತ್ತು ಈಶಾನ್ಯ ಒಣ ವಲಯದಲ್ಲಿ ಕನಿಷ್ಠ ಜಾತಿಯ ವೈವಿಧ್ಯತೆಯನ್ನು ಪತ್ತೆ ಮಾಡಿದೆ. ಅಳಿವಿನಂಚಿನಲ್ಲಿರುವ ಜಾತಿಗಳ ವರ್ಗದಲ್ಲಿ ನಾಲ್ಕು ಪ್ರಭೇದಗಳು ತೀವ್ರ ಅಳಿವಿನಂಚಿನಲ್ಲಿದ್ದು, 14 ಅಳಿವಿನಂಚಿನಲ್ಲಿರುವ ಮತ್ತು ಐದು ಜಾತಿಗಳನ್ನು ದುರ್ಬಲ ಎಂದು ವರ್ಗೀಕರಿಸಲಾಗಿದೆ" ಎಂದು ಪತ್ರಿಕೆ ಹೇಳಿದೆ.

image-fallback
ಅಳಿವಿನಂಚಿನ ಸಸ್ಯ ಪ್ರಭೇದ ಸಂರಕ್ಷಣೆಗೆ ಟ್ರೀ ಪಾರ್ಕ್

ಆವಾಸಸ್ಥಾನದ ವಿಘಟನೆ ಅಂದರೆ ಪರಿಸರ ಬದಲಾವಣೆಯು ಉಭಯಚರಗಳ ಪ್ರಸರಣಕ್ಕೆ ತೀವ್ರ ಬೆದರಿಕೆಯಾಗಿದೆ. ಅವುಗಳ ಉಳಿವಿಗಾಗಿ ಮತ್ತು ಜೀವನ ಚಕ್ರವನ್ನು ಪೂರ್ಣಗೊಳಿಸಲು ಭೂಮಿ ಮತ್ತು ನೀರು ಎರಡೂ ಅಗತ್ಯವಿರುವುದರಿಂದ ಅವುಗಳ ಉಳಿವು ಕೃಷಿ ಭೂಮಿ ಮತ್ತು ಜಲಮೂಲಗಳೊಂದಿಗೆ ನಿಕಟ ಸಂಬಂಧದ ಮೇಲೆ ನಿಂತಿದೆ. ಈ ಪ್ರದೇಶಗಳಲ್ಲಿ ಈಗಾಗಲೇ ಲಭ್ಯವಿರುವ ಜಾತಿಗಳ ಕಾರ್ಯಸಾಧ್ಯವಾದ ಜನಸಂಖ್ಯೆಯನ್ನು ಬೆಂಬಲಿಸುತ್ತವೆ. ಕರ್ನಾಟಕದಲ್ಲಿ ಉಭಯಚರಗಳ ಸಂರಕ್ಷಣೆಗಾಗಿ ತಕ್ಷಣದ ಸಂರಕ್ಷಣಾ ಕ್ರಮಗಳ ಭಾಗವಾಗಿ ಕೃಷಿ-ಹವಾಮಾನ ವಲಯದಲ್ಲಿ ಲಭ್ಯವಿರುವ ಕೊಳ ಪರಿಸರ ವ್ಯವಸ್ಥೆಗಳು ಮತ್ತು ಜೌಗು ಪ್ರದೇಶಗಳ ಪರಿಸರ ವ್ಯವಸ್ಥೆಗಳು ಅಗತ್ಯವಿದೆ ಎಂದು ಅಧ್ಯಯನವು ಸೂಚಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com