ಕೇರಳದ ಮಡಿಲಿಗೆ ವಾಜಪೇಯಿ ಕಪ್

ಸಂಘಟಿತ ಆಟ ಪ್ರದರ್ಶಿಸಿದ ಕೇರಳ ವಾಲಿಬಾಲ್ ತಂಡ, ಕರ್ನಾಟಕ ರಾಜ್ಯ ವಾಲಿಬಾಲ್ ಸಂಸ್ಥೆ ಹಾಗೂ ರಾಜಾಜಿನಗರ...
ವಾಲಿಬಾಲ್ ತಂಡ (ಸಂಗ್ರಹ ಚಿತ್ರ)
ವಾಲಿಬಾಲ್ ತಂಡ (ಸಂಗ್ರಹ ಚಿತ್ರ)

ಬೆಂಗಳೂರು: ಸಂಘಟಿತ ಆಟ  ಪ್ರದರ್ಶಿಸಿದ ಕೇರಳ ವಾಲಿಬಾಲ್ ತಂಡ, ಕರ್ನಾಟಕ ರಾಜ್ಯ ವಾಲಿಬಾಲ್ ಸಂಸ್ಥೆ ಹಾಗೂ ರಾಜಾಜಿನಗರ ಕ್ರೀಡಾ ಮತ್ತು ಸಂಸ್ಕೃತಿ ಸಂಘದ ಆಶ್ರಯದಲ್ಲಿ ಆಯೋಜಿಸಲಾದ 13 ನೇ ವಾಜಪೇಯಿ ಕಪ್ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಎತ್ತಿ ಹಿಡಿದಿದೆ.

ಗುರುವಾರ ನಡೆದ ಪುರುಷರ ವಿಭಾಗದ ಫೈನಲ್ ಪಂದ್ಯದಲ್ಲಿ ಎದುರಾಳಿ ತಮಿಳುನಾಡು ತಂಡವನ್ನು 3-0 (25-18, 25-18, 25-22) ಅಂಕಗಳ ಅಂತರದಿಂದ ಮಣಿಸಿದ ಕೇರಳ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಪಂದ್ಯದ ಆರಂಭದಿಂದ ಅಂತ್ಯದವರೆಗೂ ಅದ್ಭುತ ಪ್ರದರ್ಶನ ನೀಡಿದ ಕೇರಳ ಆಟಗಾರರು ಮೊದಲ ಗೇಮ್‌ನಲ್ಲಿ 25-18 ಮುನ್ನಡೆ ಕಾಯ್ದುಕೊಂಡರು. ಇನ್ನು ಎರಡನೇ ಗೇಮ್‌ನಲ್ಲೂ ಲಯ ಮುಂದುವರಿಸಿ ಮತ್ತೆ 25-18ರ ಮೇಲುಗೈ ಸಾಧಿಸಿದರು. ಇನ್ನು ಮೂರನೇ ಸೆಟ್‌ನಲ್ಲೂ ಬಿಗಿ ಹಿಡಿತ ಸಾಧಿಸಿದ ಕೇರಳ 25-22 ಅಂತರ ಕಾಯ್ದುಕೊಂಡು ಪಂದ್ಯದಲ್ಲಿ ಗೆಲವಿನ ನಗೆ ಬೀರಿತು.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com