ಪಣಜಿ: ಕ್ರೀಡೆಯಲ್ಲಿರುವ ಕಳಪೆ ಆಡಳಿತವೇ ಇಂದು ದೇಶಕ್ಕೆ ಪದಕಗಳ ಕೊರತೆಯುಂಟಾಗಲು ಕಾರಣವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಅವರು ಸೋಮವಾರ ಹೇಳಿದ್ದಾರೆ.
ಗೋವಾದಲ್ಲಿಂದು ಕ್ರೀಡಾ ಮಂಡಳಿಯ ನಿರ್ವಾಹಕರನ್ನು ಭೇಟಿ ಮಾಡಿ ನಂತರ ಮಾತನಾಡಿರುವ ಅವರು, ಕಳಪೆ ಕ್ರೀಡಾ ಆಡಳಿತದಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಅಥ್ಲೀಟ್ಸ್ ಗಳು ಪದಕ ಗೆಲ್ಲುವಲ್ಲಿ ವಿಫಲರಾದರು ಎಂದು ಹೇಳಿದ್ದಾರೆ. ಅಲ್ಲದೆ, ದೇಶದಲ್ಲಿರುವ ಭ್ರಷ್ಟಾಚಾರವನ್ನು ತೊಲಗಿಸಿ, ಪರಿಸ್ಥಿತಿಯನ್ನು ಸುಧಾರಿಸುತ್ತೇವೆಂದು ಭರವಸೆ ನೀಡಿದ್ದಾರೆ.
ಬ್ಯಾಸ್ಕೆಟ್ ಬಾಲ್, ಚೆಸ್, ಕ್ರಿಕೆಟ್, ಟೇಬಲ್ ಟೆನ್ನಿಸ್, ಫುಟ್ ಬಾಲ್ ಕ್ರೀಡಾ ನಿರ್ವಾಹಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಮಾತುಕತೆ ವೇಳೆ ಹಲವರು ಬಹು ಹಂತದ ( ಮಲ್ಟಿ ಟೈಯರ್ ಸ್ಫೋರ್ಟ್ಸ್ ಪಾಲಿಸಿ)ಕ್ರೀಡಾ ನೀತಿಯನ್ನು ಜಾರಿಗೆ ತರುವಂತೆ ಮನವಿ ಮಾಡಿಕೊಂಡಿದ್ದಾರೆಂದು ಹೇಳಿದ್ದಾರೆ.
ಬಹುಹಂತದ ಕ್ರೀಡಾ ನೀತಿಯಲ್ಲಿ ವಿವಿಧ ರೀತಿಯ ಎಲ್ಲಾ ಕ್ರೀಡೆಗಳಿಗೆ, ಎಲ್ಲಾ ಹಂತದಲ್ಲಿಯೂ ಗಮನ ನೀಡಲಾಗುತ್ತದೆ. ಸ್ಥಳೀಯ ಕ್ರೀಡಾಪಟುಗಳು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಆಡುವ ವೃತ್ತಿಪರ ಕ್ರೀಡಾಪಟುಗಳಂತಹ ಎಲ್ಲಾ ರೀತಿಯ ಕ್ರೀಡಾಪಟುಗಳಿಗೂ ಇಲ್ಲಿ ಗಮನಕೊಡಲಾಗುತ್ತದೆ.
Advertisement