ನವದೆಹಲಿ: ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಗಡಿ ಕಾಯುವ ಯೋಧರಿಗೆ ಅಧಿಕಾರಿಗಳು ಕಳಪೆ ಗುಣಮಟ್ಟ ಆಹಾರವನ್ನು ನೀಡುತ್ತಿದ್ದಾರೆಂದು ಆರೋಪಿಸಿದ್ದ ಯೋಧ ತೇಜ್ ಬಹದ್ದೂರ್ ಅವರ ಬೆಂಬಲಕ್ಕೆ ಇದೀಗ ಕ್ರೀಡಾಪಟುಗಳು ಧಾವಿಸಿದ್ದಾರೆ.
ಗಡಿ ಕಾಯುವ ಯೋಧರಿಗೆ ಅಧಿಕಾರಿಗಳು ನೀಡುತ್ತಿರುವ ಕಳಪೆ ಗುಣಮಟ್ಟದ ಆಹಾರ ಕುರಿತಂತೆ ನಿನ್ನೆಯಷ್ಟೇ ಬಿಎಸ್ ಎಫ್ ಯೋಧರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಾಕಿ, ತಾವು ಎದುರಿಸುತ್ತಿರುವ ಪರಿಸ್ಥಿತಿಯನ್ನು ಹೇಳಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಅಧಿಕಾರಿಗಳ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗತೊಡಗಿವೆ.
ಇದರ ನಡುವೆಯ ಆರೋಪ ಮಾಡಿದ್ದ ಯೋಧ ತೇಜ್ ಬಹದ್ದೂರ್ ಅವರು ಅಧಿಕಾರಿಗಳ ವಿರುದ್ಧ ಮತ್ತೊಂದು ಆರೋಪ ಮಾಡಿದ್ದು, ತನ್ನ ವಿರುದ್ಧ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಂಡಿದ್ದು, ಬೇರೆಡೆಗೆ ವರ್ಗಾವಣೆ ಮಾಡಿದ್ದಾರೆಂದು ಹೇಳಿಕೊಂಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಇದೀಗ ಯೋಧ ತೇಜ್ ಬಹದ್ದೂರ್ ಅವರ ಬೆಂಬಲಕ್ಕೆ ಕ್ರೀಡಾಪಡುಗಳು ಬಂದಿದ್ದಾರೆ. ಯೋಧನ ವಿಡಿಯೋ ಕುರಿತಂತೆ ಟ್ವಿಟರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕ್ರೀಡಾಪಟುಗಳು, ಯೋಧರಿಗೆ ಸೂಕ್ತ ರೀತಿಯ ಸೌಲಭ್ಯ ಹಾಗೂ ಯೋಧರ ಕ್ಷೇಮ ಕಾಪಾಡುವಂತೆ ಆಗ್ರಹಿಸಿದ್ದಾರೆ.
ಯಾರು ಏನನ್ನೇ ಹೇಳಿರಲಿ ಮತ್ತು ಮಾಡಿರಲಿ ನಮ್ಮ ಯೋಧರು ಹಾಗೂ ರೈತರ ಕ್ಷೇಮವನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳಬೇಕು. ಯೋಧರಿಗೆ ಸರಿಯಾದ ರೀತಿಯಲ್ಲಿ ಆಹಾಹ ನೀಡಬೇಕು...#Food4Soldiers ಎಂದು ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಹೇಳಿದ್ದಾರೆ.
Whatever said and done,our Soldiers and Farmers need to be taken better care of. Proper food needs to reach them all.#Food4Soldiers pic.twitter.com/5WG9btYabs
— Virender Sehwag (@virendersehwag) January 10, 2017
ವಿಡಿಯೋ ನಿಜಕ್ಕೂ ಬೇಸರವನ್ನುಂಟು ಮಾಡಿದೆ. ಯೋಧರ ಅಗತ್ಯತೆಗಳು ಪೂರೈಕೆಯಾಗಲಿ ಎಂದು ಪ್ರಾರ್ಥಿಸುತ್ತೇನೆ. #SaveOurSoldiers ಎಂದು ಬಾಕ್ಸರ್ ವಿಜೇಂದರ್ ಸಿಂಗ್ ಅವರು ಹೇಳಿದ್ದಾರೆ.
Really disturbed by the video of our soldiers being deprived of food. Pray that their needs are taken care of .#SaveOurSoldiers
— Vijender Singh (@boxervijender) January 9, 2017
1 ರೊಟ್ಟಿ ಕೊಟ್ಟು ಶಾಪಿಂಗ್ ಬ್ಯಾಗ್ ಹೊತ್ತುಕೊಂಡು ಹೋಗಿ ಎನ್ನುವಂತಾಗಿದೆ ನಮ್ಮ ಸೈನಿಕರ ಪರಿಸ್ಥಿತಿ ಎಂದು ಕುಸ್ತಿಪಟು ಯೋಗೇಶ್ವರ್ ದತ್ ಅವರು ವ್ಯಂಗ್ಯವಾಡಿದ್ದಾರೆ.
रक्षको की दुर्दशा।सीमा पर 1 रोटी से duty और peace posting में मैडम के शॉपिंग बैग उठाओ।#saveBSF BSF Jawan Posted in J https://t.co/gLf6P1PCjz
— Yogeshwar Dutt (@DuttYogi) January 10, 2017
ನಮ್ಮ ಯೋಧರಿಗೆ ಸೂಕ್ತ ರೀತಿಯಲ್ಲಿ ಆಹಾರ ಪೂರೈಕೆ ಮಾಡಲೇಬೇಕು. ಅಷ್ಟೇ, ಮತ್ತೆ ಮಾತು ಬೇಡ ಎಂದು ಕ್ರಿಕೆಟಿಗ ಮೊಹಮ್ಮದ್ ಕೈಫ್ ಅವರು ಹೇಳಿದ್ದಾರೆ.
Proper food for our Jawans is a must.
— Mohammad Kaif (@MohammadKaif) January 10, 2017
Bas Baat Khatam.#SaveOurSoldiers
ನಮ್ಮನ್ನು ರಕ್ಷಣೆ ಮಾಡುತ್ತಿರುವ ಯೋಧರನ್ನು ನೀವು ನಿಜಕ್ಕೂ ಪ್ರೀತಿಸುವುದೇ ಆದರೆ, ನಿಮ್ಮಿಂದ ಸಾಧ್ಯವಾದಷ್ಟು ಈ ವಿಡಿಯೋವನ್ನು ಶೇರ್ ಮಾಡಿ ಎಂದು ಹರ್ಭಜನ್ ಸಿಂಗ್ ಅವರು ಹೇಳಿಕೊಂಡಿದ್ದಾರೆ.
Advertisement