ಕಾಮನ್ ವೆಲ್ತ್ ಕ್ರೀಡಾಕೂಟ: ಚಿನ್ನ ಗೆದ್ದ ಸತೀಶ್ ಶಿವಲಿಂಗಮ್ ಗೆ ಅಭಿನಂದನೆಗಳ ಮಹಾಪೂರ

ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ವೇಟ್ ಲಿಫ್ಟಿಂಗ್ ಕ್ರೀಡೆಯಲ್ಲಿ ಭಾರತಕ್ಕೆ ಚಿನ್ನದ ಪದಕ ತಂದು ಕೊಟ್ಟಿರುವ ಸತೀಶ್ ಕುಮಾರ್ ಶಿವಲಿಂಗಮ್ ಅವರ ಸಾಧನೆಗೆ ದೇಶಾದ್ಯಾಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ವೇಟ್ ಲಿಫ್ಟಿಂಗ್ ಕ್ರೀಡೆಯಲ್ಲಿ ಭಾರತಕ್ಕೆ ಚಿನ್ನದ ಪದಕ ತಂದು ಕೊಟ್ಟಿರುವ ಸತೀಶ್ ಕುಮಾರ್ ಶಿವಲಿಂಗಮ್ ಅವರ ಸಾಧನೆಗೆ ದೇಶಾದ್ಯಾಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಪ್ರಮುಖವಾಗಿ ಸತೀಶ್ ಶಿವಲಿಂಗಮ್ ತಮಿಳುನಾಡು ಮೂಲದವರಾದ್ದವರಿಂದ ತಮಿಳು ಮಾಧ್ಯಮಗಳು ಸತೀಶ್ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತಿವೆ. ಇನ್ನು ಸತೀಶ್ ಸಾಧನೆಯನ್ನು ಸ್ವತಃ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶ್ಲಾಘಿಸಿದ್ದು, ಭಾರತಕ್ಕೆ ಮತ್ತೊಂದು ಚಿನ್ನದ ಪದಕ ತಂದು ಕೊಟ್ಟ ಸತೀಶ್ ಗೆ ಅಭಿನಂದನೆಗಳು  ಎಂದು ಟ್ವೀಟ್ ಮಾಡಿದ್ದಾರೆ.
ಅಂತೆಯೇ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ಸತೀಶ್ ಸಾಧನೆಯನ್ನು ಹೊಗಳಿದ್ದು, ಮತ್ತೊಂದು ಬೆಳಗಿನ ಉಡುಗೊರೆಯನ್ನು ಸತೀಶ್ ನೀಡಿದ್ದಾರೆ. ಭಾರತಕ್ಕೆ ಇದು ಮೂರನೇ ಚಿನ್ನವಾಗಿದೆ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com