ತಮಿಳುನಾಡು ಜಯಲಲಿತಾ (ಸಂಗ್ರಹ ಚಿತ್ರ)
ತಮಿಳುನಾಡು ಜಯಲಲಿತಾ (ಸಂಗ್ರಹ ಚಿತ್ರ)

ಕರ್ನಾಟಕದಿಂದ ಪ್ರವಾಹ ಪರಿಹಾರ ಸ್ವೀಕರಿಸಿದ ಅಮ್ಮ

ಪ್ರವಾಹ ಸಂತ್ರಸ್ತರಿಗೆ ಕರ್ನಾಟಕ ಸರ್ಕಾರ ಘೋಷಿಸಿದ್ದ ಪರಿಹಾರವನ್ನು ತಮಿಳುನಾಡು ಸ್ವೀಕರಿಸುತ್ತಿದೆ....
Published on

ಬೆಂಗಳೂರು: ಪ್ರವಾಹ ಸಂತ್ರಸ್ತರಿಗೆ ಕರ್ನಾಟಕ ಸರ್ಕಾರ ಘೋಷಿಸಿದ್ದ ಪರಿಹಾರವನ್ನು ತಮಿಳುನಾಡು ಸ್ವೀಕರಿಸುತ್ತಿದೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ರು.5 ಕೋಟಿ ನೆರವು ಘೋಷಿಸಿದ್ದಾರೆ. ಜತೆಗೆ ಬೇಡಿಕೆಗೆ ತಕ್ಕಂತೆ ಹಾಲಿನ ಪುಡಿ ಮತ್ತು ಇತರ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದಲ್ಲದೆ 50,000  ರಗ್ಗುಗಳನ್ನೂ ಕೇಳಿದ್ದು, ಅದನ್ನೂ ಪೂರೈಸಲಾಗುತ್ತಿದೆ. ಆದರೆ, ಅಲ್ಲಿನ ಹೊಂದಾಣಿಕೆ ಸಮಸ್ಯೆಯಿಂದಲೋ ಏನೋ ಪರಿಹಾರ ಸಾಮಗ್ರಿಗಳನ್ನು ಎಲ್ಲಿ ಯಾವ ರೀತಿ ನೀಡಬೇಕೆನ್ನುವ ಬಗ್ಗೆ ಗೊಂದಲವಿದೆ  ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.

ಫೋಟೊ ರಾಜಕಾರಣದಲ್ಲಿ ಆಸಕ್ತಿಯಿಲ್ಲ: ರಾಜ್ಯದಿಂದ ಹೊಗುತ್ತಿರುವ ಸಾಮಗ್ರಿಗಳಿಗೆ ಜಯಲಲಿತಾ ಫೋಟೋ ಹಾಕುತ್ತಿರಬಹುದು. ಅದಕ್ಕೆ ಬಗ್ಗೆ ನಾವು ಆಸಕ್ತಿ ವಹಿಸುವುದಿಲ್ಲ. ಬದಲಾಗಿ ಅಲ್ಲಿನ  ಸಂತ್ರಸ್ತರಿಗೆ ನೆರವಾಗುತ್ತಿದ್ದೇವೆ. ನೆರವು ನೀಡುವುದಕ್ಕಾಗಿಯೇ 1070 ಸಂಖ್ಯೆ ಸಹಾಯವಾಣಿ ತೆರೆಯಲಾಗಿದೆ. ಅದಕ್ಕೆ ಕರೆಗಳು ಬರುತ್ತಿದ್ದು, ಅದಕ್ಕೆ ಸ್ಪಂದಿಸಿ ನೆರವು ಒದಗಿಸಲಾಗುತ್ತಿದೆ ಎಂದು  ಟಿ.ಬಿ.ಜಯಚಂದ್ರ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com