ಶಿವರಾಜ್ ಕುಮಾರ್, ಸುದೀಪ್
ಶಿವರಾಜ್ ಕುಮಾರ್, ಸುದೀಪ್

ಶಿವಣ್ಣನಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಸುದೀಪ್

ವ್ಯಾಯಾಮ ಮಾಡುವ ವೇಳೆ ಅಸ್ವಸ್ಥರಾಗಿ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವರಾಜ್ ಕುಮಾರ್ ಅವರಿಗೆ ನಟ ಸುದೀಪ್ ದೂರವಾಣಿ ಕರೆ ಮಾಡಿ...
Published on
ಬೆಂಗಳೂರು: ವ್ಯಾಯಾಮ ಮಾಡುವ ವೇಳೆ ಅಸ್ವಸ್ಥರಾಗಿ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವರಾಜ್ ಕುಮಾರ್ ಅವರಿಗೆ ನಟ ಸುದೀಪ್ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ನಂತರ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಟ್ವೀಟ್ ಮಾಡಿರುವು ಸುದೀಪ್, ನಾನು ಖುದ್ದು ಶಿವಣ್ಣ ಮತ್ತು ಗೀತಕ್ಕನ ಜೊತೆ ಮಾತನಾಡಿದ್ದೇನೆ. ಶಿವಣ್ಣ ಆರೋಗ್ಯವಾಗಿದ್ದಾರೆ. ಅವರು ಕಲ್ಲು ಬಂಡೆಯಂತೆ. ಶೀಘ್ರವಾಗಿ ಆರೋಗ್ಯದಲ್ಲಿ ಚೇತರಿಕೆ ಕಂಡು ಮನೆಗೆ ಹಿಂದಿರುಗುತ್ತಾರೆ.
ಶಿವಣ್ಣ ಅಭಿಮಾನಿಗಳಿಗೆ ನಾನು ಭರವಸೆ ಕೊಡುತ್ತೇನೆ. ನನ್ನ ಹಾರೈಕೆ ಮತ್ತು ಪ್ರೀತಿ ಶಿವಣ್ಣ ಮೇಲೆ ಸದಾ ಇರುತ್ತದೆ ಎಂದು ಟ್ವೀಟರ್ ನಲ್ಲಿ ಸುದೀಪ್ ಹೇಳಿಕೊಂಡಿದ್ಧಾರೆ.
ನಾಳೆ ಡಿಸ್ಜಾರ್ಜ್ ಸಾಧ್ಯತೆ
ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಯಾಂಡಲ್ವುಡ್ ನಟ ಡಾ. ಶಿವರಾಜ್ ಕುಮಾರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ನಾಳೆ ಡಿಸ್ಚಾರ್ಜ್ ಆಗುವ ಸಾಧ್ಯತೆಗಳಿವೆ.

ಶಿವಣ್ಣ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿದ್ದು ಅವರನ್ನು ನಾಳೆ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ ಎಂದು ವಿಠಲ್ ಮಲ್ಯ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. 


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com