ಕಠ್ಮಂಡು: 67 ನೇ ಗಣರಾಜ್ಯೋತ್ಸವದ ಅಂಗವಾಗಿ ಭಾರತ ಸರ್ಕಾರ ನೇಪಾಳದ ವಿವಿಧ ಸಂಘ-ಸಂಸ್ಥೆಗಳಿಗೆ 40 ಆಂಬುಲೆನ್ಸ್ ಹಾಗೂ 8 ಬಸ್ ಗಳನ್ನು ಉಡುಗೊರೆಯಾಗಿ ನೀಡಿದೆ.
ಭಾರತದ ರಾಯಭಾರಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ನೇಪಾಳದಲ್ಲಿರುವ ಭಾರತದ ರಾಯಭಾರಿ ರಂಜಿತ್ ರೇ, ವಾಹನಗಳ ಕೀಲಿಗಳನ್ನು ಅಲ್ಲಿನ ವಿವಿಧ ಸಂಘಟನೆಗಳಿಗೆ ಹಸ್ತಾಂತರಿಸಿದ್ದಾರೆ. ಆಂಬುಲೆನ್ಸ್ ಹಾಗೂ ಬಸ್ ಗಳೊಂದಿಗೆ 52 ಗ್ರಂಥಾಲಯ, ಶಾಲೆ, ತರಬೇತಿ ಸಂಸ್ಥೆಗಳಿಗೆ ಅಗತ್ಯವಿರುವ ಪುಸ್ತಕಗಳನ್ನೂ ಸಹ ನೇಪಾಳಕ್ಕೆ ಉಡುಗೊರೆಯಾಗಿ ನೀಡಲಾಗಿದೆ.
ಇದೇ ವೇಳೆ ನೇಪಾಳದ ನಿವೃತ್ತ ಯೋಧರು, ಅಂಗವಿಕಲ ಯೋಧರು ಹಾಗೂ ಅವರನ್ನು ಅವಲಂಬಿಸಿರುವವರಿಗೆ ನಗದು ರೂಪದಲ್ಲಿ ಪ್ರೋತ್ಸಾಹಧನವನ್ನೂ ನೀಡಲಾಗಿದೆ. ಭಾರತದ ರಾಯಭಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳೂ ಸೇರಿ 2 ,500 ಮಂದಿ ಭಾಗವಹಿಸಿದ್ದರು.
Advertisement