ಪ್ರಸ್ತುತ ಚೆಂಡ ಭಾರತದ ಅಂಗಳದಲ್ಲಿಯೇ ಇದ್ದು, ಶಾಂತಿ ಬೇಕೋ ಅಥವಾ ಯುದ್ಧ ಬೇಕೋ ಎಂಬುದನ್ನು ಭಾರತವೇ ನಿರ್ಧರಿಸಲಿ. ಹಲವರು ಆ ಮಾರ್ಗ, ಈ ಮಾರ್ಗ ಎಂಬೆಲ್ಲಾ ಚರ್ಚೆಗಳನ್ನು ನಡೆಸುತ್ತಿದ್ದಾರೆ. ಆದರೆ ಯಾವ ಮಾರ್ಗ ಬೇಕು ಎಂಬುದನ್ನು ನಿಮ್ಮ ದೇಶದ ನೀತಿಗಳೇ ನಿರ್ಧರಿಸಬೇಕು. ಡೋಕ್ಲಾಮ್ ವಿಷಯದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ವಿವಾದ ಶಾಂತಿಯುತವಾಗಿ ಇತ್ಯರ್ಥವಾಗಬೇಕು. ಅದಕ್ಕಾಗಿ ಭಾರತ ಪೂರ್ವ ಷರತ್ತಿಲ್ಲದೇ ಡೋಕ್ಲಾಮ್ ನಿಂದ ಹಿಂದಕ್ಕೆ ಸರಿಯಬೇಕು ಎಂದಿದ್ದಾರೆ. ಈ ಮೂಲಕ ವಿವಾದಿತ ಪ್ರದೇಶದಿಂದ ಭಾರತ ಶಾಂತಿಯುತವಾಗಿ ಹಿಂದೆ ಸರಿದು ಅದನ್ನು ಚೀನಾ ರಾಷ್ಟ್ರಕ್ಕೆ ಬಿಟ್ಟುಕೊಡದೆ ಹೋದರೆ ಯುದ್ಧಕ್ಕೆ ಸಿದ್ಧವಿದ್ದೇವೆಂಬ ನೇರ ಸಂದೇಶವನ್ನು ರವಾನಿಸಿದ್ದಾರೆ.