ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಉದ್ದೇಶಿತ ಚೀನಾ ಭೇಟಿ ಬ್ರಿಕ್ಸ್ ಸಮ್ಮೇಳನಕ್ಕಷ್ಟೇ ಸೀಮಿತವಾಗಿದ್ದು, ಗಡಿಯಲ್ಲಿ ಉದ್ಭವಿಸಿರುವ ಸಂಘರ್ಷದ ಪರಿಹಾರಕ್ಕಲ್ಲ ಎಂದು ಚೀನಾದ ಗ್ಲೋಬರ್ ಟೈಮ್ಸ್ ಸಂಪಾದಕೀಯ ಬರೆದುಕೊಂಡಿದೆ.
ಜುಲೈ.27 ಮತ್ತು 28 ರಂದು ನಡೆಯಲಿರುವ ಬ್ರಿಕ್ಸ್ ಸಮ್ಮೇಳನದಲ್ಲಿ ಭಾಗವಹಿಸುವ ಸಲುವಾಗಿ ಅಜಿತ್ ದೋವಲ್ ಅವರು ಬೀಜಿಂಗ್'ಗೆ ಭೇಟಿ ನೀಡಿಲಿದ್ದಾರೆ. ಭಾರತೀಯ ಮಾಧ್ಯಮಗಳು ಭೇಟಿ ವೇಳೆ ಡೋಕ್ಲಾಂ ಸಮಸ್ಯೆಯನ್ನು ಇತ್ಯರ್ಥಪಡಿಸುವಂತೆ ಒತ್ತಡ ಹೇರುತ್ತಿವೆ ಎಂದು ಪತ್ರಿಕೆಯಲ್ಲಿ ಆರೋಪ ಮಾಡಲಾಗಿದೆ.
ಗಡಿಯಲ್ಲಿ ಭಾರತ ನಿಯೋಜಿಸಿರುವ ಸೇನೆಯನ್ನು ಮೊದಲು ಹಿಂದಕ್ಕೆ ಕರೆಯಬೇಕು. ಸಿಕ್ಕಿಂ ಗಡಿಯಲ್ಲಿ ಭಾರತ-ಚೀನಾ ಸೇನೆ ನಿಯೋಜನೆಯಾಗಿರುವುದರ ಹಿಂದಿನ ಪ್ರಮುಖ ಸೂತ್ರಧಾರಿ ಅಜಿತ್ ದೋವಲ್, ದೋವರ್ ಭೇಟಿಯಿಂದ ಉಭಯ ರಾಷ್ಟ್ರಗಳ ನಡುವೆ ಉಂಟಾಗಿರುವ ಉದ್ವಿಗ್ನತೆ ಶಮನಗೊಳ್ಳುವ ಸಾಧ್ಯತೆಗಳಿವೆ ಎಂದು ಭಾರತೀಯ ಮಾಧ್ಯಮಗಳು ಹೆಚ್ಚಾಗಿ ನಂಬಿಕೆಯನ್ನಿಟ್ಟಿವೆ.
ಆದರೆ, ವಿವಾದ ಸಂಬಂಧ ಬೀಜಿಂಗ್ ಜೊತೆಗೆ ಮಾತನಾಡಲು ಪ್ರಯತ್ನಿಸಿದ್ದೇ ಆದರೆ, ಈ ವಿಚಾರದಲ್ಲಿ ಅವರಿಗೆ ನಿರಾಸೆಯಾಗಿದೆ. ಭಾರತ ನಿರೀಕ್ಷಿಸಿರುವಂತೆ ದೋವ್ ಭೇಟಿಯಿಂದ ಉಭಯ ರಾಷ್ಟ್ರಗಳ ಪರಿಸ್ಥಿತಿ ಸುಧಾರಿಸುವುದಿಲ್ಲ. ದೋವಲ್ ಭೇಟಿಯಿಂದ ಸಮಸ್ಯೆ ಬಗೆಯಲಿದೆ ಎಂಬ ಭ್ರಮೆಯಿಂದ ಭಾರತ ಮೊದಲು ಹೊರಬರಬೇಕಿದೆ ಎಂದು ಬರೆದುಕೊಂಡಿದೆ.