ಪ್ರಸ್ತುತ ಉಭಯ ರಾಷ್ಟ್ರಗಳ ನಡುವಿನ ಪರಿಸ್ಥಿತಿಗಳ ಕುರಿತಂತೆ ಭಾರತದ ಜನರಲ್ ಗಳು ಮೂಲ ಜ್ಞಾನವನ್ನು ಹೊಂದಬೇಕಾದ ಅಗತ್ಯವಿದೆ. ಭಾರತವು ತನ್ನ ವಿರೋಧಿ ರಾಷ್ಟ್ರಗಳಾದ ಚೀನಾ ಹಾಗೂ ಪಾಕಿಸ್ತಾನವನ್ನು ಏಕಕಾಲದಲ್ಲಿ ಎದುರಿಸುವುದು ಅಸಾಧ್ಯ. ಉಭಯ ರಾಷ್ಟ್ರಗಳ ನಡುವಿನ ಗಡಿ ವಿವಾದ ಶೀಘ್ರದಲ್ಲಿಯೇ ಪರಿಹಾರವಾಗುವುದೆಂದು ಚೀನಾದ ಜನರು ನಿರೀಕ್ಷಿಸುತ್ತಿಲ್ಲ. ಎರಡೂ ಕಡೆಗಳು ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕೆಂದು ಬಯುತ್ತಿಸುತ್ತಿದ್ದಾರೆ. ಹಾಗೂ ಸದ್ಯ ಯಥಾಸ್ಥಿತಿ ಮುಂಬುವರೆಯಲಿ ಎಂಬುದೇ ಅವರ ಇಚ್ಛೆ ಕೂಡ ಆಗಿದೆ. ಆದರೆ, ಬಿಪಿನ್ ರಾವತ್ ಅವರ ಈ ಹೇಳಿಕೆ ತಪ್ಪು ಸಂದೇಶವನ್ನು ರವಾನಿಸುತ್ತಿದೆ ಎಂದು ಬರೆದುಕೊಂಡಿದೆ.