ಅಮೆರಿಕ ಥಿಂಕ್ ಟ್ಯಾಂಕ್ ಸೆಂಟರ್ ಆಯೋಜಿಸಿದ್ದ ಅಂತರಾಷ್ಟ್ರೀಯ ಅಧ್ಯಯನ ಮತ್ತು ಯುದ್ಧ ತಂತ್ರಗಳ ಕುರಿತ ವಿಚಾರಗಳ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ವಿದೇಶೀ ಮಾಧ್ಯಗಳಲ್ಲಿ ವಿನಾಯಿತಿ ನೀಡುವ ಸುದ್ದಿಗಳನ್ನು ತೆಗೆದುಕೊಂಡು, ಅಭಿವೃದ್ಧಿ ಕುರಿತ ಸುದ್ದಿಗಳನ್ನು ನಿರ್ಲಕ್ಷ್ಯ ತೋರುವ ಕೆಲ ಪ್ರವೃತ್ತಿಗಳಿವೆ. ಇದು ಚಿಂತೆ ಹಾಗೂ ಕರುಣೆಯ ನಿದರ್ಶನವೆಂದೇ ಹೇಳಬಹುದು, ಭಾರತ ಮುಂದಕ್ಕೆ ಸಾಗುತ್ತಿದ್ದು, ವಿದೇಶಿ ಮಾಧ್ಯಮಗಳು ಮಾತ್ರ ಮುಂದಕ್ಕೆ ಸಾಗುತ್ತಿಲ್ಲ ಎಂದು ಹೇಳಿದ್ದಾರೆ.