'ನೈಜಿರಿಯಾದಲ್ಲಿ ಭಾರತೀಯ ನಾವಿಕರ ಅಪಹರಣ ವಿಚಾರಕ್ಕೆ ಸಂಬಂದಧಪಟ್ಟಂತೆ ಪತ್ರಿಕೆಯಲ್ಲಿ ವರದಿಗಳನ್ನು ತಾವು ಓದಿದ್ದು, ಈ ಕುರಿತಂತೆ ನೈಜಿರಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಈ ಸಂಬಂಧ ವಿಚಾರ ಮುಟ್ಟಿಸಿದ್ದೇವೆ. ಅಂತೆಯೇ ಕಡಳ್ಗಳ್ಳರ ವಶದಲ್ಲಿರುವ ಭಾರತೀಯ ನಾವಿಕರ ಬಿಡುಗಡೆ ಸಂಬಂಧ ನೈಜಿರಿಯಾ ಸರ್ಕಾರದೊಂದಿಗೆ ಭಾರತ ಸರ್ಕಾರ ಚರ್ಚೆ ನಡೆಸಿದೆ ಎಂದು ಸುಷ್ಮಾ ಟ್ವೀಟ್ ಮಾಡಿದ್ದಾರೆ.