ಇಸ್ಲಾಮಾಬಾದ್: ಪಾಕಿಸ್ತಾನದ ರಕ್ತದಲ್ಲಿಯೇ ಕಾಶ್ಮೀರವಿದೆ ಎಂದು ಹೇಳುವ ಮೂಲಕ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ತಾವು ಮತ್ತೆ ರಾಜಕೀಯ ರಂಗದಲ್ಲಿ ಸಕ್ರಿಯನಾಗಿದ್ದೇನೆಂದು ಸೋಮವಾರ ಘೋಷಣೆ ಮಾಡಿದ್ದಾರೆ.
ಪ್ರಸ್ತುತ ದುಬೈನಲ್ಲಿ ನೆಲೆಯೂರಿರುವ ಮುಷರಫ್, ಕಾಶ್ಮೀರ ವಿಚಾರ ಕುರಿತಂತೆ ಮಾತನಾಡುವ ಮೂಲಕ ಭಾರತದ ವಿರುದ್ಧ ಕಿಡಿಕಾರಿದ್ದಾರೆ.
ಪಾಕಿಸ್ತಾನದ ಶಾಂತಿಯ ಪ್ರಸ್ತಾವನೆಯ ನಡುವಲ್ಲಿಯೂ ಭಾರತ ಪದೇ ಪದೇ ಇಸ್ಲಾಮಾಬಾದ್'ಗೆ ಬೆದರಿಕೆ ಹಾಕುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಇದೇ ವೇಳೆ 370 ವಿಧಿ ರದ್ದು ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಏನೇ ಆದರೂಕಾಶ್ಮೀರಿ ಸಹೋದರರ ಪರವಾಗಿ ನಾವು ನಿಲ್ಲುತ್ತೇವೆ. ಪಾಕಿಸ್ತಾನದ ಶಾಂತಿ ಪ್ರಸ್ತಾವನೆಯನ್ನು ನಮ್ಮ ದುರ್ಬಲವೆಂದು ತಿಳಿಯಬಾರದು ಎಂದು ತಿಳಿಸಿದ್ದಾರೆ.
Advertisement