ಸಂಗೀತಪ್ರಿಯರನ್ನು ಕೊಲ್ಲುವ ನೀತಿ ಜಾರಿಗೊಳಿಸಿಲ್ಲ: ತಾಲಿಬಾನ್ ನಾಯಕರ ಸ್ಪಷ್ಟನೆ
ಕಾಬೂಲ್: ಅಫ್ಘಾನಿಸ್ತಾನದಲ್ಲಿ ಸಂಗೀಪ್ರಿಯರನ್ನು ಕೊಲ್ಲುವ ನೀತಿ ಜಾರಿ ಮಾಡಿಲ್ಲ ಎಂದು ತಾಲಿಬಾನ್ ನಾಯಕರು ಸ್ಪಷ್ಟನೆ ಕೊಟ್ಟಿದ್ದಾರೆ. ಇತ್ತೀಚಿಗಷ್ಟೆ ಮದುವೆಮನೆಯಲ್ಲಿ ಸಂಗೀತ ಕೇಳುತ್ತಿದ್ದ ಇಬ್ಬರು ಅತಿಥಿಗಳನ್ನು ತಾಲಿಬಾನಿಗಳು ಗುಂಡಿಕ್ಕಿ ಕೊಂದಿದ್ದರು.
ಮದುವೆಮನೆಯಲ್ಲಿ ಸಂಗೀತ ಕೇಳುತ್ತಿದ್ದವರನ್ನು ಕೊಂದ ಪ್ರಕರಣವನ್ನು ಉಲ್ಲೇಖಿಸಿ ತಾಲಿಬಾನ್ ನಾಯಕರು ಈ ಸ್ಪಷ್ಟನೆ ನೀಡಿದ್ದಾರೆ. ಆ ಇಬ್ಬರು ವ್ಯಕ್ತಿಗಳ ಕೊಲೆಯನ್ನು ಸರ್ಕಾರದ ನಿರ್ದೇಶನದಂತೆ ಮಾಡಲಾಗಿಲ್ಲ ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ತಾಲಿಬಾನ್ ಗಳಿಂದ ವಾಲಿಬಾಲ್ ಆಟಗಾರ್ತಿಯ ಬರ್ಬರ ಹತ್ಯೆ!
ನಂರ್ಗರ್ಹರ್ ಎಂಬಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮದುವೆ ಮನೆಯಲ್ಲಿ ಸಂಗೀತವನ್ನು ದೊಡ್ಡ ದನಿಯಲ್ಲಿ ಹಾಕಲಾಗಿದ್ದಿತು. ಈ ಸಂದರ್ಭ ಅಲ್ಲಿಗೆ ದಾಂಗುಡಿಯಿಟ್ಟ 3 ತಾಲಿಬಾನಿಗಳು ಮದುವೆಮನೆಯೊಳಗೆ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದರು.
ಆರೋಪಿ ತಾಲಿಬಾನಿಗಳು ಇದೀಗ ಪೊಲೀಸರ ವಶದಲ್ಲಿದ್ದಾರೆ ಎನ್ನಲಾಗುತ್ತಿದೆ. ಘಟನೆಯಲ್ಲಿ ತನ್ನ ಕೈವಾಡವಿಲ್ಲ ಎಂದು ಸರ್ಕಾರ ಸ್ಪಷ್ಟ ಪಡಿಸಿದ್ದರೂ ಮನರಂಜನೆ ಎನ್ನುವುದು ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾದುದು ಎನ್ನುವ ತನ್ನ ನಿಲುವಿಗೆ ಸರ್ಕಾರ ಬದ್ಧವಾಗಿದೆ ಎನ್ನುವುದು ವಿಪರ್ಯಾಸ.
Related Article
ಟಿ20 ವಿಶ್ವಕಪ್: ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ಅಫ್ಘಾನಿಸ್ತಾನ; ತಾಲಿಬಾನ್ ನಾಡಿನಲ್ಲಿ ಮಂದಹಾಸ
ದೇಶ ಬಿಡಿ, ಇಲ್ಲವೇ ಇಸ್ಲಾಂಗೆ ಮತಾಂತರವಾಗಿ: ಅಫ್ಘನ್ ಸಿಖ್ಖರಿಗೆ ತಾಲಿಬಾನ್ ತಾಕೀತು
ಸಿಖ್ ಗುರುದ್ವಾರ ಧ್ವಂಸ; ಹಿಂದೂ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಿದವರ ಬಂಧನ: ತಾಲಿಬಾನ್ ವಕ್ತಾರ
ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಹುಟ್ಟುವುದಕ್ಕೆ ಮುಂಚೆಯೇ ಭಾರತದಲ್ಲಿ ಹುಟ್ಟಿತ್ತು: ಸಿದ್ದುಗೆ ಕಟೀಲ್ ತಿರುಗೇಟು
ಸಚಿವಾಲಯ ಪ್ರವೇಶಕ್ಕೆ ಮಹಿಳಾ ಉದ್ಯೋಗಿಗಳಿಗೆ ತಾಲಿಬಾನ್ ನಿಷೇಧ
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ