ಟಿಬೆಟ್'ನ 30 ಪ್ರದೇಶಗಳಿಗೆ ಮರುನಾಮಕರಣ: ಕುತಂತ್ರಿ ಚೀನಾಗೆ ಅದರದ್ದೆ ಭಾಷೆಯಲ್ಲಿ ತಿರುಗೇಟು ಕೊಟ್ಟ ಭಾರತ!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮೂರನೇ ಬಾರಿಗೆ ಭಾರತದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಿದೆ. ಏತನ್ಮಧ್ಯೆ, ಅರುಣಾಚಲ ಪ್ರದೇಶದಲ್ಲಿ ಚೀನಾದ ಚಟುವಟಿಕೆಗಳಿಗೆ ಸರ್ಕಾರ ತನ್ನದೇ ಭಾಷೆಯಲ್ಲಿ ಉತ್ತರಿಸಲು ಹೊರಟಿದೆ.
ನರೇಂದ್ರ ಮೋದಿ-ಕ್ಸಿ ಜಿನ್‌ಪಿಂಗ್
ನರೇಂದ್ರ ಮೋದಿ-ಕ್ಸಿ ಜಿನ್‌ಪಿಂಗ್
Updated on

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮೂರನೇ ಬಾರಿಗೆ ಭಾರತದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಿದೆ. ಏತನ್ಮಧ್ಯೆ, ಅರುಣಾಚಲ ಪ್ರದೇಶದಲ್ಲಿ ಚೀನಾದ ಚಟುವಟಿಕೆಗಳಿಗೆ ಸರ್ಕಾರ ತನ್ನದೇ ಭಾಷೆಯಲ್ಲಿ ಉತ್ತರಿಸಲು ಹೊರಟಿದೆ. ಟಿಬೆಟ್‌ನ ಹಲವಾರು ಸ್ಥಳಗಳನ್ನು ಮರುನಾಮಕರಣ ಮಾಡಲು ಭಾರತ ನಿರ್ಧರಿಸಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಂಗಳವಾರವೇ ಅಧಿಕಾರ ವಹಿಸಿಕೊಂಡಿದ್ದು ಚೀನಾದೊಂದಿಗೆ ನಡೆಯುತ್ತಿರುವ ಗಡಿ ವಿವಾದವನ್ನು ಬಗೆಹರಿಸುವತ್ತ ಗಮನ ಹರಿಸುವಂತೆಯೂ ಅವರು ಹೇಳಿದ್ದಾರೆ.

ಟಿಬೆಟ್‌ನ 30 ಸ್ಥಳಗಳ ಹೆಸರನ್ನು ಬದಲಾಯಿಸಲು ಭಾರತ ಸರ್ಕಾರ ಅನುಮೋದನೆ ನೀಡಿದೆ. ಈ ಹೆಸರುಗಳನ್ನು ಐತಿಹಾಸಿಕ ಸಂಶೋಧನೆ ಮತ್ತು ಟಿಬೆಟ್ ಪ್ರದೇಶದ ಆಧಾರದ ಮೇಲೆ ಮಾತ್ರ ಇರಿಸಲಾಗುತ್ತದೆ. ಭಾರತೀಯ ಸೇನೆಯು ಈ ಹೆಸರುಗಳನ್ನು ಬಿಡುಗಡೆ ಮಾಡುತ್ತದೆ. ಈ ಹೆಸರುಗಳನ್ನು ನೈಜ ನಿಯಂತ್ರಣ ರೇಖೆಯ ಅಂದರೆ LAC ನ ನಕ್ಷೆಯಲ್ಲಿ ನವೀಕರಿಸಲಾಗುತ್ತದೆ ಎಂದು ವರದಿಯಾಗಿದೆ. ವಿಶೇಷವೆಂದರೆ ಕಳೆದ ಏಪ್ರಿಲ್‌ನಲ್ಲಿ ಚೀನಾ ಅರುಣಾಚಲ ಪ್ರದೇಶದ 30 ಹೆಸರುಗಳನ್ನು ಬದಲಾಯಿಸಿದ್ದು ಚೀನಾದ ಈ ನಿರ್ಧಾರಕ್ಕೆ ಭಾರತದ ಕಡೆಯಿಂದ ತೀವ್ರ ಪ್ರತಿಭಟನೆ ಕೂಡ ವ್ಯಕ್ತವಾಗಿತ್ತು.

ವರದಿಯ ಪ್ರಕಾರ, ಈ ಹೆಸರುಗಳ ಪಟ್ಟಿಯು 11 ವಸತಿ ಪ್ರದೇಶಗಳು, 12 ಪರ್ವತಗಳು, 4 ನದಿಗಳು, 1 ಸರೋವರ, 1 ಮೌಂಟೇನ್ ಪಾಸ್ ಮತ್ತು 1 ತುಂಡು ಭೂಮಿಯನ್ನು ಒಳಗೊಂಡಿದೆ. ಚೀನಾದ ಪುನರಾವರ್ತಿತ ಹಕ್ಕುಗಳ ಹೊರತಾಗಿಯೂ, ಅರುಣಾಚಲ ಪ್ರದೇಶವು ದೇಶದ ಅವಿಭಾಜ್ಯ ಅಂಗ ಎಂದು ಭಾರತ ಸ್ಪಷ್ಟಪಡಿಸುತ್ತಿದೆ.

ನರೇಂದ್ರ ಮೋದಿ-ಕ್ಸಿ ಜಿನ್‌ಪಿಂಗ್
ಮೋದಿ 3.0: ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಚೀನಾ!

ಚೀನಾ ಗಡಿಯಲ್ಲಿ ಉಳಿದಿರುವ ಸಮಸ್ಯೆಗಳ ಪರಿಹಾರಕ್ಕೆ ಭಾರತ ಗಮನ ಹರಿಸಲಿದೆ ಎಂದು ಜೈಶಂಕರ್ ಮಂಗಳವಾರ ಹೇಳಿದ್ದರು. ಪೂರ್ವ ಲಡಾಖ್‌ನಲ್ಲಿ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಗಡಿ ವಿವಾದವು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಸಾಕಷ್ಟು ಉದ್ವಿಗ್ನತೆಯನ್ನು ಉಂಟುಮಾಡಿದೆ. ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಜೈಶಂಕರ್ ಅವರು ಪಾಕಿಸ್ತಾನದಿಂದ ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಪ್ರಸ್ತಾಪಿಸಿದರು ಮತ್ತು ಈ ಸವಾಲನ್ನು ಎದುರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

'ಭಾರತ ಮೊದಲು' ಮತ್ತು 'ವಸುಧೈವ ಕುಟುಂಬಕಂ' ಭಾರತದ ವಿದೇಶಾಂಗ ನೀತಿಯ ಎರಡು ಮಾರ್ಗದರ್ಶಿ ಸೂತ್ರಗಳಾಗಿವೆ ಎಂದು ವಿದೇಶಾಂಗ ಸಚಿವರು ಹೇಳಿದರು. ಚೀನಾದೊಂದಿಗಿನ ಸಂಬಂಧದ ಕುರಿತು ಜೈಶಂಕರ್, ಆ ದೇಶದ ಗಡಿಯಲ್ಲಿ ಕೆಲವು ಸಮಸ್ಯೆಗಳು ಉಳಿದಿವೆ, ಅವುಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com