ಭಾರತ ಸರ್ಕಾರದ ಕೈವಾಡ ಆರೋಪ: ಸಿಖ್ ಸಮುದಾಯ ಮುಂದೆ ಬಂದು ಮಾತನಾಡಲಿ- ಕೆನಡಾ ಉನ್ನತ ಪೊಲೀಸ್ ಅಧಿಕಾರಿ ಒತ್ತಾಯ

ಮಂಗಳವಾರ ರೇಡಿಯೋ-ಕೆನಡಾಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆರ್‌ಸಿಎಂಪಿ ಕಮಿಷನರ್ ಮೈಕ್ ಡುಹೆಮ್, ತನಿಖೆಗೆ ಸಂಬಂಧಿಸಿದಂತೆ ಮಾಹಿತಿ ಇರುವವರು ಮುಂದೆ ಬರುವಂತೆ ಒತ್ತಾಯಿಸಿದ್ದಾರೆ ಎಂದು ಕೆನಡಾದ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ವರದಿ ಮಾಡಿದೆ.
ನವದೆಹಲಿಯಲ್ಲಿರುವ ಕೆನಡಾದ ಹೈಕಮೀಷನ್ ಕಚೇರಿ
ನವದೆಹಲಿಯಲ್ಲಿರುವ ಕೆನಡಾದ ಹೈಕಮೀಷನ್ ಕಚೇರಿCanada High Commission office in New delhi
Updated on

ಒಟ್ಟಾವಾ: ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಸೇರಿದಂತೆ ಕೆನಡಾದಲ್ಲಿನ ಹಿಂಸಾಚಾರದಲ್ಲಿ ಭಾರತ ಸರ್ಕಾರದೊಂದಿಗೆ ಕೈವಾಡದ ಆರೋಪ ಕುರಿತು ವಿಚಾರಣೆ ಮುಂದುವರೆದಿರುವುದರಿಂದ ಸಿಖ್ ಸಮುದಾಯ ಮಾತನಾಡುವಂತೆ ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್ ಮುಖ್ಯಸ್ಥ ಒತ್ತಾಯಿಸಿದ್ದಾರೆ.

ಮಂಗಳವಾರ ರೇಡಿಯೋ-ಕೆನಡಾಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆರ್‌ಸಿಎಂಪಿ ಕಮಿಷನರ್ ಮೈಕ್ ಡುಹೆಮ್, ತನಿಖೆಗೆ ಸಂಬಂಧಿಸಿದಂತೆ ಮಾಹಿತಿ ಇರುವವರು ಮುಂದೆ ಬರುವಂತೆ ಒತ್ತಾಯಿಸಿದ್ದಾರೆ ಎಂದು ಕೆನಡಾದ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ವರದಿ ಮಾಡಿದೆ.

ಕೆನಡಾದಲ್ಲಿ ನರಹತ್ಯೆ ಸೇರಿದಂತೆ ವ್ಯಾಪಕ" ಹಿಂಸಾಚಾರದಲ್ಲಿ ಭಾರತ ಸರ್ಕಾರದ "ಏಜೆಂಟರು" ಪಾತ್ರ ವಹಿಸಿದ್ದಾರೆ ಎಂದು ಸೋಮವಾರ ಡುಹೆಮ್ ಸಾರ್ವಜನಿಕವಾಗಿ ಆರೋಪಿಸಿದ್ದರು. ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕ ಮತ್ತು ಕಾನ್ಸುಲರ್ ಅಧಿಕಾರಿಗಳು ಕೆನಡಿಯನ್ನರು ಮತ್ತು ಕೆನಡಾದಲ್ಲಿ ವಾಸಿಸುವ ಜನರ ವಿರುದ್ಧ ಕೊಲೆ, ಸುಲಿಗೆ, ಬೆದರಿಕೆಯಂತಹ ಕೃತ್ಯಗಳಲ್ಲಿ ಸಂಬಂಧ ಹೊಂದಿದ್ದಾರೆ ಎಂದು ಡುಹೆಮ್ ಆರೋಪಿಸಿದ್ದಾರೆ.

ಇದು ನಮ್ಮ ದೇಶದಲ್ಲಿ ಸಾರ್ವಜನಿಕ ಸುರಕ್ಷತೆಗೆ ಗಮನಾರ್ಹ ಅಪಾಯವಾಗಿ ತೋರುತ್ತಿದ್ದು, ಕೆನಡಾದಲ್ಲಿ ಕೆಲಸ ಮಾಡುತ್ತಿರುವ ಭಾರತದ ನೆಟ್ ವರ್ಕ್ ಗೆ ಅಡ್ಡಿಪಡಿಸಲು ಸೇನೆ ಮುಂದೆ ಬರಬೇಕಾಗಿದೆ. ಒಂದು ವೇಳೆ ಜನರು ಮುಂದೆ ಬಂದರೆ ಅವರಿಗೆ ನೆರವು ನೀಡಬಹುದು. ಅವರು ಮುಂದೆ ಬರುವಂತೆ ಹೇಳುತ್ತಿದ್ದೇನೆ ಎಂದು ರೇಡಿಯೊ ಕೆನಡಾ ಸಂದರ್ಶದಲ್ಲಿ ಅವರು ಹೇಳಿದರು.

ಜನರು ಸುರಕ್ಷಿತೆ ಮತ್ತು ಉದ್ಯೋಗಕ್ಕೆ ಕೆನಡಾಕ್ಕೆ ಬರುತ್ತಾರೆ. ಇಲ್ಲಿನ ಅನಿವಾಸಿ ಭಾರತೀಯರು ಪೊಲೀಸರಲ್ಲಿ ನಂಬಿಕೆ ಮತ್ತು ವಿಶ್ವಾಸ ಹೊಂದಿರುವುದಾಗಿ ಭಾವಿಸುತ್ತೇನೆ. ಭಾರತ ಸರ್ಕಾರದೊಂದಿಗೆ ನಂಟಿನ ಆರೋಪ ಕುರಿತು ಸಿಖ್ ಸಮುದಾಯ ಮಾತನಾಡಬೇಕು ಎಂದು ಅವರು ಒತ್ತಾಯಿಸಿರುವುದಾಗಿ ವರದಿಯಾಗಿದೆ.

ಬಿಷ್ಣೋಯ್ ಗ್ಯಾಂಗ್ ಭಾರತ ಸರ್ಕಾರದ ಏಜೆಂಟ್" ಗಳೊಂದಿಗೆ ಸಂಪರ್ಕ ಹೊಂದಿದೆ. ಇದು ದಕ್ಷಿಣ ಏಷ್ಯಾದ ಸಮುದಾಯವನ್ನು ನಿರ್ದಿಷ್ಟವಾಗಿ ದೇಶದಲ್ಲಿ "ಖಾಲಿಸ್ತಾನಿ ಪರ ಅಂಶಗಳನ್ನು ಗುರಿಯಾಗಿಸಿಕೊಂಡಿದೆ ಎಂದು RCMP ಆರೋಪಿಸಿದ್ದಾರೆ.

ನವದೆಹಲಿಯಲ್ಲಿರುವ ಕೆನಡಾದ ಹೈಕಮೀಷನ್ ಕಚೇರಿ
ಕೆನಡಾ ಆರೋಪ ಅತ್ಯಂತ ಗಂಭೀರ: ನಿಜ್ಜರ್ ಹತ್ಯೆ ತನಿಖೆಯಲ್ಲಿ ಸಹಕಾರ ನೀಡಿ, ಭಾರತಕ್ಕೆ ಅಮೆರಿಕದ ಸೂಚನೆ!

ಭಾರತವು ಕೆನಡಾದ ಪ್ರಜೆಗಳನ್ನು ಗುರಿಯಾಗಿಸಿಕೊಂಡು ರಹಸ್ಯ ಕಾರ್ಯಾಚರಣೆ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂಬ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರ ಆರೋಪಗಳನ್ನು ನವದೆಹಲಿಯ ಮೂಲಗಳು ತಳ್ಳಿಹಾಕಿವೆ.

ಸೋಮವಾರ ನಿಜ್ಜರ್ ಹತ್ಯೆಯಲ್ಲಿ ರಾಯಭಾರಿಯ ನಂಟು ಕುರಿತು ಕೆನಡಾದ ಆರೋಪಗಳನ್ನು ತಳ್ಳಿಹಾಕಿದ ನಂತರ ಭಾರತ ಆರು ಕೆನಡಾದ ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕಿತು ಮತ್ತು ಕೆನಡಾದಿಂದ ತನ್ನ ಹೈಕಮಿಷನರ್ ಅವರನ್ನು ವಾಪಸ್ ಕರೆಸಿಕೊಳ್ಳುವುದಾಗಿ ಘೋಷಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com