EAM Jaishankar
ವಿದೇಶಾಂಗ ಸಚಿವ ಎಸ್ ಜೈಶಂಕರ್

ಅಮೆರಿಕ-ಭಾರತ ದ್ವಿಪಕ್ಷೀಯ ಸಂಬಂಧಕ್ಕೆ ಟ್ರಂಪ್ ಆಡಳಿತ ಆದ್ಯತೆ ನೀಡುತ್ತದೆ ಎಂಬುದು ಸ್ಪಷ್ಟ: ಎಸ್ ಜೈಶಂಕರ್

2017 ಮತ್ತು 2021 ರ ನಡುವೆ ಟ್ರಂಪ್ ಅವರ ಮೊದಲ ಆಡಳಿತ ಅವಧಿಯಲ್ಲಿ ಸ್ಥಾಪಿಸಲಾದ ಸಂಬಂಧದ ಅಡಿಪಾಯದ ಮೇಲೆ ಹೊಸ ಆಡಳಿತವು ನಿರ್ಮಿಸಲು ಬಯಸುತ್ತದೆ ಎಂಬುದು ಸ್ಪಷ್ಟವಾಗಿದೆ.
Published on

ವಾಷಿಂಗ್ಟನ್: ಅಮೆರಿಕಾದ ಹೊಸ ಡೊನಾಲ್ಡ್ ಟ್ರಂಪ್ ಆಡಳಿತವು ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧಕ್ಕೆ ಆದ್ಯತೆ ನೀಡಲು ಉತ್ಸುಕವಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಸೇರಿದಂತೆ ಅಲ್ಲಿನ ಸರ್ಕಾರದ ಅಧಿಕಾರಿಗಳೊಂದಿಗೆ ವಾಷಿಂಗ್ಟನ್‌ನಲ್ಲಿ ಸರಣಿ ಸಭೆಗಳನ್ನು ನಡೆಸಿದ ನಂತರ ಜೈಶಂಕರ್ ಅವರ ಹೇಳಿಕೆ ಹೊರಬಿದ್ದಿದೆ. ಡೊನಾಲ್ಡ್ ಟ್ರಂಪ್ ಅವರು ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ವಿದೇಶಾಂಗ ಸಚಿವರು ಈ ಹೇಳಿಕೆ ನೀಡಿದ್ದಾರೆ.

ನನ್ನ ಒಟ್ಟಾರೆ ಅನಿಸಿಕೆಗಳನ್ನು ಹಂಚಿಕೊಳ್ಳುವುದಾದರೆ, ನಾನು ಒಂದು ಮಾತು ಹೇಳಲು ಇಚ್ಛಿಸುತ್ತೇನೆ. ಟ್ರಂಪ್ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾರತದ ಉಪಸ್ಥಿತಿಯನ್ನು ಟ್ರಂಪ್ ಆಡಳಿತ ಬಯಸಿದೆ ಎಂಬುದು ಬಹಳ ಸ್ಪಷ್ಟವಾಗಿತ್ತು. ಅವರು ದ್ವಿಪಕ್ಷೀಯ ಸಂಬಂಧಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿತ್ತು ಎಂದರು.

2017 ಮತ್ತು 2021 ರ ನಡುವೆ ಟ್ರಂಪ್ ಅವರ ಮೊದಲ ಆಡಳಿತ ಅವಧಿಯಲ್ಲಿ ಸ್ಥಾಪಿಸಲಾದ ಸಂಬಂಧದ ಅಡಿಪಾಯದ ಮೇಲೆ ಹೊಸ ಆಡಳಿತವು ನಿರ್ಮಿಸಲು ಬಯಸುತ್ತದೆ ಎಂಬುದು ಸ್ಪಷ್ಟವಾಗಿದೆ ಎಂದು ವಿದೇಶಾಂಗ ಸಚಿವರು ಹೇಳಿದರು.

ಆ ಸಮಯದಲ್ಲಿ ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಹಲವಾರು ಉಪಕ್ರಮಗಳನ್ನು ತೆಗೆದುಕೊಂಡರು. ನಾವು ಅದನ್ನು ಹಲವು ವಿಧಗಳಲ್ಲಿ ಪ್ರಬುದ್ಧವಾಗಿ ನೋಡಿದ್ದೇವೆ ಎಂದರು. ಜೈಶಂಕರ್ ಅವರು ಕ್ವಾಡ್ ರಾಷ್ಟ್ರಗಳ ವಿದೇಶಾಂಗ ಮಂತ್ರಿಗಳೊಂದಿಗೆ ಬಹುಪಕ್ಷೀಯ ಸಭೆಯಲ್ಲಿ ಭಾಗವಹಿಸಿದರು. ಕಾರ್ಯತಂತ್ರದ ಒಕ್ಕೂಟವು ಭಾರತ, ಯುನೈಟೆಡ್ ಸ್ಟೇಟ್ಸ್, ಜಪಾನ್ ಮತ್ತು ಆಸ್ಟ್ರೇಲಿಯಾಗಳನ್ನು ಒಳಗೊಂಡಿದೆ.

ಇಂಡೋ-ಪೆಸಿಫಿಕ್‌ನಲ್ಲಿ ಚೀನಾದ ಕ್ರಮಗಳ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸುತ್ತಾ, ಈ ಪ್ರದೇಶದಲ್ಲಿ ಬಲವಂತದ ಮೂಲಕ ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸುವ ಏಕಪಕ್ಷೀಯ ಕ್ರಮಗಳನ್ನು ವಿರೋಧಿಸುವುದಾಗಿ ನಾಲ್ಕು ದೇಶಗಳು ಪ್ರತಿಜ್ಞೆ ಮಾಡಿದವು.

ಕ್ವಾಡ್ ವಿದೇಶಾಂಗ ಮಂತ್ರಿಗಳ ಸಭೆಯ ಕುರಿತು ಮಾತನಾಡಿದ ಜೈಶಂಕರ್, ಪ್ರಸ್ತುತ ಆಡಳಿತವು ಕ್ವಾಡ್ ನ್ನು ಮತ್ತಷ್ಟು ಕೊಂಡೊಯ್ಯುವ, ಅದರ ಚಟುವಟಿಕೆಗಳನ್ನು ತೀವ್ರಗೊಳಿಸುವ ನಮ್ಮ ಬಯಕೆಗೆ ಪ್ರತಿಯಾಗಿ ಪ್ರತಿಕ್ರಿಯಿಸುತ್ತದೆ ಎಂಬ ಬಲವಾದ ಭಾವನೆ ಇದೆ ಎಂದರು.

EAM Jaishankar
US ಸೆಕ್ರೆಟರಿ ಆಫ್ ಸ್ಟೇಟ್ ರೂಬಿಯೊ ಜೊತೆ ಜೈಶಂಕರ್ ಚೊಚ್ಚಲ ಸಭೆ: ವಲಸಿಗರ ಸಮಸ್ಯೆ ಬಗೆಹರಿಸುವ ಇಂಗಿತ!

ರೂಬಿಯೊ ಮತ್ತು ಜೈಶಂಕರ್ ದ್ವಿಪಕ್ಷೀಯ ಸಭೆಯನ್ನು ಸಹ ನಡೆಸಿದರು. ರೂಬಿಯೊ ಅವರೊಂದಿಗೆ ಅವರು ಎತ್ತಿದ ಕಳವಳಗಳಲ್ಲಿ ಒಂದು ಭಾರತೀಯ ನಾಗರಿಕರಿಗೆ ವೀಸಾ ಪ್ರಕ್ರಿಯೆಯಲ್ಲಿನ ವಿಳಂಬವಾಗಿದೆ ಎಂದು ಸಚಿವರು ವರದಿಗಾರರಿಗೆ ತಿಳಿಸಿದರು. ವೀಸಾ ಪ್ರಕ್ರಿಯೆಯಲ್ಲಿ ವಿಳಂಬವಾದರೆ ಕೆಲಸ, ವ್ಯವಹಾರ, ಪ್ರಯಾಣ ಮತ್ತು ಪ್ರವಾಸೋದ್ಯಮ ಹಾಗೂ ಜನರಿಂದ ಜನರ ನಡುವಿನ ಸಂಬಂಧಗಳಿಗೆ ಅಡ್ಡಿಯಾಗುತ್ತದೆ ಎಂದು ಅವರು ಹೇಳಿದರು, ಅವರ ಕಳವಳಗಳನ್ನು ವಿದೇಶಾಂಗ ಕಾರ್ಯದರ್ಶಿ ಗಮನಿಸಿದ್ದಾರೆ ಎಂದರು.

ಆರ್ಥಿಕ ಸಂಬಂಧಗಳನ್ನು ಮುನ್ನಡೆಸಲು ಮತ್ತು ಅನಿಯಮಿತ ವಲಸೆಗೆ ಸಂಬಂಧಿಸಿದ ಕಳವಳಗಳನ್ನು ಪರಿಹರಿಸಲು ಅಮೆರಿಕಾ ಭಾರತದೊಂದಿಗೆ ಕೆಲಸ ಮಾಡಲು ಬಯಸುತ್ತದೆ ಎಂದು ರೂಬಿಯೊ ಸಭೆಯಲ್ಲಿ ವಿದೇಶಾಂಗ ಸಚಿವ ಜೈಶಂಕರ್‌ಗೆ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com