'ಸಿಂಧೂ ನದಿಗೆ ಭಾರತ ನಿರ್ಮಿಸುವ ಯಾವುದೇ ಡ್ಯಾಮ್ ಅನ್ನು ನಾವು ಧ್ವಂಸಗೊಳಿಸುತ್ತೇವೆ': ಪಾಕ್ ರಕ್ಷಣಾ ಸಚಿವ

ಸಿಂಧೂ ನದಿಗೆ ಅಡ್ಡವಾಗಿ ಡ್ಯಾಂ ನಿರ್ಮಿಸಲು ಭಾರತ ಯತ್ನಿಸಿದರೆ ಬಲವಾದ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಆಸಿಫ್ ಒತ್ತಿ ಹೇಳಿದ್ದಾರೆ.
ಖವಾಜಾ ಆಸಿಫ್
ಖವಾಜಾ ಆಸಿಫ್
Updated on

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಭಾರತ - ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವುದರ ನಡುವೆ, ಭಾರತ ಸಿಂಧೂ ಜಲ ಒಪ್ಪಂದವನ್ನು ಉಲ್ಲಂಘಿಸಿ ಯಾವುದೇ ಡ್ಯಾಮ್ ನಿರ್ಮಿಸಿದರೆ ಇಸ್ಲಾಮಾಬಾದ್ ಅದನ್ನು "ಧ್ವಂಸಗೊಳಿಸಲಿದೆ" ಎಂದು ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ ಶುಕ್ರವಾರ ಹೇಳಿದ್ದಾರೆ.

ಜಿಯೋ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆಸಿಫ್, ಸಿಂಧೂ ನದಿಗೆ ಅಡ್ಡವಾಗಿ ಯಾವುದೇ ಮೂಲಸೌಕರ್ಯ ನಿರ್ಮಿಸುವುದನ್ನು "ಭಾರತದ ಆಕ್ರಮಣ" ಎಂದು ಪರಿಗಣಿಸಲಾಗುತ್ತದೆ ಎಂದಿದ್ದಾರೆ.

ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿ ಬಳಿಕ ಪಾಕಿಸ್ತಾನ ವಿರುದ್ಧ ಭಾರತ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದು, ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದೆ.

ಖವಾಜಾ ಆಸಿಫ್
ಸಿಂಧೂ ನದಿ ನೀರಿನ 'ಒಂದು ಹನಿಯೂ' ಪಾಕಿಸ್ತಾನಕ್ಕೆ ಹೋಗಲ್ಲ: ಕೇಂದ್ರ ಸರ್ಕಾರ ವಾಗ್ದಾನ; ನೀರು ತಡೆಗೆ ಮೂರು ಅಂಶಗಳ ಕಾರ್ಯತಂತ್ರ!

ಸಿಂಧೂ ನದಿಗೆ ಅಡ್ಡವಾಗಿ ಡ್ಯಾಂ ನಿರ್ಮಿಸಲು ಭಾರತ ಯತ್ನಿಸಿದರೆ ಬಲವಾದ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಆಸಿಫ್ ಒತ್ತಿ ಹೇಳಿದ್ದಾರೆ.

"ಖಂಡಿತ, ಅವರು ಯಾವುದೇ ರಚನೆಯನ್ನು ನಿರ್ಮಿಸಲು ಪ್ರಯತ್ನಿಸಿದರೆ, ನಾವು ಅದನ್ನು ಧ್ವಂಸಗೊಳಿಸುತ್ತೇವೆ. ಆಕ್ರಮಣವು ಕೇವಲ ಫಿರಂಗಿ ಅಥವಾ ಗುಂಡುಗಳನ್ನು ಹಾರಿಸುವುದರ ಮೂಲಕ ಅಲ್ಲ; ಅದಕ್ಕೆ ಹಲವು ಮುಖಗಳಿವೆ. ಆ ಮುಖಗಳಲ್ಲಿ ಸಿಂಧೂ ನದಿ ನೀರನ್ನು ತಡೆಯುವುದು ಅಥವಾ ತಿರುಗಿಸುವುದು ಒಂದು. ಇದರಿಂದ ಪಾಕಿಸ್ತಾನದಲ್ಲಿ ಹಸಿವು ಮತ್ತು ಬಾಯಾರಿಕೆಯಿಂದ ಜನರ ಸಾವುಗಳಿಗೆ ಕಾರಣವಾಗಬಹುದು" ಎಂದಿದ್ದಾರೆ.

ಆದಾಗ್ಯೂ, ಸದ್ಯಕ್ಕೆ ಪಾಕಿಸ್ತಾನವು ಸೂಕ್ತ ವೇದಿಕೆಗಳಲ್ಲಿ ಮತ್ತು ಸಂಬಂಧಿತ ಪಾಲುದಾರರೊಂದಿಗೆ ಸಿಂಧೂ ನದಿ ಒಪ್ಪಂದದ ವಿಷಯವನ್ನು ಪ್ರಸ್ತಾಪಿಸುತ್ತದೆ ಎಂದು ಆಸಿಫ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com