'ನಾನು ಹಫೀಜ್ ಸಯೀದ್‌ನ ಗುಲಾಮ'; ಪಾಕಿಸ್ತಾನದ ಕಡೆಗೆ ನೋಡಿದರೆ ಸಾಕು ನಿಮ್ಮ ದೇಶ ನಾಶ: ಭಾರತಕ್ಕೆ ಬೆದರಿಕೆಯೊಡ್ಡಿದ ಪಾಕ್ ಮಾಜಿ ಸಚಿವ!

ರಶೀದ್ 2020 ರಿಂದ 2022ರವರೆಗೆ ಪಾಕಿಸ್ತಾನದ ಆಂತರಿಕ ಸಚಿವರಾಗಿ ಸೇವೆ ಸಲ್ಲಿಸಿದ್ದರು ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ.
Sheikh Rasheed Ahmed
ಕಾರ್ಯಕ್ರಮದಲ್ಲಿ ಮಾತನಾಡಿದ ಶೇಖ್ ರಶೀದ್ ಅಹ್ಮದ್.
Updated on

ಇಸ್ಲಾಮಾಬಾದ್: ಇಮ್ರಾನ್ ಖಾನ್ ಸರ್ಕಾರದಲ್ಲಿ ಪಾಕಿಸ್ತಾನದ ಆಂತರಿಕ ಸಚಿವರಾಗಿ ಸೇವೆ ಸಲ್ಲಿಸಿದ್ದ ಶೇಖ್ ರಶೀದ್ ಅಹ್ಮದ್, ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸ್ಥಾಪಕ ಮತ್ತು ವಿಶ್ವಸಂಸ್ಥೆಯಿಂದ ನಿಷೇಧಿಸಲ್ಪಟ್ಟ ಜಾಗತಿಕ ಭಯೋತ್ಪಾದಕ ಹಫೀಜ್ ಸಯೀದ್ ಅವರನ್ನು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೊಗಳಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದಾರೆ. ಅಲ್ಲದೆ, ಅವರು ಭಾರತದ ವಿರುದ್ಧವೂ ಬೆದರಿಕೆ ಹಾಕಿದ್ದಾರೆ.

ಪಾಕಿಸ್ತಾನದ ಅವಾಮಿ ಮುಸ್ಲಿಂ ಲೀಗ್ ಪಕ್ಷದ ಸ್ಥಾಪಕ ಮತ್ತು ನಾಯಕರಾಗಿರುವ ಅಹ್ಮದ್, ಹಲವಾರು ಲಷ್ಕರ್ ಭಯೋತ್ಪಾದಕರೊಂದಿಗೆ ವೇದಿಕೆಯನ್ನು ಹಂಚಿಕೊಂಡರು ಮತ್ತು ಅವರು ಹಫೀಜ್ ಸಯೀದ್‌ನ ಗುಲಾಮ ಎಂದು ಘೋಷಿಸಿದರು.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ರಶೀದ್ ಹಿರಿಯ ಎಲ್‌ಇಟಿ ಕಮಾಂಡರ್ ಮತ್ತು ಪಾಕಿಸ್ತಾನ್ ಮರ್ಕಜಿ ಮುಸ್ಲಿಂ ಲೀಗ್ (ಪಿಎಂಎಂಎಲ್) ಅಧ್ಯಕ್ಷ ಖಾಲಿದ್ ಮಸೂದ್ ಸಂಧು ಮತ್ತು ಭಯೋತ್ಪಾದಕ ಸಂಘಟನೆಯ ಮತ್ತೊಬ್ಬ ಸದಸ್ಯ ಖಾರಿ ಮುಹಮ್ಮದ್ ಯಾಕೂಬ್ ಶೇಖ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಪಾಕಿಸ್ತಾನದ ಮಾಜಿ ಸಚಿವ, 'ನಾನು ಹಫೀಜ್ ಸಯೀದ್‌ನ ಗುಲಾಮ' ಎಂದು ಹೇಳುತ್ತಾ, ಅಂತರರಾಷ್ಟ್ರೀಯ ಭಯೋತ್ಪಾದಕನಿಗೆ ಬೆಂಬಲ ವ್ಯಕ್ತಪಡಿಸಿದರು.

ಹಫೀಜ್ ಸಯೀದ್‌ನ ಫೋನ್ ನಂಬರ್ ನನ್ನ ಫೋನ್‌ನಲ್ಲಿ ಕಂಡುಬಂದ ಕಾರಣ ತನ್ನನ್ನು ಅಮೆರಿಕದಿಂದ ಹೊರಹಾಕಲಾಯಿತು ಎಂದ ಅವರು, 'ಪಾಕಿಸ್ತಾನದ ಕಡೆಗೆ ನೋಡಿದರೆ ಸಾಕು ಅಲ್ಲಾಹನು ನಿಮ್ಮ ದೇಶವನ್ನು ನಾಶಮಾಡುತ್ತಾನೆ' ಎಂದು ಭಾರತಕ್ಕೆ ಬೆದರಿಕೆಯೊಡ್ಡಿದರು.

'ಭಾರತದಲ್ಲಿ ಯಾವುದೇ ಹಕ್ಕಿಗಳು ಚಿಲಿಪಿಲಿ ಎಂದು ಕೂಗುವುದಿಲ್ಲ, ದೇವಾಲಯದಲ್ಲಿ ಗಂಟೆಗಳು ಬಾರಿಸುವುದಿಲ್ಲ. ಭಾರತದಲ್ಲಿ ಯಾವುದೇ ಪಾಕಿಸ್ತಾನ ವಿರೋಧಿ ಚಟುವಟಿಕೆ ನಡೆಯಲು ಸಾಧ್ಯವಿಲ್ಲ. ನಾವು ಪಾಕಿಸ್ತಾನದೊಂದಿಗೆ, ಹಫೀಜ್ ಸಯೀದ್ ಜೊತೆ ಇದ್ದೇವೆ' ಎಂದು ಅವರು ಹೇಳಿದರು.

Sheikh Rasheed Ahmed
ನಾವು ಎಲ್ಲದಕ್ಕೂ ಸಿದ್ಧವಾಗಿದ್ದೇವೆ; ಸಿಂಧೂ ನದಿ ನೀರು ಬಿಡದಿದ್ದರೇ..: ಭಾರತಕ್ಕೆ ಯುದ್ಧದ ಬೆದರಿಕೆ ಹಾಕಿದ ಬಿಲಾವಲ್ ಭುಟ್ಟೋ!

ಶೇಖ್ ರಶೀದ್ ಅಹ್ಮದ್ ಯಾರು?

ರಶೀದ್ 2020 ರಿಂದ 2022ರವರೆಗೆ ಪಾಕಿಸ್ತಾನದ ಆಂತರಿಕ ಸಚಿವರಾಗಿ ಸೇವೆ ಸಲ್ಲಿಸಿದ್ದರು ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ.

ರಶೀದ್ ಅವರ ಹೇಳಿಕೆಗಳು ಭಯೋತ್ಪಾದನೆಯ ಬಗ್ಗೆ ಪಾಕಿಸ್ತಾನದ ಬೂಟಾಟಿಕೆಯನ್ನು ಬಹಿರಂಗಪಡಿಸುತ್ತಿರುವುದು ಇದೇ ಮೊದಲಲ್ಲ. 2022 ರಲ್ಲಿ, ಆಂತರಿಕ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾಗ, 26/11 ಮುಂಬೈ ದಾಳಿಕೋರ ಅಜ್ಮಲ್ ಕಸಬ್‌ನ ಫರೀದ್‌ಕೋಟ್ ಭಾಷಣದ ಬಗ್ಗೆ ಭಾರತಕ್ಕೆ ಮಾಹಿತಿ ನೀಡಿದ್ದು ಮಾಜಿ ಪ್ರಧಾನಿ ನವಾಜ್ ಷರೀಫ್ ಎಂದು ಅವರು ಬಹಿರಂಗಪಡಿಸಿದರು.

ಪಾಕಿಸ್ತಾನದ ಆಗಿನ ವಿರೋಧ ಪಕ್ಷವನ್ನು ಭಾರತದ ಪರ ಎಂದು ಚಿತ್ರಿಸಲು ಮತ್ತು ವಿದೇಶಿ ಶಕ್ತಿಗಳು ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಲು ಪಿತೂರಿ ನಡೆಸುತ್ತಿವೆ ಎಂಬ ಇಮ್ರಾನ್ ಖಾನ್ ಅವರ ಹೇಳಿಕೆಯನ್ನು ಸಮರ್ಥಿಸಲು ಈ ಹೇಳಿಕೆಗಳನ್ನು ನೀಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com