ನೇಪಾಳ: ಪರ್ವತ ಹೆದ್ದಾರಿಯಿಂದ ಉರುಳಿಬಿದ್ದ ಬಸ್, 17 ಮಂದಿ ಸಾವು, 24 ಮಂದಿಗೆ ಗಾಯ

ಪೊಲೀಸರ ಮಾಹಿತಿ ಪ್ರಕಾರ, ಪ್ರವಾಸಿ ನಗರವಾದ ಪೋಖರಾದಿಂದ ಕಠ್ಮಂಡುವಿಗೆ ತೆರಳುತ್ತಿದ್ದ ಈ ಬಸ್ ಮಧ್ಯರಾತ್ರಿಯ ನಂತರ ಪೃಥ್ವಿ ಹೆದ್ದಾರಿಯಿಂದ ನಿಯಂತ್ರಣ ತಪ್ಪಿ ಕಣಿವೆಗೆ ಉರುಳಿತು.
17 killed as bus plunges into Trishuli River in Nepal
ನೇಪಾಳದಲ್ಲಿ ತ್ರಿಶೂಲಿ ನದಿಗೆ ಬಸ್ ಉರುಳಿ ಬಿದ್ದು 17 ಮಂದಿ ಸಾವು
Updated on

ಕಠ್ಮಂಡು: ನೇಪಾಳದ ರಾಜಧಾನಿ ಕಠ್ಮಂಡುವಿನತ್ತ ತೆರಳುತ್ತಿದ್ದ ಪ್ರಯಾಣಿಕರಿಂದ ತುಂಬಿದ್ದ ಬಸ್ ಇಂದು ಸೋಮವಾರ ಮುಂಜಾನೆ ಪರ್ವತ ಮಾರ್ಗದಿಂದ ಕೆಳಗೆ ಉರುಳಿ ಬಿದ್ದ ಪರಿಣಾಮ 17 ಮಂದಿ ಮೃತಪಟ್ಟಿದ್ದು, 24 ಮಂದಿ ಗಾಯಗೊಂಡಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಪ್ರವಾಸಿ ನಗರವಾದ ಪೋಖರಾದಿಂದ ಕಠ್ಮಂಡುವಿಗೆ ತೆರಳುತ್ತಿದ್ದ ಈ ಬಸ್ ಮಧ್ಯರಾತ್ರಿಯ ನಂತರ ಪೃಥ್ವಿ ಹೆದ್ದಾರಿಯಿಂದ ನಿಯಂತ್ರಣ ತಪ್ಪಿ ಕಣಿವೆಗೆ ಉರುಳಿತು. ಬಸ್ ಪರ್ವತ ಇಳಿಜಾರಿನಿಂದ ಕೆಳಗೆ ಬಿದ್ದು, ಕಠ್ಮಂಡುವಿನಿಂದ ಸುಮಾರು 80 ಕಿಲೋಮೀಟರ್ ಪಶ್ಚಿಮದಲ್ಲಿರುವ ಬೆನಿಘಾಟ್ ಸಮೀಪ ತ್ರಿಶೂಲಿ ನದಿಯ ತೀರದಲ್ಲಿ ನಿಂತಿತು.

ಅಪಘಾತದ ನಂತರ ತಕ್ಷಣವೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಅವಶೇಷಗಳಡಿಯಿಂದ ಹೊರತೆಗೆದು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಸಾಗಿಸಿದರು. ಅಪಘಾತದ ಕಾರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

17 killed as bus plunges into Trishuli River in Nepal
Jubilee Hills: ತೆಲುಗು ನಟ ಬಾಲಕೃಷ್ಣ ಮನೆ ಮುಂದೆ ಭೀಕರ ಅಪಘಾತ; ವೇಗವಾಗಿ ಬಂದ ಫೆರಾರಿ ಕಾರು ಹಲವು ವಾಹನಗಳಿಗೆ ಢಿಕ್ಕಿ!

ನೇಪಾಳದಲ್ಲಿ ರಸ್ತೆ ಮತ್ತು ವಾಹನಗಳ ಸಮರ್ಪಕ ನಿರ್ವಹಣೆ ಕೊರತೆ, ಹಾಗೂ ಪರ್ವತ ಪ್ರದೇಶಗಳಲ್ಲಿ ಇರುವುದು ಕಿರಿದಾದ ರಸ್ತೆ ವ್ಯವಸ್ಥೆ ಕಾರಣವಾಗಿ ಬಸ್ ಅಪಘಾತಗಳು ಸಾಮಾನ್ಯವಾಗಿವೆ.

ಈ ಬಸ್ ವೇಗವಾಗಿ ಹರಿಯುವ ಪರ್ವತ ನದಿಯ ತೀರದಲ್ಲಿ ಬಿದ್ದಿದೆ. 2024ರಲ್ಲಿ 65 ಮಂದಿ ಪ್ರಯಾಣಿಕರಿದ್ದ ಎರಡು ಬಸ್‌ಗಳು ಇದೇ ನದಿಗೆ ಬಿದ್ದಿದ್ದವು. ಪ್ರಯಾಣಿಕರಲ್ಲಿ ಹೆಚ್ಚಿನವರು ಮೃತಪಟ್ಟಿದ್ದು ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com