ಅಲೆನ್ ಕೆಂಪ್ ಸ್ಟರ್ 
ಸಾಧನೆ

ಒಂದು ಕೈ, ಒಂದು ಕಾಲು ಮಾತ್ರವಿರುವ ಪವರ್ ಫುಲ್ ಬೈಕ್ ರೇಸರ್

ಅಲೆನ್ ಕೆಂಪ್ ಸ್ಟರ್ ಎಂಬ ಹೆಸರು ಹೆಚ್ಚಿನವರಿಗೆ ಪರಿಚಯವಿರಲಿಕ್ಕಿಲ್ಲ. ಈತ ಬೈಕ್ ರೇಸರ್. ಈತನ ಬೈಕ್ ನಲ್ಲಿ 1/2...

ಅಲೆನ್  ಕೆಂಪ್ ಸ್ಟರ್ ಎಂಬ ಹೆಸರು ಹೆಚ್ಚಿನವರಿಗೆ ಪರಿಚಯವಿರಲಿಕ್ಕಿಲ್ಲ. ಈತ ಬೈಕ್ ರೇಸರ್. ಈತನ ಬೈಕ್ ನಲ್ಲಿ 1/2 ಎಂದು ಬರೆಯಲಾಗಿದೆ, ಅದ್ಯಾಕೆ ಅರ್ಧ ಎಂದು ಬರೆದಿದ್ದಾನೆ ಎಂಬ ಕುತೂಹಲದ ಪ್ರಶ್ನೆಗೆ ಉತ್ತರ ಸಿಗಬೇಕಾದರೆ  ಅಲೆನ್ ಕೆಂಪ್ ಸ್ಟರ್ ನ್ನು ನೋಡಲೇಬೇಕು. ಈತನಿಗೆ ಒಂದು ಕೈ ಮತ್ತು ಒಂದು ಕಾಲು ಇಲ್ಲ. ಆದರೆ  ಬೈಕ್ ರೇಸ್ ನಲ್ಲಿ ಸ್ಪರ್ಧಿಸಬಲ್ಲ!

ಆಸ್ಟ್ರೇಲಿಯಾ ಮೂಲದ ಈತನಿಗೆ ಬೈಕ್ ರೇಸ್ ಎಂದರೆ ಪಂಚಪ್ರಾಣ. ತನ್ನ ಇಪ್ಪತ್ತನೇ ವಯಸ್ಸಿನಲ್ಲಿ ಈತ ಬೈಕ್  ರೇಸಿಂಗ್ ಆರಂಭಿಸಿದ್ದ. ಹೀಗೆ ಒಂದು ದಿನ ಬೈಕ್ ರೇಸಿಂಗ್ ಮಾಡುತ್ತಿದ್ದ ವೇಳೆ  ಇನ್ನೊಬ್ಬ ಕುಡುಕ ಚಾಲಕನ ಬೇಜವಾಬ್ದಾರಿತನದಿಂದ ಅಲೆನ್ ಬೈಕ್ ಗೆ ಅಪಘಾತವಾಯಿತು. ಆ ಅಪಘಾತದಲ್ಲಿ ಅಲೆನ್ ತನ್ನ ಬಲ ಕೈ ಮತ್ತು ಬಲಗಾಲನ್ನು ಕಳೆದುಕೊಂಡ.
 
ಕೈಕಾಲು ಕಳೆದುಕೊಂಡು ನಿಸ್ಸಹಾಯಕನಾಗಿ ಕುಳಿತುಕೊಂಡಾಗ ಮನಸ್ಸಲ್ಲಿ ಇದ್ದದ್ದು ಒಂದೇ ಗುರಿ. ಮತ್ತೆ ಟ್ರ್ಯಾಕ್ ಗೆ ಇಳಿಯಬೇಕು. ಬೈಕ್ ಓಡಿಸಬೇಕು. ಕನಸುಗಳೊಂದಿಗೆ ಅಲೆನ್ ನ ಆತ್ಮ ವಿಶ್ವಾಸ ಹೆಚ್ಚುತ್ತಾ ಹೋಯಿತು. ಎಡ ಕೈ ಮತ್ತು ಎಡ ಕಾಲಿನಲ್ಲೇ ಬೈಕ್ ಓಡಿಸಬೇಕು. ಅದಕ್ಕಾಗಿ ಆತ 400 ಸಿಸಿ ಹೋಂಡಾ ಬೈಕ್ನ  ಎಲ್ಲ ನಿಯಂತ್ರಣ ವ್ಯವಸ್ಥೆಗಳನ್ನು ಎಡಭಾಗಕ್ಕೆ ಶಿಫ್ಟ್ ಮಾಡಿದ. ಕಠಿಣ ಪ್ರಯತ್ನದ ನಂತರ ಒಂದೇ ಕೈ, ಕಾಲು ಬಳಸಿ ಬೈಕ್  ಓಡಿಸುವದರಲ್ಲಿ ಹಿಡಿತ ಸಾಧಿಸಿಯೇ ಬಿಟ್ಟ. ಇಷ್ಟೆಲ್ಲಾ ಮಾಡಿದರೂ ರೇಸಿಂಗ್ ಅಧಿಕಾರಿಗಳನ್ನು ಒಲಿಸಿ ಟ್ರ್ಯಾಕ್ ಗೆ ಇಳಿಯುವುದು ಕಷ್ಟವಾಗಿತ್ತು. ಆದರೆ ಅಲೆನ್ ನ ಹಠಕ್ಕೆ  ಅವರು ತಲೆಬಾಗಲೇ ಬೇಕಾಯಿತು.
ರೇಸಿಂಗ್ ಮಾತ್ರವಲ್ಲದೆ ವಿಕಲಾಂಗರಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲಸವನ್ನೂ ಅಲೆನ್ ಮಾಡುತ್ತಿದ್ದಾರೆ. ಚಿಕ್ಕ ಚಿಕ್ಕ ಸಮಸ್ಯೆಗಳಿಗೂ ಕುಗ್ಗಿ ಬಿಡುವ ಜನರ ನಡುವೆ ಅಲೆನ್ ರ ಜೀವನ ಮತ್ತು ಸಾಧನೆ ಇತರರಿಗೆ ಸ್ಪೂರ್ತಿ ನೀಡುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಉತ್ತರ ಪ್ರದೇಶ: "ಆಕ್ಷೇಪಾರ್ಹ" ಸ್ಥಿತಿಯಲ್ಲಿದ್ದ ಪ್ರೇಮಿಗಳನ್ನು ಹೊಡೆದು ಕೊಂದ ಕುಟುಂಬಸ್ಥರು!

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

SCROLL FOR NEXT