ಗಿಡ-ಮರಗಳ ಆರೈಕೆಯಲ್ಲಿ ಹರಿಕೃಷ್ಣ ಭಟ್ಟರು 
ಕೃಷಿ-ಪರಿಸರ

ಹೀಗೊಬ್ಬ ಪರಿಸರ ಪ್ರೇಮಿ

ಇಂದು ವಿಶ್ವ ಪರಿಸರ ದಿನ. ಇಲ್ಲೊಬ್ಬ ಹಿರಿಯ ಪ್ರಜೆ ತಮ್ಮ ಮನೆ ಸುತ್ತಮುತ್ತಲಿನ ಪರಿಸರವನ್ನು ಅಚ್ಚುಕಟ್ಟಾಗಿ ಇಡುವ ಮೂಲಕ ಮಾದರಿ ಎನಿಸಿದ್ದಾರೆ. ಅವರ ಪರಿಸರ ರಕ್ಷಣೆಯ ಕ್ರಮ ಹೀಗಿದೆ ನೋಡಿ...

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕೆಯ್ಯೂರಿನ ನಿವಾಸಿ ಹರಿಕೃಷ್ಣ ಭಟ್ ಅಂಚೆ ಇಲಾಖೆಯ ನಿವೃತ್ತ ನೌಕರರು. ತಮ್ಮ ಎರಡು ಎಕರೆಗೂ ಅಧಿಕ ಜಾಗದಲ್ಲಿ ರಬ್ಬರ್, ತೆಂಗು, ಬಾಳೆ, ಗೇರು, ಹೂವು, ಗಿಡಮೂಲಿಕೆಗಳನ್ನು ಬೆಳೆಸಿರುವ ಇವರು ದಿನವಿಡೀ ಕೃಷಿ ಚಟುವಟಿಕೆಯಲ್ಲಿ ತೊಡಗಿರುತ್ತಾರೆ. ಇವರ ವಿಶೇಷತೆ ಇರುವುದು ಪರಿಸರ ಕಾಳಜಿಯಲ್ಲಿ.

ತಮ್ಮ ಮನೆಯ ಹೊರಗೆ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡುತ್ತಾರೆ. ಇತರರನ್ನೂ ಗಿಡ ನೆಡುವಂತೆ, ಪರಿಸರವನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವಂತೆ ಪ್ರೇರೇಪಿಸುತ್ತಾರೆ.

ಇವರ ಇಡೀ ಜಾಗದಲ್ಲಿ ಸುತ್ತಿ ಬಂದರೂ  ಪ್ಲಾಸ್ಟಿಕ್, ಬಾಟಲಿ, ಗ್ಲಾಸು ಚೂರು ಸಿಗುವುದಿಲ್ಲ. ಬೇಡದ ಕಸ- ಕಡ್ಡಿಗಳಿಲ್ಲ. ಅಷ್ಟು ಸ್ವಚ್ಛವಾಗಿ ತಮ್ಮ ಇಡೀ ಆಸ್ತಿಯನ್ನು ನೋಡಿಕೊಳ್ಳುತ್ತಿದ್ದಾರೆ. ಅನವಶ್ಯಕ ಗಿಡ ಕಂಡುಬಂದರೆ ತಕ್ಷಣವೇ ಅದನ್ನು ಕಿತ್ತು ಹಾಕುತ್ತಾರೆ. ಮನೆಯ ಹಾಗೂ ಸುತ್ತಮುತ್ತಲ ಕಸವನ್ನು ರಾಶಿ ಹಾಕಿ ಅದನ್ನು ವಾರಕ್ಕೊಮ್ಮೆ ಹತ್ತಿರದ ಪಂಚಾಯತ್ ಕಸದ ತೊಟ್ಟಿಗೆ ಕೊಂಡು ಹೋಗಿ ಸುರಿಯುತ್ತಾರೆ. ಮನೆಯ ಸುತ್ತಲೂ ಹೂವು, ಗಿಡಮೂಲಿಕೆ  ಸಸ್ಯಗಳು. ಮನೆಗೆ ಮೇಲಿರುವ ಟಾಂಕಿಯಿಂದ ನೀರು ತುಂಬಿ ಹರಿದು ಕೆಳಗೆ ಬಿದ್ದರೆ ಅದು ಪೋಲಾಗಿ ಹೋಗುವುದನ್ನು ತಡೆಯಲು ಟಾಂಕಿಯ ಸುತ್ತಲೂ ತರೆಗೆಲೆ, ಕಾಗದದ ಚೂರು ಹಾಕಿ ಎರೆಹುಳವನ್ನು ಸಾಕುತ್ತಾರೆ.

 ಭಟ್ಟರ ಮನೆಯ ಗೇಟಿಗೆ ಚಪ್ಪರದಂತೆ ಮರ, ಗಿಡ-ಬಳ್ಳಿಗಳು ಆವರಿಸಿ ತಂಪನ್ನೀಯುತ್ತವೆ. ಒಂದು ಗಿಡವನ್ನು ನಾವು ಹೇಗೆ ಬೆಳೆಸುತ್ತೇವೆಯೋ ಆ ರೀತಿ ಬೆಳೆಯುತ್ತದೆ, ಅದನ್ನು ಅದರ ಪಾಡಿಗೆ ಬಿಟ್ಟರೆ ಬೇಕಾಬಿಟ್ಟಿಯಾಗಿ ಬೆಳೆಯುತ್ತದೆ ಎಂಬ ತತ್ವವನ್ನು ಚೆನ್ನಾಗಿ ಅರಿತಿರುವ ಇವರು ಗಿಡ ಮರಗಳನ್ನು ಬೇಕಾಬಿಟ್ಟಿ ಬೆಳೆಯಲು ಬಿಡುವುದಿಲ್ಲ. ಅವಕ್ಕೆ ಬಳ್ಳಿ ಕಟ್ಟಿ ಸರಿಯಾಗಿ ಬೆಳೆಯುವಂತೆ ನೋಡಿಕೊಳ್ಳುತ್ತಾರೆ.  ತಮ್ಮ ಮನೆಯ ಹೊರಗೆ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡುತ್ತಾರೆ. ಇತರರನ್ನೂ ಗಿಡ ನೆಡುವಂತೆ, ಪರಿಸರವನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವಂತೆ ಪ್ರೇರೇಪಿಸುತ್ತಾರೆ.

`ನಾವು ಪರಿಸರವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ’ ಎಂಬ ನಿಯಮಕ್ಕೆ ಬದ್ದರಾಗಿರುವ ಹರಿಕೃಷ್ಣ ಭಟ್ಟರು ಪರಿಸರದ ಗಿಡ, ಮರ, ಬಳ್ಳಿಗಳನ್ನು ತಮ್ಮ ಮನೆಯ ಸದಸ್ಯರಂತೆ ಸಾಕಿ ಸಲುಹುತ್ತಿದ್ದಾರೆ.
ಸುಮನಾ ಉಪಾಧ್ಯಾಯ
ಬೆಂಗಳೂರು  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

SCROLL FOR NEXT