ಒಂದು ಕೊಂಬಿನ ರೈನೋಸರಸ್ (ಸಂಗ್ರಹ ಚಿತ್ರ) 
ಕೃಷಿ-ಪರಿಸರ

ಅಸ್ಸಾಮಿನಲ್ಲಿ ಮತ್ತೊಂದು ರೈನೋ ಕೊಂದ ಬೇಟೆಗಾರರು

ಅಸ್ಸಾಮಿನ ಕಾಜಿರಂಗ ಅಭಯಾರಣ್ಯದಲ್ಲಿ ಬೇಟೆಗಾರರು ಒಂದು ಕೊಂಬಿನ ರೈನೋಸರಸ್ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೌಹಾಟಿ: ಅಸ್ಸಾಮಿನ ಕಾಜಿರಂಗ ಅಭಯಾರಣ್ಯದಲ್ಲಿ ಬೇಟೆಗಾರರು ಒಂದು ಕೊಂಬಿನ ರೈನೋಸರಸ್ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಭಯಾರಣ್ಯದಲ್ಲಿ ರೈನೋದ ಅವಶೇಷಗಳು ಪತ್ತೆಯಾಗಿವೆ ಎಂದು ಅಭಯಾರಣ್ಯದ ನಿರ್ದೇಶಕ ಎಂ ಕೆ ಯಾದವ್ ತಿಳಿಸಿದ್ದಾರೆ.

ಈ ವರ್ಷ ಈ ಅಭಯಾರಣ್ಯದಲ್ಲಿ ಕೊಲ್ಲಲಾಗಿರುವ ೧೩ ನೇ ರೈನೋ ಇದಾಗಿದೆ.

"ಬೇಟೆಗಾರರನ್ನು ಸೆರೆಹಿಡಿಯಲು ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಅಭಯಾರಣ್ಯದಲ್ಲಿ ಗಸ್ತು ಸುತ್ತುವ ಕಾರ್ಯ ಚುರುಕುಗೊಂಡಿದೆ" ಎಂದು ಯಾದವ್ ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಪಾರಂಪರಿಕ ತಾಣ ಎಂದು ಗುರುತಿಸಲಾಗಿರುವ ಈ ಅಭಯಾರಣ್ಯದ ಒಟ್ಟು ವಿಸ್ತೀರ್ಣ ೮೫೮ ಚದರ ಕಿಲೋಮೀಟರ್ ಗಳು. ಇದರ ಬಹುತೇಕ ಭಾಗ ಪ್ರವಾಹದಲ್ಲಿ ಸಿಲುಕಿದ್ದು, ಪ್ರಾಣಿಗಳನ್ನು ಎತ್ತರದ ಸ್ಥಾನಗಳಿಗೆ ನೂಕಿದೆ. ಇಂತಹ ಸಂದರ್ಭಗಳಲ್ಲಿ ಚಟುವಟಿಕೆ ನಡೆಸುವ ಬೇಟೆಗಾರರು ರೈನೋಗಳನ್ನು ಕೊಲ್ಲುತ್ತಾರೆ.

ಈ ಅಭಯಾರಣ್ಯದಲ್ಲಿ ಇದೇ ವರ್ಷ ಸುಮಾರು ೧೫ ಬೇಟೆಗಾರರನ್ನು ಕೂಡ ಕೊಲ್ಲಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT