ಒಂದು ಕೊಂಬಿನ ರೈನೋಸರಸ್ (ಸಂಗ್ರಹ ಚಿತ್ರ) 
ಕೃಷಿ-ಪರಿಸರ

ಅಸ್ಸಾಮಿನಲ್ಲಿ ಮತ್ತೊಂದು ರೈನೋ ಕೊಂದ ಬೇಟೆಗಾರರು

ಅಸ್ಸಾಮಿನ ಕಾಜಿರಂಗ ಅಭಯಾರಣ್ಯದಲ್ಲಿ ಬೇಟೆಗಾರರು ಒಂದು ಕೊಂಬಿನ ರೈನೋಸರಸ್ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೌಹಾಟಿ: ಅಸ್ಸಾಮಿನ ಕಾಜಿರಂಗ ಅಭಯಾರಣ್ಯದಲ್ಲಿ ಬೇಟೆಗಾರರು ಒಂದು ಕೊಂಬಿನ ರೈನೋಸರಸ್ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಭಯಾರಣ್ಯದಲ್ಲಿ ರೈನೋದ ಅವಶೇಷಗಳು ಪತ್ತೆಯಾಗಿವೆ ಎಂದು ಅಭಯಾರಣ್ಯದ ನಿರ್ದೇಶಕ ಎಂ ಕೆ ಯಾದವ್ ತಿಳಿಸಿದ್ದಾರೆ.

ಈ ವರ್ಷ ಈ ಅಭಯಾರಣ್ಯದಲ್ಲಿ ಕೊಲ್ಲಲಾಗಿರುವ ೧೩ ನೇ ರೈನೋ ಇದಾಗಿದೆ.

"ಬೇಟೆಗಾರರನ್ನು ಸೆರೆಹಿಡಿಯಲು ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಅಭಯಾರಣ್ಯದಲ್ಲಿ ಗಸ್ತು ಸುತ್ತುವ ಕಾರ್ಯ ಚುರುಕುಗೊಂಡಿದೆ" ಎಂದು ಯಾದವ್ ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಪಾರಂಪರಿಕ ತಾಣ ಎಂದು ಗುರುತಿಸಲಾಗಿರುವ ಈ ಅಭಯಾರಣ್ಯದ ಒಟ್ಟು ವಿಸ್ತೀರ್ಣ ೮೫೮ ಚದರ ಕಿಲೋಮೀಟರ್ ಗಳು. ಇದರ ಬಹುತೇಕ ಭಾಗ ಪ್ರವಾಹದಲ್ಲಿ ಸಿಲುಕಿದ್ದು, ಪ್ರಾಣಿಗಳನ್ನು ಎತ್ತರದ ಸ್ಥಾನಗಳಿಗೆ ನೂಕಿದೆ. ಇಂತಹ ಸಂದರ್ಭಗಳಲ್ಲಿ ಚಟುವಟಿಕೆ ನಡೆಸುವ ಬೇಟೆಗಾರರು ರೈನೋಗಳನ್ನು ಕೊಲ್ಲುತ್ತಾರೆ.

ಈ ಅಭಯಾರಣ್ಯದಲ್ಲಿ ಇದೇ ವರ್ಷ ಸುಮಾರು ೧೫ ಬೇಟೆಗಾರರನ್ನು ಕೂಡ ಕೊಲ್ಲಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT