ಅಗ್ನಿಶಿಲೆಯಾದ ಇಂಗಾಲಾಮ್ಲ (ಸೈನ್ಸ್ಸ್ ಮ್ಯಾಗ್ ಚಿತ್ರ) 
ಕೃಷಿ-ಪರಿಸರ

ಅಗ್ನಿಶಿಲೆಯಾಗಿ ಬದಲಾಯ್ತು ಕಾರ್ಬನ್ ಡೈಆಕ್ಸೈಡ್!

ವಾತಾವರಣದಲ್ಲಿ ಉಷ್ಣತೆ ಹೆಚ್ಚಿಸಿ, ಹಸಿರು ಮನೆ ಪರಿಣಾಮ ಉಂಟು ಮಾಡಬಲ್ಲ ವಿಷಾನಿಲ ಇಂಗಾಲಾಮ್ಲ (ಕಾರ್ಬನ್ ಡೈಆಕ್ಸೈಡ್)ದ ದುಷ್ಪರಿಣಾಮ ಸಮಸ್ಯೆಗೆ ವಿಜ್ಞಾನಿಗಳ ಯಶಸ್ವೀ ಪರಿಹಾರ ಕಂಡುಕೊಂಡಿದ್ದು, ಇಂಗಾಲಾಮ್ಲವನ್ನು ಅಗ್ನಿಶಿಲೆಯಾಗಿ ಮಾರ್ಪಡಿಸುವ ಸಂಶೋಧನೆ ಮಾಡಿದ್ದಾರೆ.

ವಾಷಿಂಗ್ಟನ್: ವಾತಾವರಣದಲ್ಲಿ ಉಷ್ಣತೆ ಹೆಚ್ಚಿಸಿ, ಹಸಿರು ಮನೆ ಪರಿಣಾಮ ಉಂಟು ಮಾಡಬಲ್ಲ ವಿಷಾನಿಲ ಇಂಗಾಲಾಮ್ಲ (ಕಾರ್ಬನ್ ಡೈಆಕ್ಸೈಡ್)ದ ದುಷ್ಪರಿಣಾಮ ಸಮಸ್ಯೆಗೆ ವಿಜ್ಞಾನಿಗಳ  ಯಶಸ್ವೀ ಪರಿಹಾರ ಕಂಡುಕೊಂಡಿದ್ದು, ಇಂಗಾಲಾಮ್ಲವನ್ನು ಅಗ್ನಿಶಿಲೆಯಾಗಿ ಮಾರ್ಪಡಿಸುವ ಸಂಶೋಧನೆ ಮಾಡಿದ್ದಾರೆ.

ಅಮೆರಿಕ ವಿಜ್ಞಾನಿಗಳು ಈ ನೂತನ ಸಂಶೋಧನೆ ಮಾಡಿದ್ದು, ವಾತಾವರಣದಲ್ಲಿನ ಕಾರ್ಬನ್ ಡೈಆಕ್ಸೈಡನ್ನು ಕಲ್ಲಿನ ಬಂಡೆಯಾಗಿ ಪರಿವರ್ತಿಸುವ ಹೊಸ ತಂತ್ರಜ್ಞಾನವನ್ನು ಅವರು  ಸಂಶೋಧಿಸಿದ್ದಾರೆ. ಕಾರ್ಬನ್ ಡೈಆಕ್ಸೈಡನ್ನು ನೀರಿನೊಂದಿಗೆ ಸೇರಿಸಿ ನೂರಾರು ಅಡಿಗಳಷ್ಟು ಆಳದ ಕಂದಕದಲ್ಲಿ ಇರಿಸಲಾಗುತ್ತದೆ. ಇದಕ್ಕೆ ಕೆಲ ರಾಸಾಯನಿಕಗಳ ಮಿಶ್ರಣ ಮಾಡುವುದರಿಂದ  ಇದು ಕಾಲಕ್ರಮೇಣ ಅಗ್ನಿಶಿಲೆಯಾಗಿ ಮಾರ್ಪಾಡಾಗುತ್ತದೆ ಎಂಬುದು ವಿಜ್ಞಾನಿಗಳ ವಾದವಾಗಿದೆ.

ಇದಕ್ಕೆ ವಿಜ್ಞಾನಿಗಳು ತಮ್ಮ ನಿದರ್ಶನವನ್ನು ಕೂಡ ನೀಡಿದ್ದು, ಅಮೆರಿಕದ ಹೆಲಿಶೈಡಿಯಲ್ಲಿರುವ ಜಿಯೋಥರ್ಮಲ್ ಘಟಕದಲ್ಲಿ ಈ ಪ್ರಯೋಗ ನಡೆಸಿದ್ದಾರೆ. ಈ  ಜಿಯೋಥರ್ಮಲ್ ಘಟಕದಿಂದ  ಪ್ರತಿವರ್ಷ 40 ಸಾವಿರ ಟನ್ ಕಾರ್ಬನ್ ಡೈಆಕ್ಸೈಡ್ ಹೊರಸೂಸುತ್ತದೆ. 2012ರಲ್ಲಿ 250 ಟನ್ ಕಾರ್ಬನ್ ಡೈಆಕ್ಸೈಡ್‌ನ್ನು ನೀರಿನೊಂದಿಗೆ ಆಳವಾದ ಸುರಂಗದಲ್ಲಿ ಸಂಗ್ರಹಿಸಿಡಲಾಗಿದ್ದು,  ಇದು ಘನವಸ್ತುವಾಗಿ ಮಾರ್ಪಡಲು ನೂರಾರು ವರ್ಷ ಬೇಕಾಗಬಹುದೆಂದು ವಿಜ್ಞಾನಿಗಳು ಅಂದಾಜಿಸಿದ್ದರು. ಆದರೆ ಇತ್ತೀಚೆಗೆ ಇದನ್ನು ಪರೀಕ್ಷಿಸಿದಾಗ ಬಿಳಿ ಕಲ್ಲಾಗಿ ಪರಿವರ್ತನೆಯಾಗಿತ್ತು  ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

SCROLL FOR NEXT