ಭತ್ತದ ಬೆಂಬಲ ಬೆಲೆ ಏರಿಕೆ 
ಕೃಷಿ-ಪರಿಸರ

ಭತ್ತದ ಮೇಲಿನ ಕನಿಷ್ಠ ಬೆಂಬಲ ಬೆಲೆ 60 ರು. ಏರಿಕೆ: ಕೇಂದ್ರ

ಪ್ರಮುಖ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ಬುಧವಾರ ಭತ್ತದ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು 60ರು.ಗೆ ಏರಿಕೆ ಮಾಡಿದ್ದು, ಪ್ರತೀ ಕ್ವಿಂಟಾಲ್ ಭತ್ತದ ಬೆಲೆಯನ್ನು ಇದೀಗ 1, 470ಕ್ಕೇರಿಕೆ ಮಾಡಲಾಗಿದೆ.

ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ಬುಧವಾರ ಭತ್ತದ ಮೇಲಿನ ಕನಿಷ್ಛ ಬೆಂಬಲ ಬೆಲೆಯನ್ನು 60ರುಗೆ ಏರಿಕೆ ಮಾಡಿದ್ದು, ಪ್ರತೀ ಕ್ವಿಂಟಾಲ್ ಭತ್ತದ ಬೆಲೆಯನ್ನು  ಇದೀಗ 1, 470ಕ್ಕೇರಿಕೆ ಮಾಡಲಾಗಿದೆ.

2016-17ನೇ ಸಾಲಿನಲ್ಲಿ ಮುಂಗಾರು ಹಂಗಾಮಿಗಾಗಿ ಕೇಂದ್ರ ಸರ್ಕಾರ ಬೆಂಬಲ ಬೆಲೆ ಪರಿಷ್ಕರಿಸಿದ್ದು, ಆರ್ಥಿಕ ವ್ಯವಹಾರಗಳ ಸಮಿತಿ ಸಭೆ ಬಳಿಕ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ  ಎಂದು ತಿಳಿದುಬಂದಿದೆ. ಭತ್ತದ (ಸಾಮಾನ್ಯ) ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 60ರು ಏರಿಕೆ ಮಾಡಲಾಗಿದ್ದು, ಭತ್ತದ ಬೆಲೆಯನ್ನು1,470 ರುಪಾಯಿಗೆ ಏರಿಕೆ ಮಾಡಲಾಗಿದೆ ಎಂದು ಸರ್ಕಾರದ  ಮೂಲಗಳು ತಿಳಿಸಿವೆ. ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿ ಸಭೆಯ ನಂತರ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಕೃಷಿ ವೆಚ್ಚ ಹಾಗೂ ದರ ನಿಗದಿ ಆಯೋಗದ (ಸಿಎಸಿಪಿ) ಸಲಹೆಯನ್ನು ಸ್ವೀಕರಿಸಿರುವ ಕೇಂದ್ರ ಸರ್ಕಾರ ವಿವಿಧ ಬೆಳೆ, ಕಾಳು, ಧಾನ್ಯಗಳ ಮೇಲಿನ ಬೆಂಬಲ ಬೆಲೆ ಹೆಚ್ಚಿಸುವ ನಿರ್ಧಾರ  ಕೈಗೊಂಡಿದೆ. 2014-15 ಸಾಲಿನಲ್ಲಿ ಎ ದರ್ಜೆಯ ಬತ್ತದ ಕನಿಷ್ಠ ಬೆಂಬಲ ಬೆಲೆಯನ್ನು ರು.1,410ರಿಂದ ರು. 1,450ಕ್ಕೆ ಏರಿಸಲಾಗಿತ್ತು. ಇದೀಗ ಈ ದರವನ್ನು ಪರಿಷ್ಕರಣೆ ಮಾಡಲಾಗಿದ್ದು, ಪ್ರತೀ  ಕ್ವಿಂಟಾಲ್ ಭತ್ತದ ದರದಲ್ಲಿ 60 ರು. ಏರಿಕೆ ಮಾಡಲಾಗಿದೆ. 2015-16 ರ ಹಂಗಾಮಿಗೆ ಸಾಧಾರಣ ಬತ್ತಕ್ಕೆ ಕ್ವಿಂಟಾಲಿಗೆ 1,410 ರುಪಾಯಿ, ಉತ್ತಮ ಗುಣಮಟ್ಟದ ಭತ್ತಕ್ಕೆ 1,510 ರುಪಾಯಿಗಳು  ದೊರೆಯಲಿದೆ.

ಇದೇ ವೇಳೆ ದ್ವಿದಳ ಧಾನ್ಯಗಳ ಬೆಂಬಲ ಬೆಲಯನ್ನೂ ಕೂಡ ಕೇಂದ್ರ ಸರ್ಕಾರ ಏರಿಕೆ ಮಾಡಿದ್ದು, ದ್ವಿದಳ ಧಾನ್ಯಗಳ ಬೆಂಬಲ ಬೆಲೆಯನ್ನು 400ರು ಏರಿಕೆ ಮಾಡಿದೆ. ಹತ್ತಿಯ ಮೇಲಿನ ಬೆಂಬಲ ಬೆಲೆಯನ್ನೂ ಸಿಸಿಇಎ 60 ರು.ಗಳಿಗೆ ಏರಿಕೆ ಮಾಡಿದ್ದು, ಮಧ್ಯಮ ದರ್ಜೆಯ ಹತ್ತಿ ಬೆಲೆ 3,860ಕ್ಕೆ ಏರಿಕೆ ಮಾಡಿದೆ. ಧೀರ್ಘ ಪ್ರಧಾನ ದರ್ಜೆಯ ಹತ್ತಿಗೆ 4,160  ರು. ದರ ನಿಗದಿಪಡಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT