ಬೆಂಕಿ ಕ್ರೀಡೆ, 
ಭಕ್ತಿ-ಭವಿಷ್ಯ

ಕಟೀಲು: ಮೈ ಜುಮ್ಮೆನಿಸುವ 'ತೋಟೆದಾರ' ಬೆಂಕಿ ಕ್ರೀಡೆ, ಸ್ಥಳೀಯ ಭಕ್ತರಿಂದ ವಿಶೇಷ ಸೇವೆ

ಇತಿಹಾಸ ಪ್ರಸಿದ್ಧ ದುರ್ಗಾ ಪರಮೇಶ್ವರಿ ದೇವಳದ ಜಾತ್ರಾ ಮಹೋತ್ಸವ ವೇಳೆ ನಡೆಯುವ ಸಂಪ್ರದಾಯವೊಂದು ಮೈ ಜುಮ್ಮೆನಿಸುತ್ತದೆ.

ಮಂಗಳೂರು: ಇತಿಹಾಸ ಪ್ರಸಿದ್ಧ ದುರ್ಗಾ ಪರಮೇಶ್ವರಿ ದೇವಳದ ಜಾತ್ರಾ ಮಹೋತ್ಸವ ವೇಳೆ ನಡೆಯುವ ಸಂಪ್ರದಾಯವೊಂದು ಮೈ ಜುಮ್ಮೆನಿಸುತ್ತದೆ. ತಾಳೆಯ ಗರಿಯನ್ನು ಸುತ್ತಿ ಬೆಂಕಿಯನ್ನು ಹೊತ್ತಿಸಿ ಅದನ್ನು ಭಕ್ತರು ಒಬ್ಬರ ಮೇಲೊಬ್ಬರು ಎಸೆಯುತ್ತಾರೆ.

ಇದು ತುಳುನಾಡಿನ ಪರಂಪರೆಯಾಗಿದ್ದು, ಶತಶತಮಾನಗಳಿಂದಲೂ ನಡೆದುಕೊಂಡು ಬಂದಿದೆ.ಅಸುರ ಅರುಣಾಸುರನನ್ನು ಸಂಹರಿಸಿದ ದೇವಿ ವಿಜಯಿಯಾಗಿ ಬರುವ ವೇಳೆ ಈ ರೀತಿ ಬೆಂಕಿಯಿಂದ ಸ್ವಾಗತ ಕೋರಲಾಗುತಿತ್ತು ಎಂಬ ಪ್ರತೀತಿ ಇದೆ.

ಇತಿಹಾಸದಲ್ಲಿ ಪ್ರಾಚೀನ ಕಾಲದಿಂದಲೂ ನಡೆದು ಬಂದಿರುವ ವಿಶೇಷವಾದ ನಂಬಿಕೆ ಹಾಗೂ ಆಚರಣೆ ಇದಾಗಿದ್ದು, ಈ ವೇಳೆ ಭಕ್ತರ ಮೈ ಮೇಲೆ ಕೇವಲ ಶಾಲು ಹಾಗೂ ಧೋತಿಯನ್ನು ಮಾತ್ರ ಧರಿಸಿರುತ್ತಾರೆ. ಹಾಗಿದ್ದರೂ ಈವರೆಗೂ ತೋಟೆದಾರಗದಲ್ಲಿ ಬೆಂಕಿ ಅನಾಹುತ, ಭಕ್ತಾಧಿಗಳ ಮೈ ಮೇಲೆ ಗಾಯಗಳುಂಟಾದ ಉದಾಹರಣೆಗಳಿಲ್ಲ.

ತೋಟೆದಾರ ಎಂಬುದು ಅತ್ತೂರು, ಕೊಡೆತೂರು ಸ್ಥಳೀಯ ಗ್ರಾಮಸ್ಥರಿಂದ ನಡೆಯುವ ವಿಶೇಷ ಸೇವೆಯಾಗಿದೆಯ ಇದರಲ್ಲಿ ಭಾಗವಹಿಸುವವರು ವ್ರತದಲ್ಲಿ ಇರುತ್ತಾರೆ. ಮಧು ಮಾಂಸ ಇತ್ಯಾದಿ ವರ್ಜ್ಯ. ನಂದಿನಿ ನದಿಯಲ್ಲಿ ಮುಳುಗಿ ಮೈಗೆ ಗಂಧ ಲೇಪನ ಮಾಡಿ ಭಕ್ತಿಯಿಂದ ಬೆಂಕಿಯ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಾರೆ.

ಈ ವೈಶಿಷ್ಠ್ಯ ಪೂರ್ಣ ಆಚರಣೆಯಲ್ಲಿ ಪಾಲ್ಗೊಳ್ಳಲು ನಡುರಾತ್ರಿಯ ವೇಳೆ ಸಾವಿರಾರು ಸಂಖ್ಯೆಯ ಭಕ್ತರು ನೆರೆಯುತ್ತಾರೆ.  15ರಿಂದ 20 ಮೀಟರ್ ದೂರದಲ್ಲಿ ನಿಂತಿಕೊಳ್ಳುವ ಎರಡು ಗುಂಪುಗಳು   ತಾಳೆಯ ಗರಿಯನ್ನು ಸುತ್ತಿ ಬೆಂಕಿಯನ್ನು ಹೊತ್ತಿಸಿ ಅದನ್ನು ಭಕ್ತರು ಒಬ್ಬರ ಮೇಲೊಬ್ಬರು ಎಸೆಯುತ್ತಾರೆ ಎಂದು ಕಟೀಲು ದುರ್ಗಾ ಪರಮೇಶ್ವರಿ ದೇವಾಲಯದ ಆರ್ಚಕ ಹರಿ ನಾರಾಯಣ ದಾಸ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT