ಭಕ್ತಿ-ಭವಿಷ್ಯ

ಶ್ರಾವಣ ಮಾಸದಲ್ಲೇ 'ನಾಗರಪಂಚಮಿ' ಏಕೆ ಆಚರಿಸುತ್ತೇವೆ ಗೊತ್ತಾ?

Nagaraja AB
ಬೆಂಗಳೂರು: ಪವಿತ್ರ ಮಾಸ ಶ್ರಾವಣ ಬಂತೆಂದರೆ ಸಾಕು ಸಾಲು ಸಾಲು ಹಬ್ಬಗಳ ಸಡಗರ , ಸಂಭ್ರಮ ಎಲ್ಲೆಡೆ  ಮನೆಮಾಡುತ್ತದೆ.ಶ್ರಾವಣ  ಶಿವರಾತ್ರಿ ಹಾಗೂ ಹರಿಯಾಲಿ ಜೀತ್ ಹಬ್ಬದ ನಂತರ ಇದೀಗ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಶುಕ್ಲಾ ಪಂಚಾಮಿ ಹಾಗೂ ದಕ್ಷಿಣ ಭಾರತದಲ್ಲಿ ಕೃಷ್ಣಾ ಪಕ್ಷದಲ್ಲಿ ನಾಗರ ಪಂಚಮಿ ಹಬ್ಬ ಆಚರಿಸಲಾಗುತ್ತದೆ. 
ಶ್ರವಣ ಮಾಸದ ಶುಕ್ಲಾ ಪಕ್ಷದ ಐದನೇ ದಿನದಂದು ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 5 ರಂದು ನಾಗರಪಂಚಮಿ ಬಂದಿದೆ. ಭಕ್ತಾಧಿಗಳು ಹುತ್ತ ಹಾಗೂ ಹಾವಿನ ವಿಗ್ರಹಗಳನ್ನು ಹೂ, ಹಣ್ಣುಗಳಿಂದ ಆಲಂಕರಿಸಿ, ಹಾಲೆರೆದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಕೆಲವರು ಗರುಡ ಪಂಚಾಮಿ ಹಬ್ಬವಾಗಿಯೂ ಆಚರಿಸುತ್ತಾರೆ. ಈ ಪವಿತ್ರ ದಿನದಂದು ಭಕ್ತಾಧಿಗಳು ರುದ್ರಾಭಿಷೇಕ ಪೂಜೆ ಸಲ್ಲಿಸಿ ಪ್ರಾರ್ಥಿಸುತ್ತಾರೆ. 
ಶಿವನ ಆರಾಧಕರಿಗೆ ನಾಗರ ಪಂಚಮಿ ಅತಿ ಮುಖ್ಯವಾದ ಹಬ್ಬವಾಗಿದೆ. ಮರ, ಬೆಳ್ಳಿ, ಕಲ್ಲು ಮತ್ತಿತರ ವಸ್ತುಗಳಿಂದ ಮಾಡಲಾದ ಹಾವಿನ ವಿಗ್ರಹಗಳಿಗೆ ಹಾಲಿನಿಂದ ಅಭಿಷೇಕ ಮಾಡಲಾಗುತ್ತದೆ. ಹಿಂದೂ ಪುರಾಣಗಳಲ್ಲಿ  ಹಾವುಗಳಿಗೆ ಮಹತ್ವದ ಸ್ಥಾನ ನೀಡಲಾಗುತ್ತದೆ. ಹಾವುಗಳಿಗೆ ಸಂಬಂಧಿಸಿದಂತೆ  ಪುರಾಣಗಳಲ್ಲಿ ಅನೇಕ ಕಥೆಗಳು ಇವೆ. ಶಿವನ ಶೇಷನಾಗನಿಗೆ ಸಂಬಂಧಿಸಿ ಹಲವು ಕಥೆಗಳಿವೆ. 
ಶೇಷನಾಗನ ಬೆಂಬಲದಿಂದ ಇಡೀ ಭೂಮಿ ಸಮತೋಲನದಲ್ಲಿದೆ ಎಂದು ನಂಬಲಾಗುತ್ತದೆ. ಈ ದಿನದಂದು ನಾಗರಾಜನನ್ನು ಪೂಜೆಸಿದರೆ ಅಪಾಯಕಾರಿ ಹಾವುಗಳಿಂದ ಕುಟುಂಬಕ್ಕೆ ರಕ್ಷಣೆ ದೊರೆಯಲಿದೆ ಎಂಬ ನಂಬಿಕೆಯಿಂದ ಜನರು ವಿಶೇಷ ಪೂಜೆ ಸಲ್ಲಿಸುತ್ತಾರೆ. 
ನಾಗ ಸಂಸ್ಕೃತಿ ಹಿಂದೂ ಸಂಸ್ಕೃತಿಯೂ ಆಗಿದೆ. ಆರ್ಯರ ಕಾಲದಿಂದಲೂ ಹಾವುಗಳನ್ನು ಪೂಜೆಸುವ ಪದ್ಧತಿ ಬೆಳೆದುಕೊಂಡು ಬಂದಿದೆ. ಶಿವನ್ನು ತನ್ನ ಕೊರಳಿನ ಸುತ್ತಲೂ ಹಾವನ್ನು ಸುತ್ತಿಕೊಂಡಿರುವ ಹಿನ್ನೆಲೆಯಲ್ಲಿ  ಹಾವುಗಳಿಗೆ ದೇವರ ಸ್ಥಾನ ನೀಡಲಾಗಿದೆ. ಯಮುನಾ ನದಿಯಲ್ಲಿ ಕಲಿಯಾ ನಾಗ ವಿರುದ್ಧ ಕೃಷ್ಣ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿಯೂ ಕೆಲವರು ನಾಗರ ಪಂಚಮಿ ಆಚರಿಸುತ್ತಾರೆ. 
SCROLL FOR NEXT