ನಾಗರ ಪಂಚಮಿ 
ಭಕ್ತಿ-ಭವಿಷ್ಯ

ಶ್ರಾವಣ ಮಾಸದಲ್ಲೇ 'ನಾಗರಪಂಚಮಿ' ಏಕೆ ಆಚರಿಸುತ್ತೇವೆ ಗೊತ್ತಾ?

ಪವಿತ್ರ ಮಾಸ ಶ್ರಾವಣ ಬಂತೆಂದರೆ ಸಾಕು ಸಾಲು ಸಾಲು ಹಬ್ಬಗಳ ಸಡಗರ , ಸಂಭ್ರಮ ಎಲ್ಲೆಡೆ ಮನೆಮಾಡುತ್ತದೆ.ಶ್ರಾವಣ ಶಿವರಾತ್ರಿ ಹಾಗೂ ಹರಿಯಾಲಿ ಜೀತ್ ಹಬ್ಬದ ನಂತರ ಇದೀಗ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತಿದೆ

ಬೆಂಗಳೂರು: ಪವಿತ್ರ ಮಾಸ ಶ್ರಾವಣ ಬಂತೆಂದರೆ ಸಾಕು ಸಾಲು ಸಾಲು ಹಬ್ಬಗಳ ಸಡಗರ , ಸಂಭ್ರಮ ಎಲ್ಲೆಡೆ  ಮನೆಮಾಡುತ್ತದೆ.ಶ್ರಾವಣ  ಶಿವರಾತ್ರಿ ಹಾಗೂ ಹರಿಯಾಲಿ ಜೀತ್ ಹಬ್ಬದ ನಂತರ ಇದೀಗ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಶುಕ್ಲಾ ಪಂಚಾಮಿ ಹಾಗೂ ದಕ್ಷಿಣ ಭಾರತದಲ್ಲಿ ಕೃಷ್ಣಾ ಪಕ್ಷದಲ್ಲಿ ನಾಗರ ಪಂಚಮಿ ಹಬ್ಬ ಆಚರಿಸಲಾಗುತ್ತದೆ. 
ಶ್ರವಣ ಮಾಸದ ಶುಕ್ಲಾ ಪಕ್ಷದ ಐದನೇ ದಿನದಂದು ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 5 ರಂದು ನಾಗರಪಂಚಮಿ ಬಂದಿದೆ. ಭಕ್ತಾಧಿಗಳು ಹುತ್ತ ಹಾಗೂ ಹಾವಿನ ವಿಗ್ರಹಗಳನ್ನು ಹೂ, ಹಣ್ಣುಗಳಿಂದ ಆಲಂಕರಿಸಿ, ಹಾಲೆರೆದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಕೆಲವರು ಗರುಡ ಪಂಚಾಮಿ ಹಬ್ಬವಾಗಿಯೂ ಆಚರಿಸುತ್ತಾರೆ. ಈ ಪವಿತ್ರ ದಿನದಂದು ಭಕ್ತಾಧಿಗಳು ರುದ್ರಾಭಿಷೇಕ ಪೂಜೆ ಸಲ್ಲಿಸಿ ಪ್ರಾರ್ಥಿಸುತ್ತಾರೆ. 
ಶಿವನ ಆರಾಧಕರಿಗೆ ನಾಗರ ಪಂಚಮಿ ಅತಿ ಮುಖ್ಯವಾದ ಹಬ್ಬವಾಗಿದೆ. ಮರ, ಬೆಳ್ಳಿ, ಕಲ್ಲು ಮತ್ತಿತರ ವಸ್ತುಗಳಿಂದ ಮಾಡಲಾದ ಹಾವಿನ ವಿಗ್ರಹಗಳಿಗೆ ಹಾಲಿನಿಂದ ಅಭಿಷೇಕ ಮಾಡಲಾಗುತ್ತದೆ. ಹಿಂದೂ ಪುರಾಣಗಳಲ್ಲಿ  ಹಾವುಗಳಿಗೆ ಮಹತ್ವದ ಸ್ಥಾನ ನೀಡಲಾಗುತ್ತದೆ. ಹಾವುಗಳಿಗೆ ಸಂಬಂಧಿಸಿದಂತೆ  ಪುರಾಣಗಳಲ್ಲಿ ಅನೇಕ ಕಥೆಗಳು ಇವೆ. ಶಿವನ ಶೇಷನಾಗನಿಗೆ ಸಂಬಂಧಿಸಿ ಹಲವು ಕಥೆಗಳಿವೆ. 
ಶೇಷನಾಗನ ಬೆಂಬಲದಿಂದ ಇಡೀ ಭೂಮಿ ಸಮತೋಲನದಲ್ಲಿದೆ ಎಂದು ನಂಬಲಾಗುತ್ತದೆ. ಈ ದಿನದಂದು ನಾಗರಾಜನನ್ನು ಪೂಜೆಸಿದರೆ ಅಪಾಯಕಾರಿ ಹಾವುಗಳಿಂದ ಕುಟುಂಬಕ್ಕೆ ರಕ್ಷಣೆ ದೊರೆಯಲಿದೆ ಎಂಬ ನಂಬಿಕೆಯಿಂದ ಜನರು ವಿಶೇಷ ಪೂಜೆ ಸಲ್ಲಿಸುತ್ತಾರೆ. 
ನಾಗ ಸಂಸ್ಕೃತಿ ಹಿಂದೂ ಸಂಸ್ಕೃತಿಯೂ ಆಗಿದೆ. ಆರ್ಯರ ಕಾಲದಿಂದಲೂ ಹಾವುಗಳನ್ನು ಪೂಜೆಸುವ ಪದ್ಧತಿ ಬೆಳೆದುಕೊಂಡು ಬಂದಿದೆ. ಶಿವನ್ನು ತನ್ನ ಕೊರಳಿನ ಸುತ್ತಲೂ ಹಾವನ್ನು ಸುತ್ತಿಕೊಂಡಿರುವ ಹಿನ್ನೆಲೆಯಲ್ಲಿ  ಹಾವುಗಳಿಗೆ ದೇವರ ಸ್ಥಾನ ನೀಡಲಾಗಿದೆ. ಯಮುನಾ ನದಿಯಲ್ಲಿ ಕಲಿಯಾ ನಾಗ ವಿರುದ್ಧ ಕೃಷ್ಣ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿಯೂ ಕೆಲವರು ನಾಗರ ಪಂಚಮಿ ಆಚರಿಸುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT