ಬೀದರ್ ಕೋಟೆ 
ವಾಹನ

ಬೀದರ್ ಕೋಟೆಯ ಬೆರಗು

ಬೀದರ್ ಅಂದರೇನೆ ಹಾಗೆ. ಅದೊಂದು ಕೋಟೆ ಕೊತ್ತಲಗಳ, ಪ್ರಾಚೀನ ಇತಿಹಾಸವುಳ್ಳ,..

ಬೀದರ್ ಕೋಟೆಯ ಮಹಾದ್ವಾರ ಶಾರ್ಜಾ ದರವಾಜಾದ ಕಮಾನಿನ ಮೇಲೆ ಎಡ-ಬಲಕ್ಕೆ ಕಲ್ಲಿನಲ್ಲಿ ಕೆತ್ತಿದ ಹುಲಿಗಳ ಚಿತ್ರಗಳಿವೆ. ಕೋಟೆಯ ಒಳಗೆ ಕಾಲಿಡುತ್ತಲೇ ನಮ್ಮ ಕಣ್ಣಿಗೆ ಗಗನ್ ಮಹಲ್ ಕಾಣಿಸುತ್ತದೆ. ಈ ಗಗನ್ ಮಹಲ್ ಅರಸರ ವಾಸದ ಮನೆಯಾಗಿತ್ತು...

ಬೀದರ್ ಅಂದರೇನೆ ಹಾಗೆ. ಅದೊಂದು ಕೋಟೆ ಕೊತ್ತಲಗಳ, ಪ್ರಾಚೀನ ಇತಿಹಾಸವುಳ್ಳ, ಪ್ರೇಕ್ಷಣೀಯ ಸ್ಥಳಗಳಿಂದ ಕೂಡಿದ ತಾಣ. ಇವುಗಳೆಲ್ಲವುಗಳಿಗೂ ಮುಕುಟ ಪ್ರಾಯದಂತಿಗೆ ಬೀದರ್‌ನ ಕೋಟೆ. ಈ ಕೋಟೆ, ಅರಮನೆ, ಸುಂದರ ಮಹಲು, ಬಸದಿ, ವಸ್ತುಸಂಗ್ರಹಾಲಯ, ಶಾಸನ ಹೀಗೆ ಮುಂತಾದ ಐತಿಹಾಸಿಕ ಸಂಪತ್ತುಗಳನ್ನು ತನ್ನೊಡಲಿನಲ್ಲಿ ಇಟ್ಟುಕೊಂಡಿದೆ.

ಬೀದರ್ ಕೋಟೆಯ ಮಹಾದ್ವಾರ ಶಾರ್ಜಾ ದರವಾಜಾದ ಕಮಾನಿನ ಮೇಲೆ ಎಡ-ಬಲಕ್ಕೆ ಕಲ್ಲಿನಲ್ಲಿ ಕೆತ್ತಿದ ಹುಲಿಗಳ ಚಿತ್ರಗಳಿವೆ. ಕೋಟೆಯ ಒಳಗೆ ಕಾಲಿಡುತ್ತಲೇ ನಮ್ಮ ಕಣ್ಣಿಗೆ ಗಗನ್ ಮಹಲ್ ಕಾಣಿಸುತ್ತದೆ. ಈ ಗಗನ್ ಮಹಲ್ ಅರಸರ ವಾಸದ ಮನೆಯಾಗಿತ್ತು. ಇದೊಂದು ಬಹುಮಹಡಿ ಕಟ್ಟಡ. ಇದಕ್ಕೆ ತರ್ಕಶ್ ಮಹಲ್, ಝನಾನಾ ಎಂಬ ಹೆಸರುಗಳೂ ಇವೆ.

ಈ ಕಟ್ಟಡದಲ್ಲಿ ನೂರಾರು ಕೊಠಡಿಗಳುಳ್ಳ ಒಂದು ದೊಡ್ಡ ನೆಲಮಹಡಿ ಇದ್ದು ಅದನ್ನು ಹಜಾರ ಮಹಲ್ ಎದು ಕರೆಯುತ್ತಾರೆ. ಗಗನ್ ಮಹಲ್ ಪಕ್ಕದಲ್ಲೇ ಇರುವ ಮಸೀದಿಯಲ್ಲಿ ಹದಿನಾರು ಕಂಬಗಳು ಸಾಲಾಗಿ ಇರುವುದರಿಂದ ಇದಕ್ಕೆ ಸೋಲಾಹ-ಕಂಬ ಮಸೀದಿಯೆಂದು ಕರೆಯುತ್ತಾರೆ. ಈ ಮಸೀದಿಯೂ 300 ಅಡಿ ಉದ್ದವಿದ್ದು ಒಳಗಡೆ 60 ಕಂಬಗಳಿವೆ. ಬಹುಮನಿ ಅರಸರು ಈ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದರು.

ರಂಗಿನ ಮಹಲ್
ರಂಗಿನ ಮಹಲ್ ಕಟ್ಟಡವು ಅಂದಿನ ಕಾಲದ ಅರಸರ ಅತಿಥಿ ಕೋಣೆಯಾಗಿತ್ತು. ಈ ಕಟ್ಟಡವನ್ನು ಪರ್ಶಿಯನ್ ಮತ್ತು ಬಿದ್ರಿ ಕಲೆಯನ್ನು ಬಳಸಿ ಕಟ್ಟಲಾಗಿದ್ದು, ಬರೀದ್ ಶಾಹ್‌ನಿಂದ ನಿರ್ಮಿಸಲ್ಪಟ್ಟಿದೆ. ಹತ್ತು ಹಲವು ಕೋಣೆಗಳಿಂದ 'ಟೀರವುಡ್‌' ಬಳಸಿ ಇದರ ಮಾಳಿಗೆ ಹಾಕಲಾಗಿದೆ. ಇನ್ನು ಇಲ್ಲಿರುವ ಗವಾನ ಮದರಸಾವು ಬಹುಮನಿ ಅರಸರ ಕಾಲದ 'ವಿದ್ಯಾಕೇಂದ್ರ' 1472ರಲ್ಲೇ ನಿರ್ಮಿತವಾಗಿದೆ.

ಬೀದರ್‌ನ ಈ ಕೋಟೆಗೆ ಬಹುದೊಡ್ಡ ಇತಿಹಾಸವಿದೆ. ಬಹುಮನಿ ಸಾಮ್ರಾಜ್ಯದ 9ನೇ ಅರಸನು 1429ರಲ್ಲಿ ತನ್ನ ರಾಜಧಾನಿಯನ್ನು ಗುಲ್ಬರ್ಗಾದಿಂದ ಬೀದರ್‌ಗೆ ವರ್ಗಾಯಿಸಿದನು. ರಾಜಧಾನಿಯನ್ನು ವೈರಿಗಳಿಂದ ರಕ್ಷಿಸಲು ಈ ಕೋಟೆ ಕಟ್ಟಿಸಿದನು. ಈ ಕೋಟೆಯು 35 ಕಿ.ಮೀ ಉದ್ದ ಹಾಗೂ 19 ಕಿ.ಮೀ ಅಗಲ ಸುತ್ತಳತೆ ಹೊಂದಿದೆ. ಮುಂದೆ ಈ ಕೋಟೆ 1658ರಲ್ಲಿ ಮೊಘಲರ ವಶಕ್ಕೆ ಸೇರಿತ್ತು. ನಂತರ ಹೈದ್ರಾಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟು, ಅಂತಿಮವಾಗಿ ನವೆಂಬರ್ 1, 1956ರಂದು ಅಧಿಕೃತವಾಗಿ ಮೈಸೂರು ರಾಜ್ಯಕ್ಕೆ ಒಳಪಟ್ಟಿತು.

ಸಿದ್ಧಾರ್ಥ ಪಿ.ವರ್ಮಾ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

SCROLL FOR NEXT